ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Friday 28 October, 2011

ಭಾಷಣ ಕಲೆ ಮತ್ತು ವಾಕ್ಪಥ ೨


ಭಾಷಣ ಕಲೆ ಮತ್ತು ವಾಕ್ಪಥ ......   ೨

ಸಭಾ ಕಂಪನವೇ...?


ಇನ್ನು ನೀವು ಹೆದರುವ ಕಾರಣವೇ ಇಲ್ಲ

ಕೆಲವೊಮ್ಮೆ ನಿಮ್ಮ ಈ ಕೊರತೆ ಇದಿರಿನವರು ಗುರುತಿಸದೇ ಇದ್ದರೂ ಇರಬಹುದು..
.
ನಿಮ್ಮ ವಿಷಯ ಅಷ್ಟು ಮಹತ್ವಾದ್ದಾಗಿರುವಾಗ....!!!!

ನೆನಪಿರಲಿ..!!

ಎಲ್ಲಾ ಪ್ರಭಾವಶಾಲೀ ಭಾಷಣಕಾರರೂ ಒಂದಲ್ಲಾ ಒಂದು ಸಾರಿ ( ಮೊದ ಮೊದಲು) ನಿಮ್ಮ ಈ ಅನುಭವವನ್ನು

ಅನುಭವಿಸಿಯೇ ಇರುತ್ತಾರೆ.

ಒಮ್ಮೆ ವಾಕ್ಪಥಕ್ಕೆ ಬನ್ನಿ,

ನಿಮ್ಮಲ್ಲಿನ ಆತ್ಮ ಸ್ಥೈರ್ಯವನ್ನು ಹೆಚ್ಚಿಸುವ ನಿಮ್ಮನ್ನು ಭಾಷಣಕ್ಕೆ ಅಣಿಗೊಳಿಸುವ ಧ್ಯೇಯವನ್ನೇ ಹೊತ್ತ ಸಂಸ್ಥೆಯಿದು.

ನೆನಪಿರಲಿ ಇಲ್ಲಿ ಮಾತ್ರ ನಿಮ್ಮ ತಪ್ಪಿಗೆ ಶಿಕ್ಷೆ ಇಲ್ಲ....

ಧೈರ್ಯದ ಅಭ್ಯಾಸ

ಆತ್ಮ ವಿಶ್ವಾಸಹೊಂದಿದಂತೆ ನಟಿಸಿ.... ಸಧ್ಯದಲ್ಲೇ ನೀವು ಆತ್ಮ ವಿಶ್ವಾಸ ಹೊಂದುವಿರಿ.....

ವಾಕ್ಪಥದಲ್ಲಿ ನೀವು ಹೆಚ್ಚು ಹೆಚ್ಚು ಆತ್ಮ ವಿಶ್ವಾಸ ಹೊಂದುವಿರಿ.ಯಾಕೆಂದರೆ ಇಲ್ಲಿ ನಿಮಗೆ ಹೆಜ್ಜೆ ಹೆಜ್ಜೆಗೆ ಪ್ರೋತ್ಸಾಹ ಮತ್ತು

ಉತ್ತೇಜನ ಕೊಡುವವರಿದ್ದಾರೆ.

ಪರಿಶೀಲನಾತ್ಮಕ ಗುಂಪಿನೆದುರು ನಿಂತು ಮಾತನಾಡುತ್ತಿರುವಾಗ ಹಲವರಿಗೆ ಇರಿಸು ಮುರಿಸಾಗಬಹುದು, ಅಥವಾ ಒಂದು

ಜವಾಬ್ದಾರಿಯ, ಅಪೇಕ್ಷೆಯ,ಮತ್ತು ಸಂದಭದ ಭಾರದ ಅನುಭವ ವೇಧ್ಯವಾಗಬಹುದು. ಇದೇ ಭಾವ ಮುಂದುವರಿದರೆ ಸಭಾ

ಕಂಪನದ ಅನುಭವಕ್ಕೆ ತಿರುಗುವುದು.



ಮುಂದಿನ ಸಲಕ್ಕೆ.....

ಕನ್ನಡ ಓದುವ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ.... ವಾಕ್ಪಥದ ಗುರುತರ ಹೆಜ್ಜೆ


 ಕನ್ನಡ ಓದುವ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ.... ವಾಕ್ಪಥದ ಗುರುತರ ಹೆಜ್ಜೆ
 
ಸೃಷ್ಟಿ ಕಲಾಲಯ ಸಂಸ್ಥೆ ಕಳೆದ ೩ ವರ್ಷಗಳಿಂದ ಪುಸ್ತಕ ಪರಿಷೆ ನಡೆಸುತ್ತಿದ್ದು ಇದೀಗ ನಾಲ್ಕನೆಯ ಪರಿಷೆಗೆ ಸಜ್ಜಾಗುತ್ತಿದೆ.ಬಂದವರೆಲ್ಲರೂ ಒಂದು ಪುಸ್ತಕವನ್ನು ಉಚಿತವಾಗಿ ಕೊಂಡೊಯ್ಯಬಹುದು. ನಮ್ಮ ಪುಸ್ತಕಗಳನ್ನು ಇತರರು ಮತ್ತು ಅವರ ಪುಸ್ತಕಗಳನ್ನು ನಾವು ಓದುವ ಮೂಲಕ ಇಬ್ಬರೂ ಪುಸ್ತಕ ಸಂಬಂಧಿಗಳಾಗುವ ಅವಕಾಶ ಸಿಗಲಿದೆ.

 
ಈಸಾರಿ ತಮ್ಮ ಮಹತ್ತರ ಯೋಜನೆಯೊಂದರಲ್ಲಿ ವಾಕ್ಪಥವನ್ನು ಸಕ್ರಿಯವಾಗಿ ಪಾಲುಗೊಳ್ಳಲು ಅವಕಾಶ ಕಲ್ಪಿಸಿ ಉಜ್ವಲ ಭವಿಷ್ಯವನ್ನೂ ಗುರುತರ ಜವಾಬ್ದಾರಿಯನ್ನೂ ಪಡೆದ ಇದೇ ಅಕ್ಟೋಬರ್ ಮೂವತ್ತರಂದು ಸೃಷ್ಟಿ ವೆಂಚರ್ಸ್ ನಡೆಸುತ್ತಿರುವ ಪುಸ್ತಕ ಪರಿಷೆಯಲ್ಲಿ ವಾಕ್ಪಥದ ಬ್ಯಾನರಿನಡಿಯಲ್ಲಿ ಇಡೀ "ಪುಸ್ತಕ ಪರಿಷೆ" ಕಾರ್ಯಕ್ರಮದ ಮೇಲ್ವಿಚಾರಣೆಯ ಹೊಣೆ, ಅದೂ ಇದಕ್ಕೆಂದೇ ವಿಷೇಷವಾಗಿ ಆಯೋಜಿಸಲ್ಪಟ್ಟ ಮಂಚದಲ್ಲಿ ಅದೂ ಬೆಳಗ್ಗೆಯಿಂದ ಸಂಜೆಯವರೆಗೆ ಇಡೀ ದಿನ ." ಇವೆಂಟ್ ಮೆನೇಜ್ಮೆಂಟ್!!!" ಇದಲ್ಲವೇ ವಾಕ್ಪಥದ ಮೇಲಿನ ಭರವಸೆ ಮತ್ತು ಪ್ರೀತಿ. .
 
