ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Monday 5 September, 2011

ನಮ್ಮಲ್ಲಿನ ಅಂತರ್ಗತ ಶಕ್ತಿಗಳು

ನಮ್ಮಲ್ಲಿ ಎಲ್ಲರೂ ನಾಯಕರಲ್ಲ. ಆದರೆ ಎಲ್ಲರಲ್ಲಿಯೂ ನಾಯಕರಾಗುವ, ಎಲ್ಲದರಲ್ಲಿಯೂ ಗೆಲುವು ಸಾಧಿಸಬೇಕೆನ್ನುವ ಅಧಮ್ಯ ಆಸೆ ಆಕಾಂಕ್ಷೆಗಳಿರುತ್ತವೆ. ಹಾಗಾದರೆ ಕೆಲವರೇ ನಾಯಕರಾಗುವುದೇಕೆ?, ಅಥವಾ ನಾವು ಎಲ್ಲದರಲ್ಲಿಯೂ ಗೆಲುವು ಸಾಧಿಸಲಾರೆವು ಏಕೆ ?

ಗೆಳೆಯರೇ ಬನ್ನಿ. ನಮ್ಮನ್ನು ಗೆಲುವಿನೆಡೆಗೆ ಕೊಂಡೊಯ್ಯಬಹುದಾದಂತಹ ಗುಣಗಳು ನಮ್ಮಲ್ಲಿ ಅಂತರ್ಗತವಾಗಿವೆ. ಅವುಗಳನ್ನು ನಾವು ನಮ್ಮ ಒತ್ತಡ, ಸಿಟ್ಟು ಸೆಡಕು, ಹಮ್ಮು ಬಿಗುಮಾನಗಳಿಂದಾಗಿ ಅಂತರ್ಯದಲ್ಲೇ ಅದುಮಿಟ್ಟುಕೊಂಡಿದ್ದೇವೆ. ಅವುಗಳನ್ನು ಹೊತೆಗೆದರೆ ಖಂಡಿತಾ ನಾವು ನಮ್ಮ ಪ್ರತಿ ಕಾರ್ಯದಲ್ಲಿಯೂ ಗೆಲುವು ಸಾಧಿಸ ಬಲ್ಲೆವು.
ಅವು ಯಾವುವು ಈಗ ನೋಡೋಣ.

ಹನ್ನೊಂದು ನಮ್ಮಲ್ಲಿನ ಅಂತರ್ಗತ ಶಕ್ತಿಗಳು ಹೀಗಿವೆ.


. ಕಾಮನ್ ಸೆನ್ಸ್: ತಾರ್ಕಿಕ ಆಲೋಚನೆ, ಒಂದು ಸಮಸ್ಯೆಯ ಪರಿಹಾರವನ್ನು ಗುರುತಿಸುವುದಕ್ಕಾಗಿ ಸಮಸ್ಯೆಯನ್ನು ಯಾವ ಕಡೆಯಿಂದ ಎದುರಿಸಬೇಕೆನ್ನುವುದೇ ಕಾಮನ್ ಸೆನ್ಸ್. ನಮ್ಮನ್ನು ಪ್ರಾಣಿಗಳಿಂದ ಭಿನ್ನವಾಗಿ ಮಾಡಿರುವುದೇನು? ನಮ್ಮ ಕೈ ಬೆರಳುಗಳು. ಕೈಗಳಿಂದಲೇ ಆಯುಧಗಳ ಸಹಾಯದಿಂದ ಕೂಡಾ ಬೇಟೆಯಾಡಬಹುದೆಂದು ಗ್ರಹಿಸಿದ ಕಾಮನ್ ಸೆನ್ಸ್ ನಿಂದ. ಅಲ್ಲಿಂದಲೇ ಮಾನವನ ಚಕ್ರಗಳಿಂದ ಮಂಗಳ ಲೋಕದವರೆಗಿನ ಯಾನವು ಆರಂಭವಾಗಿದ್ದು.

