ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Friday 23 March, 2012

ತುಂಬಿ ತುಳುಕಲಿ ಸಂಭ್ರಮ ನಂದನ ನಾಮ ಸಂವತ್ಸರದಿಂದ ಹಣ್ಣೆಲೆ ಉದುರಿ ನವ ಚಿಗುರು ಚಿಗುರುವ ಕಾಲವಾಗಿದೆ ನಳನಳಿಸುತ್ತಿವೆ ಗಿಡ ಮರಗಳು ಹಚ್ಚ ಹಸುರಿನಿಂದ ಯುಗ ಮುಗಿಸಿ ಹೊಸ ಯುಗದ ಆದಿ ಶುರುವಾಗುತಿದೆ ತುಂಬಿ ತುಳುಕಲಿ ಸಂಭ್ರಮ ನಂದನ ನಾಮ ಸಂವತ್ಸರದಿಂದ ಉದಯಕಾಲದಿ ಎದ್ದು ಅಂಗಳವ ಸಾರಿಸಿ ಬಣ್ಣ ಬಣ್ಣದ ರಂಗೋಲಿಯ ಚಿತ್ತಾರವ ಬಿಡಿಸಿ ಹೊಸ ಚಿಗುರಿನ ಮಾವಿನ ತೋರಣವ ಕಟ್ಟಿ ಸಂಭ್ರಮದಿ ಬರಮಾಡಿಕೊಳ್ಳೋಣ ಯುಗಾದಿಯ ಕಷ್ಟಗಳೆಂಬ ಬೇವಿಗೆ ಸುಖವೆಂಬ ಬೆಲ್ಲವ ಸೇರಿಸಿ ಮುಂಬರುವ ಕಾಲದಿ ಬೆಲ್ಲದ ಸವಿಯು ಹೆಚ್ಚಾಗಿ ಬೇವಿನ ಕಹಿಯು ಮರೆಯಾಗಿ ಸುಖ ಸಂತೋಷ ತುಂಬಲೆಂದು ಬಾಳಲಿ ಹರಸೋಣ, ಪ್ರಾರ್ಥಿಸೋಣ ಖರ ನಾಮ ಸಂವತ್ಸರದ ಕಹಿಯನ್ನೆಲ್ಲಾ ಮರೆತು ನಂದನ ನಾಮ ಸಂವತ್ಸರದಿ ನಲಿ ನಲಿದಾಡುತ ದ್ವೇಷ ಹಗೆತನವ ಎಲ್ಲವನ್ನು ಮರೆತು ಸ್ನೇಹಸೌಹಾರ್ದವ ಮೆರೆದು ಎಲ್ಲರಲೂ ಒಂದಾಗೋಣ... ಸರ್ವರಿಗೂ ನೂತನ ಸಂವತ್ಸರದ / ಯುಗಾದಿಯ/ ಹೊಸ ವರ್ಷದ ಶುಭಾಶಯಗಳುಹಣ್ಣೆಲೆ ಉದುರಿ ನವ ಚಿಗುರು ಚಿಗುರುವ ಕಾಲವಾಗಿದೆ ನಳನಳಿಸುತ್ತಿವೆ ಗಿಡ ಮರಗಳು ಹಚ್ಚ ಹಸುರಿನಿಂದ ಯುಗ ಮುಗಿಸಿ ಹೊಸ ಯುಗದ ಆದಿ ಶುರುವಾಗುತಿದೆ ತುಂಬಿ ತುಳುಕಲಿ ಸಂಭ್ರಮ ನಂದನ ನಾಮ ಸಂವತ್ಸರದಿಂದ ಉದಯಕಾಲದಿ ಎದ್ದು ಅಂಗಳವ ಸಾರಿಸಿ ಬಣ್ಣ ಬಣ್ಣದ ರಂಗೋಲಿಯ ಚಿತ್ತಾರವ ಬಿಡಿಸಿ ಹೊಸ ಚಿಗುರಿನ ಮಾವಿನ ತೋರಣವ ಕಟ್ಟಿ ಸಂಭ್ರಮದಿ ಬರಮಾಡಿಕೊಳ್ಳೋಣ ಯುಗಾದಿಯ ಕಷ್ಟಗಳೆಂಬ ಬೇವಿಗೆ ಸುಖವೆಂಬ ಬೆಲ್ಲವ ಸೇರಿಸಿ ಮುಂಬರುವ ಕಾಲದಿ ಬೆಲ್ಲದ ಸವಿಯು ಹೆಚ್ಚಾಗಿ ಬೇವಿನ ಕಹಿಯು ಮರೆಯಾಗಿ ಸುಖ ಸಂತೋಷ ತುಂಬಲೆಂದು ಬಾಳಲಿ ಹರಸೋಣ, ಪ್ರಾರ್ಥಿಸೋಣ ಖರ ನಾಮ ಸಂವತ್ಸರದ ಕಹಿಯನ್ನೆಲ್ಲಾ ಮರೆತು ನಂದನ ನಾಮ ಸಂವತ್ಸರದಿ ನಲಿ ನಲಿದಾಡುತ ದ್ವೇಷ ಹಗೆತನವ ಎಲ್ಲವನ್ನು ಮರೆತು ಸ್ನೇಹಸೌಹಾರ್ದವ ಮೆರೆದು ಎಲ್ಲರಲೂ ಒಂದಾಗೋಣ... ಸರ್ವರಿಗೂ ನೂತನ ಸಂವತ್ಸರದ / ಯುಗಾದಿಯ/ ಹೊಸ ವರ್ಷದ ಶುಭಾಶಯಗಳು

ಹಣ್ಣೆಲೆ ಉದುರಿ ನವ ಚಿಗುರು ಚಿಗುರುವ ಕಾಲವಾಗಿದೆ
ನಳನಳಿಸುತ್ತಿವೆ ಗಿಡ ಮರಗಳು ಹಚ್ಚ ಹಸುರಿನಿಂದ
ಯುಗ ಮುಗಿಸಿ ಹೊಸ ಯುಗದ ಆದಿ ಶುರುವಾಗುತಿದೆ
ತುಂಬಿ ತುಳುಕಲಿ ಸಂಭ್ರಮ ನಂದನ ನಾಮ ಸಂವತ್ಸರದಿಂದ