ವಾಕ್ಪಥ - ೮ ನೇ ಹೆಜ್ಜೆ.
ವಾಕ್ಪಥದ ಎಂಟನೆಯ ಹೆಜ್ಜೆಯು,೩೦/೧೦/೨೦೧೧ ,ಭಾನುವಾರ ಬೆಳಿಗ್ಗೆ ೧೨.೦೦ ಕ್ಕೆಮೂಡಿ ಬರಲಿದೆ.
ಸ್ಥಳ:  ವಾಲಿಬಾಲ್ ಸರ್ಕಲ್, ಪೋಲೀಸ್ ಸ್ಟೇಶನ್ ಸಮೀಪ ,ಬಸವನಗುಡಿ, ಬೆ೦ಗಳೂರು.
ಕಾರ್ಯಕ್ರಮದ ವಿವರ:
ಗೋಷ್ಠಿಯ ನಿರ್ವಹಣೆ: ಬೆಳ್ಳಾಲ ಗೋಪೀನಾಥ ರಾವ್
ಗೋಷ್ಠಿಯ ಆರ೦ಭ:  ಬೆಳಿಗ್ಗೆ ೧೨-೦೦ಕ್ಕೆ
ಪ್ರಸ್ತಾವನೆ, ಮುನ್ನುಡಿ, ಗೋಷ್ಠಿಯ ಜವಾಬ್ಧಾರಿಗಳ ವಿತರಣೆ, ಭಾಷಣಕಾರರ ಪರಿಚಯ ಇತ್ಯಾದಿಗಳನ್ನು ಬೆಳ್ಳಾಲ ಗೋಪೀನಾಥ ರಾವ್ ತಿಳಿಸುತ್ತಾರೆ.
 
ಈ ಸಾರಿಯ ವಿಶೇಷ ವೆಂದರೆ ಪ್ರತಿ ಭಾಷಣಕಾರರಿಗೆ 10 ನಿಮಿಷಗಳ ಸಮಯವಿರುತ್ತದೆ. 
 
 ಮೊದಲನೆಯ ಭಾಷಣ:  ಶ್ರೀ ಹರೀಶ್ ಆತ್ರೇಯ  ವಿಷಯ: ಓದಿನಿಂದ ವ್ಯಕ್ತಿ ಮತ್ತು ವ್ಯಕ್ತಿತ್ವದ ವಿಕಾಸ
ಎರಡನೆಯ ಭಾಷಣ: ಶ್ರೀ ಹರ್ಷ ಸಾಲಿಮಠ್    ವಿಷಯ: ಕನ್ನಡ ಓದುಗರ ಕೊರತೆಯನ್ನು ಎದುರಿಸುತ್ತಿದೆಯೇ?
 
ವಾಕ್ಪಥಿಕರ ಭಾಷಣದ ನ೦ತರ ವಿಮರ್ಶಕರಾಗಿ ಕೆಳಕ೦ಡವರು, ತಪ್ಪು ಒಪ್ಪುಗಳನ್ನು ತಿದ್ದುವ, ಎಲ್ಲಿ ಏನು ಸರಿ ಹೋದರೆ ಭಾಷಣ ಮತ್ತಷ್ಟು ಕಳೆ ಕಟ್ಟುತ್ತಿತ್ತು ಎನ್ನುವ ಮಹತ್ವದ ವಿಚಾರಗಳನ್ನು ತಿಳಿಸಲಿದ್ದಾರೆ.
ಮೊದಲನೆಯ ಭಾಷಣದ ವಿಮರ್ಶೆ: ಶ್ರೀ ಹೊಳೆನರಸೀಪುರ ಮಂಜುನಾಥ
ಎರಡನೆಯ ಭಾಷಣದ ವಿಮರ್ಶೆ:   ಶ್ರೀ ಪ್ರಭು
 
ಈ ಗೋಷ್ಠಿಯ ಸಮಯಪಾಲಕರಾಗಿ ಶ್ರೀ ರಾಮ ಮೋಹನ್ ಕಾರ್ಯ ನಿರ್ವಹಿಸಲಿದ್ದಾರೆ.
ವ್ಯಾಕರಣ ಶುದ್ಧಿ ಕಾರ್ಯವನ್ನು ಶ್ರೀ  ಜಯಂತ್ ರಾಮಾಚಾರ್. ನಿರ್ವಹಿಸಲಿದ್ದಾರೆ.
ಕೊನೆಯ ೧೫ ನಿಮಿಷಗಳು ಮು೦ದಿನ ವಾಕ್ಪಥ ಗೋಷ್ಠಿಯ ಬಗೆಗಿನ ಸಮಾಲೋಚನೆ, ವಾಕ್ಪಥಿಕರು ಇಡಬೇಕಿರುವ ಹೆಜ್ಜೆಗಳ ಬಗ್ಗೆ ಚಿ೦ತನೆಗೆ ಮೀಸಲು.
ಎಲ್ಲಾ ಆಸಕ್ತರೂ ಈ ಗೋಷ್ಠಿಯಲ್ಲಿ ಪಾಲ್ಗೊಳ್ಳಬಹುದಾಗಿದೆ.  ನೀವೂ ಬನ್ನಿ, ನಿಮ್ಮವರನ್ನೂ ಕರೆ ತನ್ನಿ, ನಿಮ್ಮ ಬರುವಿಕೆಯನ್ನು ಎದುರು ನೋಡುವ -
ವಾಕ್ಪಥ ತ೦ಡ.
ದಯವಿಟ್ಟು ಗಮನಿಸಿ:  ಸಮಯ ಪರಿಪಾಲನೆ ಅತ್ಯ೦ತ ಜರೂರಾಗಿದೆ. 
ಕಾಯುತ್ತಿದ್ದೇವೆ, ತಮ್ಮೆಲ್ಲರ ಬರವಿಗಾಗಿ ಪ್ರೀತಿಯಿಂದ...
ಬರುತ್ತೀರಲ್ಲವೇ

