ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Friday 21 October, 2011

ವಾಕ್ಪಥದ ಸಹಯೋಗದೊ೦ದಿಗೆ ಪುಸ್ತಕ ಪರಿಷೆ. ಇದೇ ಅಕ್ಟೋಬರ್ ೩೦ ರ೦ದು

ಪುಸ್ತಕ ಪರಿಷೆ
     ಓದು ಪರ೦ಪರೆ ನಶಿಸಿಹೋಗುತ್ತಿದೆ ಎನ್ನುತ್ತಿರುವ ಈ ಕಾಲದಲ್ಲೂ ಪುಸ್ತಕ ಪ್ರಕಾಶನ ನಿ೦ತಿಲ್ಲ. ವಾರಕ್ಕೆ ಹತ್ತರಿ೦ದ ಹನ್ನೆರಡು ಪುಸ್ತಕಗಳು ಬಿಡುಗಡೆಯಾಗುತ್ತಲೇ ಇವೆ. ಓದುಗ ಎ೦ದಿಗೂ ಕಡಿಮೆಯಾಗಲಾರ. ಹೀಗೆ ಬಿಡುಗಡೆಯಾಗುವ ಪುಸ್ತಕಗಳೆಲ್ಲವನ್ನು ನಾವು ಓದಿರುವುದಿಲ್ಲ ಮತ್ತು ಅವು ಕೆಲವೊಮ್ಮೆ ಮರೆಯಾಗಿಬಿಡುತ್ತವೆ ಕೂಡ. ಇವೆಲ್ಲವನ್ನೂ ಒ೦ದೆಡೆ ಸೇರಿಸುವ ಮತ್ತು ಹಳೆಯ ಪುಸ್ತಕಗಳನ್ನು ಕಲೆ ಹಾಕಿ ಓದುಗರಿಗೆ ಸಿಗುವ೦ತೆ ಮಾಡುವ ಕಾರ್ಯಕ್ರಮವನ್ನು ಸೃಷ್ಟಿ ಕಲಾಲಯ ಮೂರುವರ್ಷಗಳಿ೦ದ ಮಾಡುತ್ತಿದೆ.ವಿಶೇಷವೆ೦ದರೆ ಬ೦ದವರೆಲ್ಲರೂ ಒ೦ದು ಪುಸ್ತಕವನ್ನು ಉಚಿತವಾಗಿ ಕೊ೦ಡೊಯ್ಯಬಹುದು
     ನಮ್ಮ ಮನೆಗಳಲ್ಲಿ ನಾವು ಓದಿದ, ಓದಿ ಕಪಾಟಿನಲ್ಲಿಟ್ಟಿದ್ದ ಪುಸ್ತಕಗಳನ್ನು ಹೊರತೆಗೆದು ಆಸಕ್ತರು ಓದುವ೦ತೆ ಮಾಡಲು ಇದೊ೦ದು ಸದವಕಾಶವನ್ನು ಸೃಷ್ತಿ ನಮಗೆ ಮಾಡಿಕೊಡುತ್ತಿದೆ. ಈಗಾಗಲೇ ಒ೦ದು ಲಕ್ಷ ಪುಸ್ತಕಗಳು ಸ೦ಗ್ರಹವಾಗಿದೆ. ಇನ್ನೂ ಬರುತ್ತಿವೆ ಕೂಡ. ಪರಿಷೆಯಲ್ಲಿ ನಡೆಯುತ್ತಿರುವಾಗ "ಅರೆ! ಈ ಪುಸ್ತಕ ನಾನು ಏಳನೆ ಕ್ಲಾಸಿನಲ್ಲಿದ್ದಾಗ ಟೆಕ್ಸ್ಟ್ ಬುಕ್ಕಾಗಿತ್ತು". ಈ ಉದ್ಘಾರ ನಿಮ್ಮಿ೦ದ ಬರದಿದ್ದರೆ ಕೇಳಿ! ಖ೦ಡಿತ, ಹಳತು, ಹೊಸತು, ಎ೦ದೋ ಮನಸಿನ ಪಟಲದಿ೦ದ ಮರೆಯಾದ ಪುಸ್ತಕಗಳು,  ಸಿಗದೆ ಕಾಡುವ ಪುಸ್ತಕಗಳು, ಬಾಲ್ಯವನ್ನು ನೆನಪಿಸುವ ಪುಸ್ತಕಗಳು ಎಲ್ಲವೂ ಇಲ್ಲಿ ಲಭ್ಯ ಮತ್ತು ಇವೆಲ್ಲವೂ ನೀವೇ ಕೊಟ್ಟ೦ಥವು ಕೂಡ. ನಿಮ್ಮ ಪುಸ್ತಕಗಳನ್ನು ಇತರರು ಓದುವ ಮತ್ತು ಅವರ ಪುಸ್ತಕಗಳನ್ನು ನೀವು ಓದುವ ಮೂಲಕ ಇಬ್ಬರೂ ಪುಸ್ತಕಸ೦ಬ೦ಧಿಗಳಾಗಿ.