. ಪಾಜಿಟಿವ್ ಥಿಂಕಿಂಗ್: ವಾಸ್ತವವಾದ ರೂಢಿಗತ ಆಲೋಚನೆ. ನಿಮಗೆ ಒಂದು ಸಂದರ್ಶನಕ್ಕಾಗಿ ಮೆಜಿಸ್ಟಿಕ್ ನಿಂದ ಜಿಗಣಿಗೆ ಹೋಗಬೇಕಾಗಿದೆಯೆಂದುಕೊಳ್ಳಿ. ನಿಮ್ಮ ಆಲೋಚನೆಯೆಲ್ಲವೂ ಅಲ್ಲಿನ ಸಂದರ್ಶನಕ್ಕೆ ಕೇಳಬಹುದಾದ ಪ್ರಶ್ನೆಗಳಲ್ಲಿ ಅಥವಾ ಅಲ್ಲಿನ ಮುಂದಾಗಬಹುದಾದ ಫಲಿತಾಂಶದ ಆಲೋಚನೆಯಲ್ಲಿರುತ್ತೆಯೇ ವಿನಹಾ, ಅಲ್ಲಿಗೆ ತಲುಪುವಾಗ ಆಗಬಹುದಾದಂತಹ ಬೇರೆ ಆಕಸ್ಮಿಕಗಳ ಬಗೆಗೆ ಅಲ್ಲ. ವಾಸ್ತವವಾಗಿ ನಮ್ಮ ಸಂದರ್ಶನದ ಉತ್ತೀರ್ಣ ಅನುತ್ತೀರ್ಣತೆಗಳಷ್ಟೇ ನಡುವೆ ಸಂಭವಿಸಬಹುದಾದ ಆಕಸ್ಮಿಕಗಳ ಪಾಲೂ ಇರುತ್ತವೆಯಾದರೂ ಅದನ್ನು ನಾವು ಗಮನಿಸುವುದೇ ಇಲ್ಲ, ಅಂದರೆ ನಮಗೆ ನಮ್ಮ ಮೇಲಿನ ನಂಬಿಕೆಗಿಂತಲೂ ವಾಹನದ ಚಾಲಕನ ಮೇಲಿನ ನಂಬುಗೆಯೇ ಜಾಸ್ತಿಯಾಯಿತಲ್ಲ!!. ನಾವು ವಾಸ್ತವ ವಾಗಿ ರೂಢಿಗತ ಆಲೋಚನೆಯನ್ನೂ ಸೇರಿಸಿ ಆಲೋಚಿಸಿದರೆ ನಮಗೆ ಬರಬಹುದಾದ ಟೆನ್ಷನ್ ನಿಂದ ಮುಕ್ತಿ ಕಾಣಬಹುದು ನಮ್ಮ ಮೇಲಿನ ನಂಬುಗೆ ನಮಗೆ ಜಾಸ್ತಿಯಾಗಿ.

. ಏಕಾಗ್ರತೆ: ಮೆದುಳು ಒಂದು ಜನ ನಿಬಿಡ ಹೆದ್ದಾರಿಯಂತೆ , ಅದರಲ್ಲಿ ಸೈಕಲ್ ನಿಂದ ಹಿಡಿದು ಸಾಮಾನು ತುಂಬಿದ ಲಾರಿಯ ವರೆಗೆ ಹೋಲಿಸ ಬಲ್ಲಂತಹಾ ಆಲೋಚನೆಗಳು ದೊಡ್ದ ಶಬ್ದ ದೊಂದಿಗೆ ಅತ್ತಿತ್ತ ಪ್ರಯಾಣ ಮಾಡುತ್ತಿರುತ್ತವೆ. ಲೆಕ್ಕದ ತರಗತಿ ಮುಗಿದ ಕೂಡಲೇ ವಿಜ್ಞಾನ ವಿಷಯಕ್ಕೆ ಸನ್ನದ್ಧನಾಗಿರುವ ವಿಧ್ಯಾರ್ಥಿಯಂತೆ ನಮ್ಮ ಮನಸ್ಸಿನಲ್ಲೂ ಪ್ರತಿಯೊಂದೂ ವಿಷಯದ ಬಗೆಗೆ ಜೀವನದಲ್ಲಿ ಕಂಪಾರ್ಟಮೆಂಟಲೈಜೇಶನ್ ಮಾಡಿಟ್ಟುಕೊಳ್ಳಬೇಕು, ಇದನ್ನೇ ಕಲಿತುಕೊಳ್ಳಬೇಕಾಗಿರುವುದು.