ಉದಯಕಾಲದಿ ಎದ್ದು ಅಂಗಳವ ಸಾರಿಸಿ
ಬಣ್ಣ ಬಣ್ಣದ ರಂಗೋಲಿಯ ಚಿತ್ತಾರವ ಬಿಡಿಸಿ
ಹೊಸ ಚಿಗುರಿನ ಮಾವಿನ ತೋರಣವ ಕಟ್ಟಿ
ಸಂಭ್ರಮದಿ ಬರಮಾಡಿಕೊಳ್ಳೋಣ ಯುಗಾದಿಯ

ಕಷ್ಟಗಳೆಂಬ ಬೇವಿಗೆ ಸುಖವೆಂಬ ಬೆಲ್ಲವ ಸೇರಿಸಿ
ಮುಂಬರುವ ಕಾಲದಿ ಬೆಲ್ಲದ ಸವಿಯು ಹೆಚ್ಚಾಗಿ
ಬೇವಿನ ಕಹಿಯು ಮರೆಯಾಗಿ ಸುಖ ಸಂತೋಷ
ತುಂಬಲೆಂದು ಬಾಳಲಿ ಹರಸೋಣ, ಪ್ರಾರ್ಥಿಸೋಣ

ಖರ ನಾಮ ಸಂವತ್ಸರದ ಕಹಿಯನ್ನೆಲ್ಲಾ ಮರೆತು
ನಂದನ ನಾಮ ಸಂವತ್ಸರದಿ ನಲಿ ನಲಿದಾಡುತ
ದ್ವೇಷ ಹಗೆತನವ ಎಲ್ಲವನ್ನು ಮರೆತು
ಸ್ನೇಹಸೌಹಾರ್ದವ ಮೆರೆದು ಎಲ್ಲರಲೂ ಒಂದಾಗೋಣ...