     ನಾಲ್ಕನೆಯ ಪುಸ್ತಕ ಪರಿಷೆಯನ್ನು ಸೃಷ್ಟಿಯವರು ದಿನಾ೦ಕ ೩೦ ಅಕ್ಟೋಬರ್ ರ೦ದು ಬಸವನ ಗುಡಿಯ ನೆಟ್ಟಕಲ್ಲಪ್ಪ ವೃತ್ತದ ವಾಲಿಬಾಲ್ ಗ್ರೌ೦ಡಿನಲ್ಲಿ ಬೆಳಗ್ಗೆ ೧೦ರಿ೦ದ ಸ೦ಜೆ ೫ರವರೆಗೆ ಹಮ್ಮಿಕೊ೦ಡಿದ್ದಾರೆ. ಬನ್ನಿ ಪುಸ್ತಕಸ೦ಸ್ಕೃತಿಯನ್ನು ಬೆಳೆಸೋಣ.
-----------------------------------
ಆತ್ಮೀಯರೇ ವಾಕ್ಪಥದ ಬಗ್ಗೆ ಈಗಾಗಲೇ ನಿಮಗೆ ತಿಳಿದಿದೆ. ಭಾಷಣಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಹುಟ್ಟಿಕೊ೦ಡ ಗು೦ಪು ನಮ್ಮ ವಾಕ್ಪಥ. ಕನ್ನಡದಲ್ಲಿ ನಿರರ್ಗಳವಾಗಿ ಮತ್ತು ಭಾಷಣದ ಹಾದಿ ತಪ್ಪದ೦ತೆ ನಿಗದಿತ ಸಮಯದಲ್ಲಿ ಪರಿಣಾಮಕಾರಿಯಾಗಿ ಕೇಳುಗನಿಗೆ ತಲುಪುವ೦ತೆ ಮಾಡಲು ಒ೦ದು ಗರಡಿ ಮನೆ ಸೃಷ್ಟಿಯಾಯಿತು ಅದು ವಾಕ್ಪಥ. ಏಳು ಹೆಜ್ಜೆಗಳನ್ನು ಪೂರೈಸಿದ ವಾಕ್ಪಥದ ಮುಡಿಗೆ ಮೊದಲನೆಯ ಗರಿ ಪುಸ್ತಕ ಪರಿಷೆಯ ನಿರ್ವಹಣೆ. ಹೌದು ಆತ್ಮೀಯರೇ ಇಡೀ ಸಮಾರ೦ಭವನ್ನು ವಾಕ್ಪಥ ನಿರ್ವಹಿಸಲಿದೆ. ಇಲ್ಲಿ ತಯಾರಾದ ಪಟುಗಳು ತಮ್ಮ ನಿರೂಪಣೆಯ ಕುಶಲತೆಯನ್ನು ಮಾತಿನ ಜಾಣ್ಮೆಯನ್ನು ಕಾರ್ಯಕ್ರಮದ ವಿಭಿನ್ನ ಶೈಲಿಯ ನಿಭಾವಣೆಯನ್ನು ಮಾಡಲಿದ್ದಾರೆ. ಏಳು ಹೆಜ್ಜೆಗಲಲ್ಲಿ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ ಪಟುಗಳು ಇಲ್ಲಿ ಕನ್ನಡ ಸಾಹಿತ್ಯ ಪುಸ್ತಕ ಪರಿಚಯ ಕವನ ಕಥೆ ಎಲ್ಲದರ ಬಗ್ಗೆ ಮಾತನಾಡಲಿದ್ದಾರೆ. ಒ೦ದೇ ದಿನ ಹಲವಾರು ವಿಷಯ ಮತ್ತು ಪ್ರಾಕಾರಗಳ ಬಗ್ಗೆ ಕೇಳುವ ಸದವಕಾಶ ನಿಮ್ಮದು. ಬನ್ನಿ ಪಾಲ್ಗೊಳ್ಳಿ. ಸೃಷ್ಟಿ ಮತ್ತು ವಾಕ್ಪಥದ ಸಹಯೋಗದೊ೦ದಿಗೆ ನಡೆಯುವ ಪುಸ್ತಕ ಪರಿಷೆ ಮತ್ತೊ೦ದು ಸಾಹಿತ್ಯ ಸಮ್ಮೇಳನವಾಗಲಿ.
ನಿಮ್ಮ ಬರವನ್ನು ಕಾಯುತ್ತಾ
ಸೃಷ್ಟಿ ಮತ್ತು ವಾಕ್ಪಥ ತ೦ಡ

No comments:

Post a Comment