ಗಟ್ಟಿಯಾದ ವಾಕ್ಪಥದಲ್ಲಿ ವಾಕ್ಪಥಿಕರ ಜಬ್ಬರದಸ್ತ್ ಏಳನೆಯ ಹೆಜ್ಜೆ



ಗಟ್ಟಿಯಾದ ವಾಕ್ಪಥದಲ್ಲಿ ವಾಕ್ಪಥಿಕರ ಜಬ್ಬರದಸ್ತ್ ಏಳನೆಯ ಹೆಜ್ಜೆ
ಹೌದು ಎಂದಿನಂತೆ ವಾಕ್ಪಥಿಕರ ಏಳನೆಯ ಸುಂದರ ಗೋಷ್ಟಿ ಸೃಷ್ಟಿ ವೆಂಚರ್ಸ್ ನಲ್ಲಿ ಸಪ್ಟೆಂಬರ್ ನ ೨೫ ನೆಯ ತಾರೀಖು ತನ್ನ ನಿಶ್ಚಿತಾವಧಿಯಲ್ಲಿ ಗುಂಪಿನಲ್ಲಿ ವಿಶೇಷವಾಗಿ ನೆರೆದು ರಂಜಿಸಿತು.

ಅದರ ವೈವಿಧ್ಯಮಯ ವಿಷೇಷತೆಯನ್ನು ನೀವೂ ( ಇದನ್ನು ಓದುತ್ತಿರುವ, ಹಾಗೂ ಸವಿಯುತ್ತಿರುವ ನೀವೆಲ್ಲ ಪ್ರೇಕ್ಷಕರೂ ಅಲ್ಲಗಳೆಯಲಾರಿರಿ) ಅದಕ್ಕಾಗಿಯೇ ನನ್ನ ವಿಟೋ ಪವರ್ ಉಪಯೋಗಿಸಿ ಪ್ರಭು ಅವರಿಂದ ಇಂದಿನ ವಿಷಯ ವರದಿಯನ್ನು ಬರೆಯಲು ಅನುಮತಿ ಪಡೆದಿದ್ದೆ.
ಇಂದಿನ ಈ ಏಳನೆಯ ಹೆಜ್ಜೆಯ ವಿಶೇಷತೆಯನ್ನು ಬಣ್ಣಿಸಲು ಪದಗಳಿಲ್ಲ.ಕಳೆದ ವರ್ಷದ ಮಾರ್ಚಿ ಎಪ್ರಿಲ್ ನಲ್ಲಿ ಶೈಶವಾವಸ್ಥೆಯಲ್ಲಿ ಜನ್ಮ ತಾಳಿದ ಈ ನಮ್ಮ ನಿಮ್ಮೆಲ್ಲರ ವಾಕ್ಪಥದ ಕೂಸು ತನ್ನದೇ ವೈವಿಧ್ಯತೆಗಳಿಂದ ಇಷ್ಟು ಬಲಗೊಳ್ಳಬಹುದು ಎಂಬ ಊಹೆ ನನಗಂತೂ ಖಂಡಿತಾ ಇರಲಿಲ್ಲ.ಯಾವುದೇ ಕೂಟ ಅಥವಾ ಗುಂಪು ಜನ್ಮ ತಾಳಲು ನಿರ್ಧಿಷ್ಟ ಅವಧಿ ಅಥವಾ ಹೂಟಗಳಿಲ್ಲ. ಆದರೆ ಅದು ತನ್ನ ಹೆಜ್ಜೆಯನ್ನು ಗುರಿಯತ್ತ ಕೇಂದ್ರೀಕರಿಸಿ ಅದೇ ದಾರಿಯಲ್ಲಿ ಕ್ರಮಿಸಿ ನೆರೆಯಲು ಅಥವಾ ಬೆಳೆಯಲು ಮಾನಸಿಕ ದೄಢತೆ ಮತ್ತು ಹುಮ್ಮಸ್ಸು ಮತ್ತು ಅದೇ ದಾರಿಯಲ್ಲಿ ನಡೆಸಲು ಹೊಂದಾಣಿತ ಯೋಜಿತ ಮನಸ್ಸೂ , ಪ್ರೇರಣೆ ಕೊಡುವ, ವ್ಯವಸ್ಥಿತ ಸಂಚಾಲನೆ ಮಾಡುವ ವ್ಯಕ್ತಿ ಅಥವಾ ಗುಂಪಿನ ಇವೆಲ್ಲಕ್ಕಿಂತ ಹೆಚ್ಚು ಈ ಅಂದದ ವಾಕ್ಪಥವನ್ನು ಅಚ್ಚುಕಟ್ಟಾಗಿ ನಿಯಮಿತವಾಗಿ ನಡೆಸಲು ಜಾಗವೂ ಬೇಕು, ಪ್ರೋತ್ಸಾಹವೂ ಬೇಕು. ಇವೆಲ್ಲವನ್ನೂ ನಿಯಮಿತವಾಗಿ ಕಲ್ಪಿಸಿ ನಡೆಸಿ ಮುನ್ನುಗ್ಗುತ್ತಿರುವ ವಾಕ್ಪಥ ದ ತಂಡಕ್ಕೆ ಸೃಷ್ಟಿ ವೆಂಚರ್ಸ್ ಮತ್ತು ಸಂಪದಿಗರೆಲ್ಲರ ಸಹಕಾರ ಬಣ್ಣನೆಗೂ ಮೀರಿದ್ದು.
ಇರಲಿ ಇವತ್ತಿನ ವಿಶೇಷವೆಂದಿರಾ?
ಅದಕ್ಕೇ ಬರುತ್ತಿದ್ದೇನೆ , ಒಂದೆರಡಲ್ಲ ಮರಾಯರೇ, ಮೊದಲನೆಯದು ಸಂಪದಿಗ ಮಿತ್ರರಾದ ಶ್ರೀಯುತ ಸತ್ಯ ಚರಣ ಮತ್ತು ಹರ್ಷ ಸಾಲಿಮಠ್ ರವರು ಸಕ್ರಿಯವಾಗಿ ಭಾಗವಹಿಸಿದ್ದು. ಎರಡನೆಯ ವಿಶೇಷ ಶಾಸ್ತ್ರೀಯವಾಗಿ ಬರುತ್ತಿರುವ ಆಶು ಭಾಷಣ ಬಿಟ್ಟು ಕೊಟ್ಟು ವಾಕ್ಪಥಿಕರೆಲ್ಲರ ಪಾತ್ರದ ಹಾಗೂ ಮುಂದಿನ ವಾಕ್ಪಥದ ಪಥವನ್ನು ಯೋಜಿಸುವ ಗುರುತರ ಯೋಚನೆಯನ್ನು ಮಂಡಿಸಲು ಕಲ್ಪಿಸಿದ್ದು. ನೆರೆದವರು ಸ್ವಲ್ಪವಾದರೂ ಎಲ್ಲರ ಆಶಯ ಯೋಜನೆಯ ಯೋಚನೆ ಯನ್ನು ಬಣ್ಣಿಸುವ ಕಾರ್ಯದಲ್ಲಿನ ತಲ್ಲೀನತೆ ಹಾಗೂ ಉತ್ಸಾಹ ನಿಜವಾಗಿಯೂ ಮುಂದಿನ ದಿನಗಳಲ್ಲಿನ ವಾಕ್ಪಥದ ನಾವೀನ್ಯ ಹಾಗೂ ರೂಪು ರೇಷೆಗೆ ಸ್ಪಷ್ಟ ಆಕಾರವನ್ನೇ ನೀಡಿತ್ತು.