ಸರ್ವರಿಗೂ ನೂತನ ಸಂವತ್ಸರದ / ಯುಗಾದಿಯ/ ಹೊಸ ವರ್ಷದ ಶುಭಾಶಯಗಳು

Friday 17 February, 2012

೧೨-೦೨-೧೨ ವಾಕ್ಪಥ ವಾರ್ಷಿಕೋತ್ಸವ ಒಂದು ವರದಿ

ನೆನ್ನೆ ಅಂದರೆ ಭಾನುವಾರ ದಿನಾಂಕ ೧೨-೦೨-೧೨ ದಂದು ವಾಕ್ಪಥ ತನ್ನ ಹನ್ನೆರಡನೆ ಹೆಜ್ಜೆ ಅಂದರೆ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿತು. ಅದು ಸರಿ ಆದರೆ ಈ ದಿನಾಂಕದಲ್ಲಿ ಇರುವ ಅಂಕಿಗಳಿಗೂ ನೆನ್ನೆಯ ಗೋಷ್ಟಿಗೂ ತಳುಕು ಹಾಕಿಕೊಂಡಿರುವುದು ವಾಕ್ಪಥ ಗೋಷ್ಠಿ ಮುಗಿಸಿದ ಮೇಲೆ ನನ್ನ ಅರಿವಿಗೆ ಬಂತು. ಹೇಗೆ ಅಂದಿರಾ? ೧೨ನೆ ತಾರೀಖಿನಂದು ೨ ಗಂಟೆಗೆ ವಾಕ್ಪಥ ತನ್ನ ೧೨ನೆ ಹೆಜ್ಜೆಯನ್ನು ಇಟ್ಟಿತು.
ಮೊದಲಿಗೆ ವಾರ್ಷಿಕೋತ್ಸವದ ಅಂಗವಾಗಿ ಹಿರಿಯ ದಂಪತಿಗಳಾದ ಶ್ರೀಯುತ ಬೆಳ್ಳಾಲ ಗೋಪಿನಾಥರಾಯರು ಹಾಗೂ ಅವರ ಧರ್ಮಪತ್ನಿ ಕೇಕ್ ಕತ್ತರಿಸುವ ಮೂಲಕ ವಾಕ್ಪಥದ ವಾರ್ಷಿಕೋತ್ಸವಕ್ಕೆ ಚಾಲನೆ ದೊರಕಿತು. ಈ ಬಾರಿಯ ವಾರ್ಷಿಕೋತ್ಸವಕ್ಕೆ ಶ್ರೀಯುತ ಪಾರ್ಥಸಾರಥಿಯವರು ಹಾಗೂ ಶ್ರೀಯುತ ರಾಮ್ ಮೋಹನ್ ಅವರು ತಮ್ಮ ಕುಟುಂಬದೊಡನೆ ಬಂದದ್ದು ವಿಶೇಷ.
ಕೇಕ್ ಕತ್ತರಿಸಿದ ನಂತರ ಅಂದಿನ ಗೋಷ್ಟಿಯ ನಿರ್ವಾಹಕರಾದ ಶ್ರೀಯುತ ಸಚೇತನ್ ಭಟ್ ರವರು ಕಾರ್ಯಕ್ರಮದ ವಿವರವನ್ನು ತಿಳಿಸಿಕೊಟ್ಟರು.
ಮೊದಲ ಭಾಷಣಕಾರರು - ಶ್ರೀಯುತ ಹೊಳೆನರಸಿಪುರ ಮಂಜುನಾಥ ಅವರು
ಎರಡನೆಯ ಭಾಷಣಕಾರರು - ಶ್ರೀಯುತ ಪಾರ್ಥಸಾರಥಿಯವರು
ಮೊದಲ ಭಾಷಣದ ವಿಮರ್ಶೆ - ಶ್ರೀಯುತ ಬೆಳ್ಳಾಲ ಗೋಪಿನಾಥ ರಾಯರು
ಎರಡನೇ ಭಾಷಣದ ವಿಮರ್ಶೆ - ಶ್ರೀಯುತ ರಘು ಎಸ.ಪಿ ಅವರು
ಆಶುಭಾಷಣ ನಿರ್ವಹಣೆ - ಶ್ರೀಯುತ ರಾಮ್ ಮೋಹನ್ ಅವರು
ಸಮಯ ಪರಿಪಾಲನೆ - ಶ್ರೀಯುತ ಜಯಂತ್ ರಾಮಾಚಾರ್ ಅವರು
ಭಾಷಾ ಶುದ್ಧಿ - ಶ್ರೀಯುತ ಹರೀಶ್ ಆತ್ರೇಯ ಅವರು
ಮೊದಲ ಭಾಷಣ - ಶ್ರೀಯುತ ಹೊಳೆನರಸಿಪುರ ಮಂಜುನಾಥ
ವಿಷಯ - ಮರೆವು ಎಂಬ ಮಹಾಮಾಯೆ.
ಭಾಷಣ ಶುರು ಮಾಡಿದ ಮಂಜುನಾಥ ಅವರು ನೆರೆದಿದ್ದ ಸಭಿಕರಲ್ಲಿ ತಾವು ಆರಿಸಿಕೊಂಡಿರುವ ವಿಷಯದ ಬಗ್ಗೆ ಕೆಲ ಕಾಲ ಗೊಂದಲ ಮೂಡಿಸಿ ನಂತರ ತಮ್ಮ ವಿಷಯವನ್ನು ತಿಳಿಸಿಕೊಟ್ಟರು. ಮರೆವು ಎಂಬುದೊಂದು ನಿಜಕ್ಕೂ ಮಹಾಮಾಯೆ. ಇದಕ್ಕೆ ಆಂಗ್ಲದಲ್ಲಿ Algemer / Dementia ಎಂದು ಕರೆಯುತ್ತಾರೆ. ಸಹಜವಾಗಿ ಮುಂಚೆ ಇದು ವಯಸ್ಸಾದವರಲ್ಲಿ ಅಂದರೆ ಅರವತ್ತು ದಾಟಿದವರಿಗೆ ಇದು ಹೆಚ್ಚು ಕಾಡುತ್ತಿತ್ತು. ಆದರೆ ಈಗ ಇದೊಂದು ಸರ್ವೇ ಸಾಧಾರಣ ಆಗಿಬಿಟ್ಟಿದೆ. ಕೆಲವೊಮ್ಮೆ ಈ ಮರೆವು ಎಂಬುವುದು ವರವೂ ಆಗಬಹುದು ಕೆಲವೊಮ್ಮೆ ಶಾಪವೂ ಆಗಬಹುದು. ವರ ಹೇಗೆಂದರೆ ಮನುಷ್ಯ ತನ್ನ ಕಹಿ ನೆನಪುಗಳನ್ನು ಮರೆತು ನೆಮ್ಮದಿ ಇಂದ ಇರಬಹುದು. ಇದೆ ಮರೆವು ಶಾಪ ಹೇಗೆಂದರೆ ಮಕ್ಕಳು ಪರೀಕ್ಷೆಗೆ ಎಷ್ಟೆಲ್ಲಾ ತಯಾರಿ ನಡೆಸಿದ್ದರೂ ಪರೀಕ್ಷೆಯ ಸಮಯದಲ್ಲಿ ಓದಿದ್ದು ಮರೆತು ಹೋಗುವುದು. ಇನ್ನು ಮರೆವಿನಲ್ಲಿ ಮೂರು ವಿಧಗಳುಂಟು ಅವುಗಳಲ್ಲಿ ಅಲ್ಪ ಸ್ವರೂಪ, ಮಧ್ಯಮ ಸ್ವರೂಪ ಹಾಗೂ ಭೀಕರ ಸ್ವರೂಪ. ಇನ್ನು ಮರೆವಿಗೆ ಕಾರಣಗಳು ಅಧಿಕ ಮಾನಸಿಕ ಒತ್ತಡ, ರಕ್ತದೊತ್ತಡ, ಸಕ್ಕರೆ ಖಾಯಿಲೆಅತಿಯಾದ ಮದ್ಯಪಾನ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಇಂತಿಷ್ಟು ಉತ್ತಮ ಮಾಹಿತಿಗಳನ್ನು ಹಾಸ್ಯಭರಿತವಾಗಿ ತಿಳಿಸಿಕೊಟ್ಟು ಮಂಜುನಾಥ ಅವರು ತಮ್ಮ ಭಾಷಣವನ್ನು ಮುಗಿಸಿದರು.
ಎರಡನೆಯ ಭಾಷಣ - ಶ್ರೀಯುತ ಪಾರ್ಥಸಾರಥಿ
ವಿಷಯ - ಸಂಘ ಸಂಸ್ಥೆಗಳು ಮತ್ತು ಸಮಾಜ.