. ಮಟ್ಟ ಸಾಮರ್ಥ್ಯ: ಗೊರ್ಬಚೇವ್, ವಿನೋದ್ ಕಾಂಬ್ಳಿ, ಧೀರೂಬಾಯ್ ಅಂಬಾನಿ, ಮೈಕೇಲ್ ಕಾಕ್ಸನ್, ಮತ್ತು ರಾಜೀವ್ ಗಾಂಧಿ, ಸೈಫ್ ಆಲಿಖಾನ್, ಅಜಯ ಜಡೇಜಾ ಇವರಿಬ್ಬರಲ್ಲಿ ವ್ಯತ್ಯಾಸ ಏನು ಗೊತ್ತಾ?
ಎರಡನೆಯವರು ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿ ಸ್ವ ಸಾಮರ್ಥ್ಯದಿಂದ ತಮ್ಮ ಮಟ್ಟ ಕಾಯ್ದುಕೊಂಡರೆ ಇನ್ನುಳಿದವರು ತನ್ನ ಸ್ವ ಸಾಮರ್ಥ್ಯದಿಂದಲೇ ಈಗಿನ ಮಟ್ಟಕೆ ಏರಿದವರು. ನಿರಂತರ ಪರಿಶ್ರಮದಿಂದಲೇ ಇವು ಸಾಧ್ಯ.ಅದಕ್ಕೇ ನಾವು ನಮ್ಮ ಮಟ್ಟ ಮತ್ತು ಸಾಮರ್ಥ್ಯವನ್ನು ಗೃಹಿಸಿಯೇ ನಮ್ಮ ಮುಂದಿನ ದಾರಿಯನ್ನೂ ಕಂಡುಕೊಂಡು ಕೃಮಿಸಬೇಕು.

. ಕನಸುಗಳು ಕನಸುಗಳೇ ಆದರೆ ಅವನ್ನು ನೆಸಸು ಮಾಡಬೇಕಾದರೆ ನಮ್ಮ ಗುರಿಯನ್ನು ಕಂಡು ಕೊಂಡು ಅದರತ್ತ ಸಾಗುವುದಕ್ಕೆ ನಮ್ಮ ಚಿಕ್ಕಂದಿನ ಓದಿದ ಕಥೆಗಳು ಕಥೆಗಳು ನಾವು ನೋಡುವ ಸಿನೇಮಾ ಮುಂತಾದವುಗಳು ನಮ್ಮಲ್ಲಿ ಪ್ರೇರಣೆಯಾಗಿಸಿಕೊಂಡು ಮುಂದುವರಿಯಬಹುದು.