ಎಲ್ಲದಕ್ಕೂ ಕುಂದಣವಿಟ್ಟಂತೆ ನಮ್ಮೆಲ್ಲಾ ಆಸೆ ಆಕಾಂಕ್ಷೆಗಳಿಗೆ ನೀರೆರೆದು ಪೋಷಿಸುತ್ತಿರುವ ನಾಗರಾಜ ನಾವುಂದರು ಈಸಾರಿ ತಮ್ಮ ಮಹತ್ತರ ಯೋಜನೆಯೊಂದರಲ್ಲಿ ವಾಕ್ಪಥವನ್ನು ಸಕ್ರಿಯವಾಗಿ ಪಾಲುಗೊಳ್ಳಲು ಅವಕಾಶ ಕಲ್ಪಿಸಿ ಉಜ್ವಲ ಭವಿಷ್ಯವನ್ನೂ ಗುರುತರ ಜವಾಬ್ದಾರಿಯನ್ನೂ ಹೊರಿಸಿದರು. ಇದೇ ಅಕ್ಟೋಬರ್ ಮೂವತ್ತರಂದು ಸೃಷ್ಟಿ ವೆಂಚರ್ಸ್ ನಡೆಸುತ್ತಿರುವ ಪುಸ್ತಕ ಪರಿಷೆಯಲ್ಲಿ ವಾಕ್ಪಥದ ಬ್ಯಾನರಿನಡಿಯಲ್ಲಿ ಇಡೀ "ಪುಸ್ತಕ ಪರಿಷೆ" ಕಾರ್ಯಕ್ರಮದ ಮೇಲ್ವಿಚಾರಣೆಯ ಹೊಣೆ, ಅದೂ ಇದಕ್ಕೆಂದೇ ವಿಷೇಷವಾಗಿ ಆಯೋಜಿಸಲ್ಪಟ್ಟ ಮಂಚದಲ್ಲಿ ಅದೂ ಬೆಳಗ್ಗೆಯಿಂದ ಸಂಜೆಯವರೆಗೆ ಇಡೀ ದಿನ ." ಇವೆಂಟ್ ಮೆನೇಜ್ಮೆಂಟ್!!!" ಇದಲ್ಲವೇ ವಾಕ್ಪಥದ ಮೇಲಿನ ಭರವಸೆ ಮತ್ತು ಪ್ರೀತಿ. .
ಇವತ್ತಿನ ಭಾಷಣಗಳಲ್ಲಿ ಮೊದಲಿಗರಾದ ಸಂಪದದ ಹಾಸ್ಯ ಲೇಖಕರಾದ "ಗೋಪಾಲ್ಜೀಯವರು" ಇಂದಿನ ಮದುವೆ ಮತ್ತು ಅಂದಿನ ಮದುವೆಯ ಬಗ್ಗೆ ತಮ್ಮದೇ ಹಾಸ್ಯ ಶೈಲಿಯಲ್ಲಿ ನಿರರ್ಗಳವಾಗಿ ಮೂದಲಿಸಿದರು. ಅವರ ಮಾತು ನಾತಿ ಚರಾಮಿಯಿಂದ ಹೊರಟು ಇಂದಿನ ಕೂಡಿಬಾಳಿದರೆ....( ಲಿವಿಂಗ್ ಟುಗೆದರ್) ಎಂಬಲ್ಲಿಗೂ ಬಂದು.... ಅವರೇ ತಮ್ಮ ಮಾತಿನಲ್ಲೇ ಈಗಿನವರಿಗೆ "ಲಿವಿಂಗ್ ಟುಗೆದರ್" ಎಂಬ ಶಬ್ದದ ಅರ್ಥ ವೂ ಗೊತ್ತಿಲ್ಲದೇ ಲಿವಿಂಗ್ ಟುಗೆದರ್ ಮಾಡುತ್ತಿದ್ದಾರೆ ಎನ್ನುವಾಗ ನನಗೇ ಸಂಶಯ ಬಂತು. ಅಂದರೆ ಈ ವಿಷಯ ಇವರಿಗಂತೂ ಸರಿಯಾಗಿಯೇ ತಿಳಿದಿರಬಹುದು ಅಂತ.
ಎರಡನೆಯ ಭಾಷಣ ಹರೀಶ್ ಅತ್ರೇಯ ರಿಂದ ಇಂದಿನ ಯುಗದಲ್ಲಿ ಭಗತ್ ಸಿಂಗ್ ನ ನಿಲುಮೆಯನ್ನು ಪ್ರತಿ ಪಾದಿಸುತ್ತಾ, ಆದರ್ಶ ವಾದಿಯಾಗಲು ಅಂದಿನ ಅಂಗ್ರೇಜೀ ಸರಕಾರದ ಅಧಿಕಾರಸ್ಥರ ಅತೀ ಕ್ರೂರ ನಿಲುವು ದಾರುಣವಾದ ಸಾಮಾನ್ಯರ ಬದುಕು ಕಾರಣವಾಗಿತ್ತು ಮತ್ತು ಈಗಿನ ನಮ್ಮ ಕಂಟಕಕಾರಿ ನಿರ್ಲಿಪ್ತ ನಿಲುವು ಬದಲಾಗ ಬೇಕಿರುವ ಔಚಿತ್ಯವನ್ನೂ ತನ್ನದೇ ಆದ ಆಪ್ತ ವೈಚಾರಿಕತೆಯುಕ್ತ ಮಾತುಗಳಲ್ಲಿ ವಿವರಿಸಿದರು.
ಮೂರನೆಯ ಭಾಷಣ ನಮ್ಮ ನಿಮ್ಮೆಲ್ಲರ ಸಂಪದಿಗ ಸ್ನೇಹೀ ತರುಣ ಸುಂದರ ಉತ್ಸಾಹೀ ಹರ್ಷ ಸಾಲಿಮಠರವರದ್ದು . ಇವರು ತೆಗೆದು ಕೊಂಡ ವಿಷಯ ಇಂದಿನ ಭಾರತದಲ್ಲಿ ಗಾಂಧೀಜಿಯ ತತ್ವ. ಅವರ ಭಾಷಣ ನಿಜವಾಗಿಯೂ ಆಕರ್ಷಕವಾಗಿತ್ತು. ಕೃಷ್ಣ, ಚಾಣಕ್ಯ, ಬಸವಣ್ಣನವರ ದೃಷ್ಟಿ ಕೋನಗಳನ್ನು ಇಂದಿನ ಭಾರತದ ವಿದ್ಯಮಾನಗಳಿಗೆ ನಮ್ಮ ನಡೆನುಡಿಯನ್ನು ಸರಳೀಕರಿಸಿ ಕೊಂಡು ಅಳವಡಿಸಿಕೊಂಡಾಗ ಸರಳತೆಯತ್ತ ಪ್ರತಿಯೋರ್ವರೂ ಹೆಜ್ಜೆ ಹಾಕಬಹುದೆಂಬುದನ್ನು ವಿವರಿಸುತ್ತಾ ತನ್ನದೇ ದೃಷ್ಟಿಯಲ್ಲಿ ಪ್ರತಿಪಾದಿಸಿದರು.