ವಾಕ್ಪಥದ ವಾರ್ಷಿಕೋತ್ಸವದ ಸುಸಂಧರ್ಭದಲ್ಲಿ ತಾವು ಭಾಷಣ ಮಾಡುತ್ತಿರುವುದು ತಮಗೆ ಅತೀವ ಸಂತಸ ಉಂಟಾಗುತ್ತಿದೆ ಎಂದು ತಮ್ಮ ಸಂತಸ ಹಂಚಿಕೊಂಡು ಭಾಷಣ ಶುರು ಮಾಡಿದರು. ಸಂಘ ಸಂಸ್ಥೆಗಳ ಇತಿಹಾಸವನ್ನು ಕೆದಕಿದರೆ ನಾವು ಹೆಚ್ಚು ಕಡಿಮೆ ಬುದ್ಧನ ಕಾಲಕ್ಕೆ ಹೋಗಬೇಕಾಗುತ್ತದೆ. ಬುದ್ಧನು ತನ್ನ ಧರ್ಮದ ಪ್ರಚಾರಕ್ಕಾಗಿ ಎಲ್ಲೆಡೆ ಸಂಘಗಳನ್ನು ಶುರು ಮಾಡಿಕೊಂಡ. ಆತನ ಸಾಲುಗಳೇ ಹೇಳುವ ಹಾಗೆ "ಬುದ್ಧಂ ಶರಣಂ ಗಚ್ಚಾಮಿ, ಧರ್ಮಂ ಶರಣಂ ಗಚ್ಚಾಮಿ, ಸಂಘಂ ಶರಣಂ ಗಚ್ಚಾಮಿ".  ಕಾಲದಿಂದಲೂ ನಾವು ಈ ಸಂಘ ಸಂಸ್ಥೆಗಳನ್ನೂ ಕಾಣ ಬಹುದಾಗಿದೆ. ನಂತರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ವಿಷಯಕ್ಕೆ ಬಂದರೆ ಮಹಾತ್ಮ ಗಾಂಧಿಜಿಸುಭಾಶ್ ಚಂದ್ರ ಭೋಸ್ ಎಲ್ಲರೂ ಾರತೀಯರನ್ನು ಒಗ್ಗೂಡಿಸಲು ಇಂಥಹ ಸಂಘ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ತ್ತೀಚಿನ ದಿನಗಳಲ್ಲಿ ನೋಡಿದರೆ ರಸ್ತೆಗೊಂದು ಗಲ್ಲಿಗೊಂದರಂತೆ ಸಂಘ ಸಂಸ್ಥೆಗಳನ್ನು ಕಾಣಬಹುದಾಗಿದೆ. ಇವುಗಳಲ್ಲಿ ಕೆಲವು ಏಕವ್ಯಕ್ತಿ ಆರಾಧಕ ಂಘಗಳಾಗಿದ್ದರೆಇನ್ನುಳಿದವು ಸಮಾಜ ಸೇವಾ ಸಂಘಗಳು ಇರುತ್ತವೆ. ಸಂಘ ಸಂಸ್ಥೆಗಳು ಸಮಾಜದ ಸದ್ಬಳಕೆಗಾಗಿ ಉಪಯೋಗವಾದರೆ ಒಳ್ಳೆಯದು ಎಂದು ತಮ್ಮ ಭಾಷಣ ಮುಗಿಸಿದರು.  
ಮೊದಲನೆಯ ಭಾಷಣದ ವಿಮರ್ಶೆ ಮಾಡಲು ಬಂದ ಬೆಳ್ಳಾಲ ಗೋಪಿನಾಥರಾಯರು ಮಂಜುನಾಥ್ ಅವರ ಕಂಚಿನ ಕಂಠವನ್ನು ಹೊಗಳುತ್ತಾ ಅವರು ಆರಿಸಿಕೊಂಡ ವಿಷಯ ವಿಶಿಷ್ಟವಾಗಿದ್ದು, ಭಾಷಣ ಉತ್ತಮ ಮಾಹಿತಿಯೊಂದಿಗೆ ಕೂಡಿತ್ತು ಂದು ತಿಳಿಸಿಕೊಟ್ಟರೆ. ಎರಡನೆಯ ಭಾಷಣದ ವಿಮರ್ಶೆ ಮಾಡಲು ಬಂದ ರಘು ಅವರು ಪಾರ್ಥಸಾರಥಿಯವರು ಆರಿಸಿಕೊಂಡ ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುತ್ತಾರೆ ಆದರೆ ಪ್ರಸ್ತುತ ವಿಷಯದ ಬಗ್ಗೆ ಇನ್ನೂ ಸ್ವಲ್ಪ ತಿಳಿಸಬಹುದಿತ್ತು ಎಂದು ತಿಳಿಸಿಕೊಟ್ಟರು.
 ನಂತರ ಆಶುಭಾಷಣ ನಿರ್ವಹಿಸಿದ ರಾಮ್ ಮೋಹನ್ ಅವರು ಕೊಟ್ಟ ವಿಷಯ ಬದುಕು ಮತ್ತು ಕಲೆ.
ಈ ವಿಷಯವಾಗಿ ಮಾತನಾಡಲು ಬಂದ ಶ್ರೀಯುತ ರಘು ಎಸ.ಪಿ, ಶ್ರೀಯುತ ಹರೀಶ್ ಆತ್ರೇಯ ಹಾಗೂ ಶ್ರೀಯುತ ಬೆಳ್ಳಾಲ ಗೋಪಿನಾಥರಾಯರು ಮೂವರು ಹೆಚ್ಚು ಕಡಿಮೆ ಒಂದೇ ನಿಲುವನ್ನು ಹೊಂದಿದ್ದರು. ಬದಕು ಹಾಗೂ ಕಲೆ ಎರಡು ಬೇರೆ ಬೇರೆ ಆಗಿದ್ದು. ಕೆಲವರು ಬದುಕುವುದು ಒಂದು ಕಲೆ ಎನ್ನುತ್ತಾರೆ. ಕೆಲವರು ತಮ್ಮ ಬದುಕಿಗಾಗಿ ಕಲೆಯನ್ನು ಅವಲಂಬಿಸಿದ್ದರೆ ಮತ್ತು ಕೆಲವರು ಕಲೆಯನ್ನೇ ತಮ್ಮ ಬದುಕಾಗಿ ಸ್ವೀಕರಿಸಿದ್ದಾರೆ ಎಂಬ ನಿಲುವನ್ನು ಮಂಡಿಸಿದರು.
ನಂತರ ಜಯಂತ್ ಅವರು ಬಂದು ತಮ್ಮ ಬಳಿ ಇದ್ದ ಸಮಯದ ವರದಿಯನ್ನು ಕೊಟ್ಟರು. ಅದಾದ ನಂತರ ಶ್ರೀಯುತ ಹರೀಶ್ ಆತ್ರೇಯ ಅವರು ಭಾಷಾ ಬಳಕೆಯಲ್ಲಿ ಪಾರ್ಥಸಾರಥಿಯವರು ಒಂದೇ ಒಂದು ಆಂಗ್ಲ ಪದವನ್ನು ಬಳಸದೆ ಭಾಷಣ ಮಾಡಿದ್ದು ಹಾಗೂ ಮಂಜುನಾಥ್ ಅವರು ಆರಿಸಿಕೊಂಡ ವಿಷಯ ಹೆಚ್ಚು ವಿಜ್ಞಾನಕ್ಕೆ ಸಂಭಂಧಿಸಿದ್ದರಿಂದ ಆಂಗ್ಲ ಪದಗಳು ಬಳಸುವುದು ಅನಿವಾರ್ಯವಾಗಿತ್ತು ಎಂದು ತಿಳಿಸಿಕೊಟ್ಟರು.
ನಂತರ ವಾರ್ಷಿಕೋತ್ಸವಕ್ಕೆ ವಿಶೇಷ ಆಹ್ವಾನಿತರಾಗಿ ಬಂದಿದ್ದ ಸಂಪದ ಸೃಷ್ಟಿಕರ್ತ ಶ್ರೀಯುತ ಹರಿಪ್ರಸಾದ್ ನಾಡಿಗರು ವಿಶೇಷ ಭಾಷಣವಾಗಿ ಸಂಪದ ನಡೆದು ಬಂದ ಹಾದಿಯನ್ನು ವಿವರಿಸಿದರು. ಏಳನೇ ವರ್ಷಕ್ಕೆ ಕಾಲಿಡುತ್ತಿರುವ ಸಂಪದದಲ್ಲಿ ೩೫೦೦೦ ಸಾವಿರಕ್ಕೂ ಹೆಚ್ಚು ಲೇಖನಗಳು, ೧೭೫೦೦೦ ಪ್ರತಿಕ್ರಿಯೆಗಳು ಇದೆ ಎಂದು ಕೇಳಿ ಅತೀವ ಆಶ್ಚರ್ಯ ಉಂಟಾಯಿತು. ಯಾವುದೇ ಫಲಾಪೇಕ್ಷೆಯಿಲ್ಲದೆ ಕನ್ನಡ ಸೇವೆಗಾಗಿ ಸಂಪದ ಎಂಬ ಸುಂದರ ತಾಣ ನಡೆಸುತ್ತಿರುವ ಹರಿಪ್ರಸಾದ್ ಹಾಗೂ ಅವರ ತಂಡಕ್ಕೆ ವಾಕ್ಪಥ ತಂಡದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
ನಂತರ ಶ್ರೀಯುತ ಸಚೇತನ್ ಭಟ್ ಅವರು ಮಾತನಾಡಿ ವಾಕ್ಪಥದ ಹನ್ನೆರಡನೆ ಗೋಷ್ಠಿ ಅವರಿಗೆ ಸಂಪೂರ್ಣ ತೃಪ್ತಿ ಕೊಟ್ಟಿರುವುದಾಗಿ ತಿಳಿಸಿ ಅಧಿಕೃತ ಮುಕ್ತಾಯ ಹಾಡಿದರು.