. ನಾಯಕತ್ವದ ಲಕ್ಷಣಗಳು: ನಾನಿಲ್ಲಿ ಹೇಳುತ್ತಿರುವುದು ಗಾಂಧಿ ಸಾಯಿಬಾಬಾ ರಂತವರ ಎಲ್ಲರನ್ನೂ ಅನುಯಾಯಿ ಮಾಡಿಸಿಕೊಂಡಂತಹ ನಾಯಕತ್ವದ ಬಗೆಗಲ್ಲ. ಬದಲು ನಮ್ಮ ನಾಲ್ಕು ಜನ್ಬ ಸ್ನೇಹಿತರಲ್ಲಿಯೇ ಒಬ್ಬ ನಾಯಕನಿರುವನು, ನಮಗೆ ಇಷ್ಟವಿಲ್ಲದಿದ್ದರೂ ಅವನ ಇಷ್ಟದ ಸಿನೇಮಾಕ್ಕೆ ಅವನೊಂದಿಗೆ ಹೋಗುತ್ತೇವೆ, ಇನ್ನೊಮ್ಮೆ ನಿಮಗಿಷ್ಟವಾದ ಸಿನೇಮಾಕೆ ಅವನನ್ನು ಕೊಂಡು ಹೋಗುವ ಕ್ಷಮತ್ವ ನಿಮ್ಮಲ್ಲಿರಬೇಕು. ನಾಯಕನಾದವನಿಗೆ ಸಡಿಲ ಹಿಡಿತ ಎರಡೂ ಲಕ್ಷಣಗಳಿರಬೇಕು.

. ಪ್ರೇರಣೆ: ಪ್ರಮುಖ ವ್ಯಕ್ತಿಗಳ ಜೀವನಾ ವಿಧಾನದಿಂದ ನಾವು ಪ್ರೇರಣೆ ಹೊಂದ ಬೇಕು, ಅವರನ್ನೇ ದೇವರಂತೆ ಪೂಜಿಸುವುದಲ್ಲ. ಅವರಲ್ಲಿನ ಒಳ್ಳೆಯ ಅಂಶಗಳನ್ನೇ ತೆಗೆದುಕೊಂಡು ಅವರು ಮಾಡಿದ ತಪ್ಪನ್ನು ನಮಗೆ ಪಾಠವಾಗಿರಿಸಿಕೊಂಡು ನಮ್ಮ ಬದುಕಿನಲ್ಲಿ ಸೋಪಾನ ನಿರ್ಮಿಸಿಕೊಳಬೇಕು.

. ಅಂತರ್ಮುಖಲೋಚನೆ: ನಾವು ಯಾವ ಕ್ಷೇತ್ರದಲ್ಲಿ ಅಭಿವ್ರದ್ಧಿ ಸಾಧಿಸಬಲ್ಲೆವೋ ನಮ್ಮ ಲ್ಲಿಯ ಆಶಕ್ತಿಯನ್ನು ಸಾಧ್ಯವಾದಷ್ಟೂ ಬೇಗ ತಿಳಿದು ಕೊಳುವುದೇ ಅಂತರ್ಮುಖಾಲೋಚನೆ.

. ಭಾಷೆ, ಸಂಭಾಷಣೆ: ಮನುಷ್ಯರಿಗೆ ಪ್ರಾಣಿಗಳಿಗೆ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಭಾಷೆಯಾದರೆ ಮನುಷ್ಯರನ್ನೂ ಶ್ರೇಷ್ಠರನ್ನು ಬೇರ್ಪಡಿಸುವುದು ಸಂಭಾಷಣೆ ಭಾಷೆಯ ಮೇಲಿನ ಅಧಿಕಾರ.

೧೦. ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದು:

೧೧. ಶ್ರೇಷ್ಠತೆಯನ್ನು ಗುರುತಿಸುವುದು:
--------------------------------------------------------
ಬೆಳ್ಳಾಲ ಗೋಪೀನಾಥ ರಾವ್ ಅವರ ಭಾಷಣದ ಸಾರಾಂಶ

1 comment:

  1. ಸರ್‍,
    ವ್ಯಕ್ತಿಕ್ವ ವಿಕಸನಕ್ಕೆ ಬೇಕಾದಂತಹ ಟಿಪ್ಸ್‌ಗಳು ಸಂಗ್ರಹದಾಯಕವಾಗಿವೆ.

    ಧನ್ಯವಾದಗಳು.

    ReplyDelete