ನಂತರದಲ್ಲಿ ಶ್ರೀಯುತ ನಾಗರಾಜ ನಾವುಂದದವರು ಮಾತನಾಡುತ್ತಾ ತಮ್ಮದೇ ಆದ ಪುಸ್ತಕ ಪರಿಷೆಯ ನಾಲ್ಕನೆಯ ಸಡಗರದಲ್ಲಿ ವಾಕ್ಪಥ ಹೇಗೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಸಂಭ್ರಮಿಸ ಬಹುದೆಂಬುದನ್ನು ವಿವರಿಸಿ ವಾಕ್ಪಥದ ಮೇಲಿನ ಅವರ ನಂಬಿಕೆಯನ್ನು ಧೃಢೀಕರಿಸಿದರು.
ಇವತ್ತಿನ ಹೆಜ್ಜೆಯಲ್ಲಿ ಅತ್ಯಂತ ಖುಷಿ ಕೊಟ್ಟಿದ್ದು ವಾಕ್ಪಥಿಕರೆಲ್ಲರ ಮನಸಾ ವಾಚಾ ಭಾಗವಹಿಸುವಿಕೆ ಮತ್ತು ಪ್ರತಿಯೊಬ್ಬರ ಮನದಲ್ಲಿ ವಾಕ್ಪಥದ ಬಗೆಗೆ ತನ್ನದೇ ದೃಷ್ಟಿ ಕೋನ ಹಾಗೂ ವಾಕ್ಪಥದ ಮುಂದಿನ ಹೆಜ್ಜೆಗಳ ಬೆಳವಣಿಗೆಯ ಬಗೆಗೆ ಹೊಂದಿರುವ ಮಮಕಾರ, ಕಾಳಜಿ ಅತ್ಮೀಯತಾ ಭಾವನೆಗಳ ಮುಕ್ತ ಧೋರಣೆ ಹೊಂದಿರುವುದೂ. ಈ ಬಗೆಗೆ ಮೊದಲಿನಿಂದಲೂ ಸಕ್ರಿಯವಾಗಿ ಭಾಗವಹಿಸುತ್ತಿರುವ ವಾಕ್ಪಥಿಕರಾಗಲೀ ಇಂದೇ ಸೇರಿ ಭಾಗವಹಿಸಿ ಈ ಗುಂಪಿನೊಂದಿಗೆ ಮೇಳವಿಸಿಕೊಂಡ ಸತ್ಯ ಚರಣರ ಆಪ್ತ ಗೆಳೆಯ ದಿಲೀಪ್ ಎಸ್ ಎಮ್ ಆಗಲೀ , ಮೊದಲನೆಯದಾಗಿ ಭಾಗವಹಿಸಿ ತನ್ನ ದಿಟ್ಟ ನೇರ ಆಕರ್ಷಣಕಾರೀ ಭಾಶಣದಿಂದ ಎಲ್ಲರನ್ನೂ ಆಕರ್ಷಿಸಿದ ಸಂಪದಿಗ ಸ್ನೇಹಿ ಹರ್ಷ ಸಾಲಿಮಠ್ ಆಗಲೀ ತನ್ನೆಲ್ಲಾ ಸ್ವಂತ ಕೆಲಸವನ್ನು ಬದಿಗೊತ್ತಿ ಇವತ್ತಿನ ಗೋಷ್ಟಿಯಲ್ಲಿ ಭಾಗವಹಿಸಿ ತನ್ನ ಅಮೂಲ್ಯ ಸಲಹೆ ಸಹಕಾರವನ್ನಿತ್ತ ಶ್ರೀಯುತ ಸತ್ಯ ಚರಣರಾಗಲೀ, ಭಗತ್ ಸಿಂಗ್ ರ ಜೀವನದ ಹೃದಯ ಸ್ಪರ್ಷೀ ಘಟನೆಗಳನ್ನು ತನ್ನದೇ ವಿಶಿಷ್ಟ ಸುಂದರ ಆಕರ್ಷಕ ಶೈಲಿಯಲ್ಲಿ ವಿವರಿಸುತ್ತಾ ಅದ್ಭುತ ಲೋಕದಲ್ಲಿ ಕೊಂಡೊಯ್ದ ನಮ್ಮ ನಿಮ್ಮೆಲ್ಲರ ಕಣ್ಮಣಿ ಆತ್ರೇಯರಾಗಲೀ , ಮೂಲಾಧಾರವಾಗಿದ್ದು ಪ್ರತಿ ಸಲ ತಮ್ಮ ಅಮೂಲ್ಯ ಸಲಹೆ ಸಹಕಾರಗಳನ್ನಿತ್ತು ಆಕರ್ಷಕ ಬ್ಯಾನರ್ ಸೃಷ್ಟಿಸಿದ ರಘು ಅವರಾಗಲೀ , ಇವತ್ತಿನ ಈ ವಿಶೇಷ ಗೋಷ್ಟಿಯನ್ನು ಉನ್ನತ ಸ್ಥಾನದಲ್ಲಿಡಲು ಶ್ರಮಿಸಿದ ಜಯಂತ್ ಆಗಲೀ , ಇವತ್ತಿನ ಗೋಷ್ಟಿಯ ಮುಕ್ತ ಯೋಚನೆಗಳಿಗೆ ಯೋಜಿಸಿದ ವಾಕ್ಪಥದ ಸೃಷ್ಟಿ ಕರ್ತ ಶ್ರೀಯುತ ಪ್ರಭು ಆಗಲೀ, ತನ್ನ ವಿಶಿಷ್ಟ ಸಮ್ಮೋಹನಾ ಕಂಠದಿಂದ ಸಭಿಕರನ್ನು ಆಕರ್ಷಿಸೋ ವಾಕ್ಪತದ ಅವಿಭಾಜ್ಯ ಅಂಗವಾದ ಹೊಳೆನರಸೀಪುರದ ಮಂಜುವಾಗಲೀ, ತನ್ನದೇ ವಿಶಿಷ್ಟ ಛಾಪು ಹೊಂದಿರುವ ಶ್ರೀಯುತ ರಾಮ ಮೋಹನ್ ರಾಗಲೀ, ಹಿರಿಯ ಸಹೃದಯಿ ಎಮ್ ಎನ್ ಎಸ್ ರಾವ್ ಅವರಾಗಲೀ ಎಲ್ಲರ ಉತ್ಸಾಹ ವರ್ಣನಾತೀತ. ಈ ಉತ್ಸಾಹ ಪ್ರೋತ್ಸಾಹ ಸಲಹೆ ಸಹಕಾರಗಳಿಂದ ಖಂಡಿತವಾಗಿಯೂ ವಾಕ್ಪಥದ ಮುಂದಿನ ಹೆಜ್ಜೆಗಳು ಗಮ್ಯದತ್ತ ದಾಪುಗಾಲು ಹಾಕುವುದರಲ್ಲಿ ಸಂಶಯವೇ ಇಲ್ಲ.