Wednesday 15 February, 2012

ವರುಷ ತುಂಬಿದ ಹರುಷದ ಸಂಭ್ರಮದಲ್ಲಿ: ವಾಕ್ಪಥ ೧೨ ನೇ ಹೆಜ್ಜೆ

ವರುಷ ತುಂಬಿದ ಹರುಷದ ಸಂಭ್ರಮದಲ್ಲಿ: ವಾಕ್ಪಥ ೧೨ ನೇ ಹೆಜ್ಜೆ




ವಾಕ್ಪಥ ತನ್ನ ಮೊದನೆಯ ವರುಷ ಸಂಭ್ರಮದಿಂದ ಪೂರೈಸಿದ ಸಂದರ್ಭ ಪುಳಿಯೊಗೆರೆ ಪಾಯಿಂಟ್  ಮೇಲೆ ಸೃಷ್ಟಿ ವೆಂಚರ್ಸ್
ನಲ್ಲಿ ಹುಟ್ಟು ಹಬ್ಬವನ್ನು ಆಚರಿಸಿದ ಪರಿ ಹೀಗಿತ್ತು


ಸಂಪದದ ಮೂಲಕವಾಗಿಯೇ ಹರಡಿಕೊಂಡ ಈ ವಾಕ್ಪಥದ ವರುಷದ ಸಂಭ್ರಮದ ಹರಹಿಗೆ ದನಿಗೂಡಿಸಿ ಗರಿ ಮೂಡಿಸಲು ಸಂಪದದ ಹರಿಕಾರರಾದ ಶ್ರೀಯುತ ಹರಿ ಪ್ರಸಾದ್ ನಾಡಿಗ ದಂಪತಿಗಳೂ ಸೇರಿದ್ದುದು ಮಹತ್ತರ ವಿಶೇಷ.

ಅದಕ್ಕೆಂದೇ ಎಂದಿನಂತೆ ವಾಕ್ಪಥ  ಕಾರ್ಯಕ್ರಮಗಳು  ಮತ್ತು ಅನಂತರ ವಿಷೇಷವಾಗಿ ಡಯಾಬಿಟೀಸ್ ಬಗ್ಗೆ ಖ್ಯಾತ ವೈದ್ಯರುಗಳೊಡನೆ ಸಂವಾದ ಕಾರ್ಯಕ್ರಮವನ್ನೂ ಸೃಷ್ಟಿ ವೆಂಚರ್ಸ್ ಜತೆ ಜಂಟಿಯಾಗಿ ಆಯೋಜಿಸಿತ್ತು.

Monday 30 January, 2012

ಆಧುನಿಕತೆಯ ಪಲ್ಲಟಗಳು

ಇವತ್ತು ಈ ವಾಕ್ಪಥ ೧೦ ರ ಗೋಷ್ಠಿಯಲ್ಲಿ ನಾನು ತಮ್ಮ ಮುಂದೆ ಪ್ರಸ್ತುತ ಪಡಿಸಲಿರುವ ವಿಷಯ ' ಆಧುನಿಕತೆಯ ಪಲ್ಲಟಗಳು.' ಮುಂದಿನ ಕೆಲವು ನಿಮಿಷಗಳ ಕಾಲ ನಾವು , ನಮ್ಮ ಕರಾವಳಿ , ಮಲೆನಾಡು ಅಥವಾ ಇನ್ಯಾವುದೇ ಹಳ್ಳಿಗಳ   ಕೃಷಿ ಆಧಾರಿತವಾಗಿದ್ದ ನಮ್ಮ ಬದುಕಿನ ದಿಕ್ಕು ,ಹೇಗೆ  ಆಧುನಿಕವಾಗುವ ಹಂಬಲದಲ್ಲಿ , ಆಧುನಿಕತೆಯ ಹಿಂದಿನ ರಕ್ಕಸ ಶಕ್ತಿಯಾದ ಬಂಡವಾಳಶಾಹಿ ದಿಕ್ಕಿನ ಕಡೆಗೆ ಮುಖ ಮಾಡಿ , ವ್ಯಾಪಾರೀ ಮನೋಭಾವದ ಎಡೆಗೇ ಮುಖ ಮಾಡಿ ನಿಂತಿದೆ ಎನ್ನುವದನ್ನು ಚರ್ಚಿಸೋಣ.
ಮೊದಲಿಗೆ ಆಧುನಿಕತೆ ಎಂದರೆ ಏನು ಎನ್ನುವದನ್ನು ನೋಡೋಣ. ಆಧುನಿಕತೆಯನ್ನ ಸರಳವಾದ ಶಬ್ದಗಳಲ್ಲಿ ಹೇಳಬೇಕು ಎಂದರೆ ಬದಲಾವಣೆ. ಒಂದರಿಂದ ಇನ್ನೊಂದಕ್ಕೆ ಬದಲಾಗುವದು. ಈ ಬದಲಾವಣೆಯ ಪರಿಣಾಮ ಧನಾತ್ಮಕವಾಗಿ ಇರಬಹುದು ಅಥವಾ ಋಣಾತ್ಮಕವಾಗಿರಬಹುದು. ಬದಲಾವಣೆಯ ಪ್ರಭಾವ ಋಣಾತ್ಮಕವಾಗಿದ್ದಾರೆ ಅದನ್ನು ಪಲ್ಲಟ ಅಂಥ ಕರೆಯಬಹುದು.
ಹಾಗಾದ್ರೆ ಈ ಪಲ್ಲಟಗಳು ಎಲ್ಲಿಂದ ಪ್ರಾರಂಭವಾದವು? ಸಾಮಾನ್ಯವಾಗಿ ನಾವು ನಮ್ಮ ಎಲ್ಲ ಋಣಾತ್ಮಕ ಬದಲಾವಣೆಗಳಿಗೆ ಮಾಹಿತಿ ತಂತ್ರಜ್ಞಾನ ಯುಗವನ್ನ , ಪಾಶ್ಚಿಮಾತ್ಯ ದೇಶಗಳನ್ನ ದೂಷಿಸುತ್ತೇವೆ. ಹಾಗಾದರೆ ಅವೇ ಈ ಪಲ್ಲಟಗಳ ಮೂಲವೇ? ದಿಕ್ಕನ್ನು ಹುಡುಕುತ್ತಾ ಹೋದಂತೆ ಕಾಣಸಿಗುವ ಮೂಲವೇ ಬೇರೆ.
ಇವತ್ತಿನ ಈ ಪಲ್ಲಟಗಳ ಮೂಲ ಶುರುವಾಗಿದ್ದು ಸುಮಾರು ಮೂರು ನಾಲ್ಕು ತಲೆಮಾರುಗಳ ಹಿಂದೆ.
ಮೊದಲೆಲ್ಲ ನಮ್ಮ ಹಳ್ಳಿಗಳು ಅದು ಮಲೆನಾಡು ಇರಬಹುದು ಅಥವಾ ಕರಾವಳಿ ಇರಬಹುದು , ಅಚ್ಚ ಹಸಿರಿನಿಂದ ಕೂಡಿದ ಗದ್ದೆ ಬಯಲುಗಳಾಗಿದ್ದವು. ಆಹಾರ ಧಾನ್ಯಗಳು ನಮ್ಮ ಮೊದಲ ಪ್ರಾಶಸ್ತ್ಯವಾಗಿದ್ದವು. ನಿಧಾನವಾಗಿ ನಾವು ಆ ಹಸಿರು ಗದ್ದೆ ಬಯಲುಗಳನ್ನ ಕಡಿದು , ತುಂಡು ತುಂಡು ಮಾಡಿ ಅಲ್ಲಿ ವಾಣಿಜ್ಯ ಬೆಳೆಗಳನ್ನ ಬೆಳೆಸಲಿಕ್ಕೆ ಪ್ರಾರಂಭ ಮಾಡಿದೆವು. ಭತ್ತ ಬೆಳೆಯುತಿದ್ದ ಜಾಗಗಳಲ್ಲಿ ಅಡಿಕೆ , ಹೊಗೆಸೊಪ್ಪು ಬೆಳೆಯಲು ಪ್ರಾರಂಭವಾಯಿತು. ವಾಣಿಜ್ಯ ಬೆಳೆಗಳನ್ನ ಬೆಳೆದಂತೆ ಹಣದ ಹರಿವು ಜಾಸ್ತಿ ಆಗತೊಡಗಿತು. ಹಣವಿದ್ದಲ್ಲಿ ಕೊಂಡಿಗಳು ಗಟ್ಟಿಯಾಗಿ ಇರುವದು ಕಷ್ಟ. ಕುಟುಂಬಗಳ ಕೊಂಡಿ ನಿಧಾನವಾಗಿ ಕಳಚತೊಡಗಿತು. ಹೀಗೆ ಭೂಮಿಯ ಜೊತೆ ಜೊತೆಗೆ ನಾವು ತುಂಡು ತುಂಡಾಗಿ ಹರಿದು ಹೋಗತೊಡಗೆದೆವು. ತುಂಡು ಭೂಮಿಗೆಲ್ಲ ತುಂಡರಸರು ಹುಟ್ಟತೊಡಗಿದರು. ಹೊಸ ಹೊಸ ಮನೆಗಳು ಸೃಷ್ಟಿಯಾದವು. ಮನೆಗೊಂದು ಮನೆತನಗಳಾಯಿತು. ರಸ್ತೆಗಳು ಹುಟ್ಟಿ ನಕಾಶೆ ಬದಲಾದಂತೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಬದಲಾಗತೊಡಗಿದೆವು. ಸಣ್ಣ ಸಣ್ಣ ಭೂಮಿಗಳ ಜೊತೆ ಜೊತೆಗೆ ಮನಸ್ಸು ಸಣ್ಣವಾಗುತ್ತಾ ಹೋಯಿತು. ಭಾವನಾತ್ಮಕತೆಯ ಕೊಂಡಿ ಸಡಿಲವಾಗ ತೊಡಗಿತು. ನಾವು  ಬದಲಾವಣೆಯ ಬುರುಜನ್ನ ನಮ್ಮ ಸುತ್ತ ಕಟ್ಟಿಕೊಳ್ಳುತ್ತ ಹೋದಂತೆ ಒಳಗೆ ಸಂಬಂದಗಳ ಹರಿವು ಕಡಿಮೆಯಾಗ ತೊಡಗಿತು.ಚಲನಶೀಲ , ಭಾವನಾತ್ಮಕವಾಗಿದ್ದ ಸಮುದಾಯ ನಿಧಾನವಾಗಿ ನಿರ್ಜೀವವಾಗತೊಡಗಿತು.