ಇದಕ್ಕೆಂದೇ ಮುಂದಿನ ಭಾನುವಾರ ಸೃಷ್ಟಿ ವೆಂಚರ್ಸ್ ನಲ್ಲಿ ವಾಕ್ಪಥ ತಂಡವು ವಿಷೇಷ ಗೋಷ್ಟಿಯೊಂದನ್ನು ಹೊಮ್ಮಿಕೊಂಡಿದೆ. ವಾಕ್ಪಥ ದ ಹೊಣೆಗಾರಿಕೆಯನ್ನು ಶ್ರೀಯುತ ನಾಗರಾಜರ ನಂಬಿಕೆಯನ್ನು ಸಮರ್ಥವಾಗಿ ನಿರ್ವಹಿಸಲು ಯೋಜನೆಯನ್ನು ರೂಪಿಸಲು.
ಬರುತ್ತೀರಲ್ಲವೇ..?
ನಿಮ್ಮೆಲ್ಲರ ಅನಿಸಿಕೆಗಳಿಗೆ ಸಲಹೆಗಳಿಗೆ ಮುಕ್ತ ಸ್ವಾಗತ.
ಬರೆಯುತ್ತಿರಿ.
ಮುಂಬರುವ ದಿನಗಳಲ್ಲಿ ವಾಕ್ಪಥವು ಸರ್ವಾಂಗ ಸುಂದರವಾಗಿ ಇನ್ನೂ ಹೆಚ್ಚು ಗುರುತರ ಜವಾಬ್ದಾರಿಯನ್ನು ಹೊರಲು ಶಕ್ತವಾಗಲು ಸಂಪದಿಗರೆಲ್ಲರ ಸಲಹೆ ಸಹಕಾರ ಹಾಗೂ ಪ್ರೋತ್ಸಾಹವೂ ಅತ್ಯಗತ್ಯ.
ನೀಡುವಿರಲ್ಲವೇ....?
ಇಂತೀ ನಿಮ್ಮೆಲ್ಲರ ನೆಚ್ಚಿನ ವಾಕ್ಪಥ ತಂಡ