ಒಂದು ಸರಳ ಉದಾಹರಣೆ ಕೊಡುತ್ತೇನೆ ನೋಡಿ , ಮೊದಲೆಲ್ಲ ಮದುವೆ ಅಂದರೆ ಅದೊಂದು ಊರಿನ ಹಬ್ಬವಾಗಿತ್ತು. ತಳಿರು , ತೋರಣ ಕಟ್ಟುವದು , ಮಂಟಪ ಕಟ್ಟುವದು ಅಥವಾ ಅಡುಗೆ ಮಾಡಿ ಬಡಿಸುವದು , ಬಂದವರಿಗೆ ಉಪಚಾರ ಮಾಡುವದು ಹೀಗೆ ಎಲ್ಲ ಕೆಲಸವನ್ನ ಊರವರೆಲ್ಲ ಸೇರಿ ಮಾಡುತಿದ್ದರು.  ಆದರೆ ಇವತ್ತು ಈ ಕೆಲಸಗಳನ್ನ ಮಾಡಲಿಕ್ಕೆ ಜನರೇ ಇಲ್ಲ. ಹಾಗಾಗಿ ಮದುವೆಗಳನ್ನ ಗುತ್ತಿಗೆ ಕೊಡಲಿಕ್ಕೆ ಶುರು ಮಾಡಿದ್ವಿ.  ತಳಿರು , ತೋರಣ ಕಟ್ಟುವದು , ಮಂಟಪ ಕಟ್ಟುವದು , ಉಪಚಾರ ಎಲ್ಲವನ್ನು ಇನ್ನೊಬ್ಬರಿಗೆ ಮಾರಿದ್ವಿ. ಮನೆಗಳ ಮುಂದಿನ ಮದುವೆ ಚಪ್ಪರ ಕಲ್ಯಾಣ ಮಂಟಪಗಳಿಗೆ ಸ್ಥಳಾಂತರವಾಯಿತು. ಗುತ್ತಿಗೆಯನ್ನು ತಗೊಂಡವರು ಮದುವೆ ನಡೆಸಿಕೊಟ್ಟರೇನೋ ಸರಿ ಆದರೆ ಅಲ್ಲಿ ಆತ್ಮೀಯತೆಯ ಕೊರತೆ ಕೊರತೆಯಾಗಿಯೆ ಉಳಿಯಿತು.
ಇವತ್ತು ನಮ್ಮ ಹಳ್ಳಿಗಳನ್ನು ಕಾಡುತ್ತಿರುವ ಇನ್ನೊಂದು ಭಯವೆಂದರೆ ಕಳಚುತ್ತಿರುವ ತಲೆಮಾರುಗಳ ಸರಪಳಿ.  ಹಳ್ಳಿಗಳು ಇವತ್ತು ವೃದ್ದಾಶ್ರಮ ಆಗುವ ಭೀತಿಯಲ್ಲಿವೆ. ಹಳ್ಳಿಗಳಲ್ಲಿ ವೇದವನ್ನ ಕಲಿತವರು ಶಹರಗಳಲ್ಲಿ ಆಧುನಿಕ ಪುಜಾರಿಗಳಾದರು , ಇನ್ನೂ ಹಲವರು ನಮ್ಮ ನಿಮ್ಮ ಹಾಗೆ ಶಹರದ ನೌಕರಿಗೆ ಜೋತು ಬಿದ್ದರು. ಹೀಗಾಗಿ ಇವತ್ತು ನೀವು ಹಳ್ಳಿಗಳಲ್ಲಿ ಹುಡುಕಿದರೆ ಕಾಣಸಿಗುವದು ಬೆರಳೆಣಿಕೆಯಷ್ಟು ನವಯುವಕರನ್ನು. ಪಲ್ಲಟಗಳ ಸ್ವರೂಪ ಎಷ್ಟು ಕ್ರೂರವೆಂದು ಹೇಳಲಿಕ್ಕೆ ಇನ್ನೂ ಒಂದು ಉದಾಹರಣೆ ಕೊಡುತ್ತೇನೆ ನೋಡಿ. ಇವತ್ತು ಮಲೆನಾಡಿನ ಹಲವೆಡೆ ತೀವ್ರವಾದ ಹೆಣ್ಣಿನ ಅಭಾವವಿದೆ. ಮದುವೆ ಆಗಬೇಕಾದರೆ ಗಂಡಿಗಿರುವ ಮುಖ್ಯ ಅರ್ಹತೆಗಳು ೩. ಬೆಂಗಳೂರಿನಲ್ಲಿ ಇರಬೇಕು. ಅಪ್ಪ ಅಮ್ಮಂದಿರ ಜೊತೆಗೆ ಇರಬಾರದು. ಹಾಗೂ ಊರಿನಲ್ಲಿ ಜಮೀನು ಇರಬೇಕು.!!
ಬೆಂಗಳೂರಿನಲ್ಲಿ ಇರಬೇಕು ಅನ್ನುವದು ಪಟ್ಟಣದ ಮೋಹ. ಅಪ್ಪ ಅಮ್ಮರ ಜೊತೆಗೆ ಇರಬಾರದು ಎನ್ನುವದು ನಮ್ಮ ಭಾವನಾತ್ಮಕತೆಯ ಕೊರತೆ, ಹಾಗಾದರೆ ಮೂರನೆಯದು ಯಾಕೆ?  ಯಾಕೆಂದರೆ ಎಲ್ಲೋ ಒಂದು ಕಡೆ ನಾವು ಶಹರದ ಜೀವನಕ್ಕೆ ಮುಖ ಮಾಡಿದರೂ ನಮ್ಮಲ್ಲಿ ಭೂಮಿಯೆಡೆಗಿನ ತುಡಿತ , ಮೋಹ ಹಾಗೆ ಇದೆ!! ಅದು ಇಲ್ಲದ ಇದನ್ನು ಒಪ್ಪಿಕೊಳ್ಳಲಾರದ ಸ್ಥಿತಿ..!
ಚರಿತ್ರೆಯ ಪುಟಗಳನ್ನ ಅವಲೋಕಿಸಿದರೆ ಇಂತಹ ಪಲ್ಲಟಗಳು ಕಾಲಘಟ್ಟಗಳಲ್ಲಿ ಸಾಮಾನ್ಯವೆ. ಆದರೆ ಕಾಲ ಪಲ್ಲಟಕ್ಕಾಗಿ ನಮ್ಮ ಕಾಲಘಟ್ಟವನ್ನು ಆಯ್ಕೆ ಮಾಡಿಕೊಂಡಿದೆ ಎಂದಾಗ ಅದು ಕ್ರೂರ ಆಯ್ಕೆಯಾಗಿ ತೋರುತ್ತದೆ.
ಹೀಗೆ ಇಂತಹ ಪಲ್ಲಟಗಳ ಕುರಿತು ವಿಷಾದವಾಗಿ ಮಾತನಾಡುವದರ ಹೊರತಾಗಿ ಬೇರೆನಾದರು ಮಾಡಲು ಸಾಧ್ಯವೇ ಎಂದು ತಮ್ಮ ಮುಂದೆ ಕಳವಳವನ್ನ ಪ್ರಶ್ನೆಯೊಂದಿಗೆ ದಾಟಿಸುತ್ತಾ ಮಾತನ್ನ ಮುಗಿಸುತಿದ್ದೇನೆ