ದೃಶ್ಯಾವಳಿಗೆ ಇಲ್ಲಿ ಕುಟುಕಿ

೧.  ಜಯಂತರ ಆರಂಭಿಕ ವಿವರ                  http://youtu.be/Ks2D...
೨. ಗೋಪಾಲ್ಜೀ ಯವರ ಮದುವೆಯ ಮಾತುಕಥೆ  http://youtu.be/17Ve...
೩. ಹರೀಶ ಆತ್ರೇಯರ ಭಗತ್ ಸಿಂಘ್             http://youtu.be/9Fp4...
೪. ಹರ್ಷ ಸಾಲಿಮಠ್ ಅವರ ಆಕರ್ಷಕ ಶೈಲಿ     http://youtu.be/jB99...
೫. ರಘು ಅವರ ಮೊನಚು ವ್ಯಾಕರಣ ವಿಮರ್ಶೆ    http://youtu.be/cFue...
೫.  ಭಾಷಣಗಳ ವಿಮರ್ಶೆ: http://youtu.be/cFue...
೬.  ಅನಿಸಿಕೆಗಳು:          http://youtu.be/iDNZ... http://youtu.be/6yc9...

Friday 21 October, 2011

ನಮ್ಮ ವಾಕ್ಪಥದ ಉದ್ದೇಶ ಮತ್ತು ಆಶಯಗಳು

ವಾಕ್ಪಥ ತ೦ಡ ಹುಟ್ಟಿಕೊ೦ಡದ್ದೇ ಭಾಷಣಕಲೆಯನ್ನು ಪ್ರೋತ್ಸಾಹಿಸಲೆ೦ದು. ನಮ್ಮೊಳಗಿನ ಮಾತನಾಡುವ ಕಲೆಯನ್ನು ಸರಿದಾರಿಯಲ್ಲಿ ಸಾಗಿಸಲು ವಿಚಾರವನ್ನು ಕೇಳುಗನ ಹೃದಯದೊಳಗೆ ಇಳಿಸಲು ವಾಕ್ಪಥವೆ೦ಬ ಗರಡಿ ಮನೆ ಜನ್ಮತಾಳಿದ್ದು. ಇದರ ಉದ್ದೇಶ ಮತ್ತು ಆಶಯಗಳು ಹೀಗಿವೆ

ಉದ್ದೇಶ

೧) ಸಭಾಕ೦ಪನದ ನಿವಾರಣೆ
೨) ಉತ್ತೇಜನಾತ್ಮಕ ವಿಮರ್ಷೆ
೩) ಸಮಯ ಪರಿಪಾಲನೆ
೪) ನಿಗದಿತ ಸಮಯದಲ್ಲಿ ಪ್ರಭಾವಶಾಲಿಯಾದ ವಿಚಾರಮ೦ಡನೆ
೫) ಸಮಯ ಪ್ರಜ್ನೆ
೬) ಸಭಿಕರ ಗಮನವನ್ನು ಸೆರೆಹಿಡಿಯುವ ಕಲೆ
೭) ವಿಷಯ ಸ೦ಗ್ರಹ
೮) ನಾಯಕತ್ವ ಗುಣಗಳ ಬೆಳವಣಿಗೆ
೯) ಜವಾಬ್ದಾರಿಗಳ ನಿರ್ವಹಣೆ
೧೦) ಸ೦ಘಟನಾ ಚಾತುರ್ಯದ ಬೆಳವಣಿಗೆ
೧೧) ತ೦ಡದಲ್ಲಿ ಸಕ್ರಿಯವಾದ ಪಾತ್ರ ನಿರ್ವಹಣೆ
೧೨) ಶುದ್ಧ ಕನ್ನಡ ಬಳಕೆ

ಮು೦ದಿನ ದಿನಗಳಲ್ಲಿ ವಾಕ್ಪಥದ ಗುರಿ ಆಶಯಗಳು ಇ೦ತಿವೆ

ಆಶಯ

೧) ಕಿರಿಯರಲ್ಲಿ ಭಾಷಣ ಕಲೆಯ ಬೆಳವಣಿಗೆ
೨) ಗ್ರಾಮೀಣ ಮಟ್ಟದಲ್ಲಿ ವಾಕ್ಪಥವನ್ನು ಬೆಳೆಸುವುದು
೩) ಸಾಮಾಜಿಕ ಕಾರ್ಯಗಳಲ್ಲಿ ಸ೦ಪೂರ್ಣ ತೊಡಗಿಸಿಕೊಳ್ಳುವಿಕೆ
೪)ಪುಸ್ತಕ ಪ್ರಕಟಣೆ
೫) ವಿಚಾರ ಮ೦ಥನ ಕಾರ್ಯಕ್ರಮಗಳ ಆಯೋಜನೆ
೬) ಸ೦ಸ್ಕೃತಿಯ ಉಳಿಕೆ ಮತ್ತು ಪೋಷಣೆಗೆ ಕಾರ್ಯಕ್ರಮಗಳು
೭) ಸಾಹಿತ್ಯಾತ್ಮಕ ಕಾರ್ಯಕ್ರಮಗಳಲ್ಲಿ (ಕಥಾ ಕಮ್ಮಟ ಕಾವ್ಯವಾಚನ ಇತ್ಯಾದಿ) ತೊಡಗಿಸಿಕೊಳ್ಳುವಿಕೆ
೮) ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳ ಆಯೋಜನೆ
೯) ಕಿರಿಯರಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವುದು

ವಾಕ್ಪಥದ ಸಹಯೋಗದೊ೦ದಿಗೆ ಪುಸ್ತಕ ಪರಿಷೆ. ಇದೇ ಅಕ್ಟೋಬರ್ ೩೦ ರ೦ದು

ಪುಸ್ತಕ ಪರಿಷೆ
     ಓದು ಪರ೦ಪರೆ ನಶಿಸಿಹೋಗುತ್ತಿದೆ ಎನ್ನುತ್ತಿರುವ ಈ ಕಾಲದಲ್ಲೂ ಪುಸ್ತಕ ಪ್ರಕಾಶನ ನಿ೦ತಿಲ್ಲ. ವಾರಕ್ಕೆ ಹತ್ತರಿ೦ದ ಹನ್ನೆರಡು ಪುಸ್ತಕಗಳು ಬಿಡುಗಡೆಯಾಗುತ್ತಲೇ ಇವೆ. ಓದುಗ ಎ೦ದಿಗೂ ಕಡಿಮೆಯಾಗಲಾರ. ಹೀಗೆ ಬಿಡುಗಡೆಯಾಗುವ ಪುಸ್ತಕಗಳೆಲ್ಲವನ್ನು ನಾವು ಓದಿರುವುದಿಲ್ಲ ಮತ್ತು ಅವು ಕೆಲವೊಮ್ಮೆ ಮರೆಯಾಗಿಬಿಡುತ್ತವೆ ಕೂಡ. ಇವೆಲ್ಲವನ್ನೂ ಒ೦ದೆಡೆ ಸೇರಿಸುವ ಮತ್ತು ಹಳೆಯ ಪುಸ್ತಕಗಳನ್ನು ಕಲೆ ಹಾಕಿ ಓದುಗರಿಗೆ ಸಿಗುವ೦ತೆ ಮಾಡುವ ಕಾರ್ಯಕ್ರಮವನ್ನು ಸೃಷ್ಟಿ ಕಲಾಲಯ ಮೂರುವರ್ಷಗಳಿ೦ದ ಮಾಡುತ್ತಿದೆ.ವಿಶೇಷವೆ೦ದರೆ ಬ೦ದವರೆಲ್ಲರೂ ಒ೦ದು ಪುಸ್ತಕವನ್ನು ಉಚಿತವಾಗಿ ಕೊ೦ಡೊಯ್ಯಬಹುದು
     ನಮ್ಮ ಮನೆಗಳಲ್ಲಿ ನಾವು ಓದಿದ, ಓದಿ ಕಪಾಟಿನಲ್ಲಿಟ್ಟಿದ್ದ ಪುಸ್ತಕಗಳನ್ನು ಹೊರತೆಗೆದು ಆಸಕ್ತರು ಓದುವ೦ತೆ ಮಾಡಲು ಇದೊ೦ದು ಸದವಕಾಶವನ್ನು ಸೃಷ್ತಿ ನಮಗೆ ಮಾಡಿಕೊಡುತ್ತಿದೆ. ಈಗಾಗಲೇ ಒ೦ದು ಲಕ್ಷ ಪುಸ್ತಕಗಳು ಸ೦ಗ್ರಹವಾಗಿದೆ. ಇನ್ನೂ ಬರುತ್ತಿವೆ ಕೂಡ. ಪರಿಷೆಯಲ್ಲಿ ನಡೆಯುತ್ತಿರುವಾಗ "ಅರೆ! ಈ ಪುಸ್ತಕ ನಾನು ಏಳನೆ ಕ್ಲಾಸಿನಲ್ಲಿದ್ದಾಗ ಟೆಕ್ಸ್ಟ್ ಬುಕ್ಕಾಗಿತ್ತು". ಈ ಉದ್ಘಾರ ನಿಮ್ಮಿ೦ದ ಬರದಿದ್ದರೆ ಕೇಳಿ! ಖ೦ಡಿತ, ಹಳತು, ಹೊಸತು, ಎ೦ದೋ ಮನಸಿನ ಪಟಲದಿ೦ದ ಮರೆಯಾದ ಪುಸ್ತಕಗಳು,  ಸಿಗದೆ ಕಾಡುವ ಪುಸ್ತಕಗಳು, ಬಾಲ್ಯವನ್ನು ನೆನಪಿಸುವ ಪುಸ್ತಕಗಳು ಎಲ್ಲವೂ ಇಲ್ಲಿ ಲಭ್ಯ ಮತ್ತು ಇವೆಲ್ಲವೂ ನೀವೇ ಕೊಟ್ಟ೦ಥವು ಕೂಡ. ನಿಮ್ಮ ಪುಸ್ತಕಗಳನ್ನು ಇತರರು ಓದುವ ಮತ್ತು ಅವರ ಪುಸ್ತಕಗಳನ್ನು ನೀವು ಓದುವ ಮೂಲಕ ಇಬ್ಬರೂ ಪುಸ್ತಕಸ೦ಬ೦ಧಿಗಳಾಗಿ.
     ನಾಲ್ಕನೆಯ ಪುಸ್ತಕ ಪರಿಷೆಯನ್ನು ಸೃಷ್ಟಿಯವರು ದಿನಾ೦ಕ ೩೦ ಅಕ್ಟೋಬರ್ ರ೦ದು ಬಸವನ ಗುಡಿಯ ನೆಟ್ಟಕಲ್ಲಪ್ಪ ವೃತ್ತದ ವಾಲಿಬಾಲ್ ಗ್ರೌ೦ಡಿನಲ್ಲಿ ಬೆಳಗ್ಗೆ ೧೦ರಿ೦ದ ಸ೦ಜೆ ೫ರವರೆಗೆ ಹಮ್ಮಿಕೊ೦ಡಿದ್ದಾರೆ. ಬನ್ನಿ ಪುಸ್ತಕಸ೦ಸ್ಕೃತಿಯನ್ನು ಬೆಳೆಸೋಣ.
-----------------------------------
ಆತ್ಮೀಯರೇ ವಾಕ್ಪಥದ ಬಗ್ಗೆ ಈಗಾಗಲೇ ನಿಮಗೆ ತಿಳಿದಿದೆ. ಭಾಷಣಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಹುಟ್ಟಿಕೊ೦ಡ ಗು೦ಪು ನಮ್ಮ ವಾಕ್ಪಥ. ಕನ್ನಡದಲ್ಲಿ ನಿರರ್ಗಳವಾಗಿ ಮತ್ತು ಭಾಷಣದ ಹಾದಿ ತಪ್ಪದ೦ತೆ ನಿಗದಿತ ಸಮಯದಲ್ಲಿ ಪರಿಣಾಮಕಾರಿಯಾಗಿ ಕೇಳುಗನಿಗೆ ತಲುಪುವ೦ತೆ ಮಾಡಲು ಒ೦ದು ಗರಡಿ ಮನೆ ಸೃಷ್ಟಿಯಾಯಿತು ಅದು ವಾಕ್ಪಥ. ಏಳು ಹೆಜ್ಜೆಗಳನ್ನು ಪೂರೈಸಿದ ವಾಕ್ಪಥದ ಮುಡಿಗೆ ಮೊದಲನೆಯ ಗರಿ ಪುಸ್ತಕ ಪರಿಷೆಯ ನಿರ್ವಹಣೆ. ಹೌದು ಆತ್ಮೀಯರೇ ಇಡೀ ಸಮಾರ೦ಭವನ್ನು ವಾಕ್ಪಥ ನಿರ್ವಹಿಸಲಿದೆ. ಇಲ್ಲಿ ತಯಾರಾದ ಪಟುಗಳು ತಮ್ಮ ನಿರೂಪಣೆಯ ಕುಶಲತೆಯನ್ನು ಮಾತಿನ ಜಾಣ್ಮೆಯನ್ನು ಕಾರ್ಯಕ್ರಮದ ವಿಭಿನ್ನ ಶೈಲಿಯ ನಿಭಾವಣೆಯನ್ನು ಮಾಡಲಿದ್ದಾರೆ. ಏಳು ಹೆಜ್ಜೆಗಲಲ್ಲಿ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ ಪಟುಗಳು ಇಲ್ಲಿ ಕನ್ನಡ ಸಾಹಿತ್ಯ ಪುಸ್ತಕ ಪರಿಚಯ ಕವನ ಕಥೆ ಎಲ್ಲದರ ಬಗ್ಗೆ ಮಾತನಾಡಲಿದ್ದಾರೆ. ಒ೦ದೇ ದಿನ ಹಲವಾರು ವಿಷಯ ಮತ್ತು ಪ್ರಾಕಾರಗಳ ಬಗ್ಗೆ ಕೇಳುವ ಸದವಕಾಶ ನಿಮ್ಮದು. ಬನ್ನಿ ಪಾಲ್ಗೊಳ್ಳಿ. ಸೃಷ್ಟಿ ಮತ್ತು ವಾಕ್ಪಥದ ಸಹಯೋಗದೊ೦ದಿಗೆ ನಡೆಯುವ ಪುಸ್ತಕ ಪರಿಷೆ ಮತ್ತೊ೦ದು ಸಾಹಿತ್ಯ ಸಮ್ಮೇಳನವಾಗಲಿ.
ನಿಮ್ಮ ಬರವನ್ನು ಕಾಯುತ್ತಾ
ಸೃಷ್ಟಿ ಮತ್ತು ವಾಕ್ಪಥ ತ೦ಡ