Sunday 11 December, 2011

ವಾಕ್ಪಥ - ಹೆಜ್ಜೆ ೧೦ ವರದಿ


ವಾಕ್ಪಥ - ಹೆಜ್ಜೆ ೧೦ 


                                                               
ವಾಕ್ಪಥ ಹೆಜ್ಜೆ - ೧೦ ಎಂದಿನಂತೆ ನಿಗದಿತ ಎರಡನೆ ಬಾನುವಾರ ಅಂದರೆ ೧೦ ನೆ ಡಿಸೆಂಬರ್  ೨೦೧೧ ಬೆಳಗಿನ ಸಮಯ ೧೦-೧೫ ಗಂಟೆಗೆ ಬಸವನಗುಡಿಯ ಸೃಷ್ಟಿ ವೆಂಚರ್ಸ್ನ ಎರಡನೆ ಮಹಡಿಯಲ್ಲಿ ಪ್ರಾರಂಬ ವಾಯಿತು. ಈ ದಿನದ ಗೋಷ್ಥಿಯಲ್ಲಿ ಹೊಸ ಮುಖಗಳು ಗಮನ ಸೆಳೆದವು. ನಿಗದಿತ ಬಾಷಣಗಳು , ಆಶುಬಾಷಣಗಳು ಮನಸಿಗೆ ಮುದ ನೀಡಿದವು. ಮುಂದಿನ ವಾಕ್ಪಥದ ಬಗ್ಗೆಯಾಗಲಿ ೨೦೧೨ ಫೆಬ್ರುವರಿಯಲ್ಲಿ ನಡೆಯ ಬೇಕಾಗಿರುವ ವಾಕ್ಪಥದ ವಾರ್ಷಿಕ ಸಂಬ್ರಮದ ಕಾರ್ಯಕ್ರಮದ ಬಗ್ಗೆಯಾಗಲಿ ಎಲ್ಲ ಸದಸ್ಯರು ಸಕ್ರಿಯವಾಗಿ ಬಾಗವಹಿಸಿ ವಾಕ್ಪಥ ಹೆಜ್ಜೆ ೧೦ ಸುನಿಲ್ ದಾಸಪ್ಪ ನವರ ನೇತೃತ್ವದಲ್ಲಿ ಯಶಸ್ವಿ ಕಾರ್ಯಕ್ರಮವಿನಿಸಿತು.


ವಾಕ್ಪಥ ಹೆಜ್ಜೆ ೧೦ ಕಾರ್ಯಕ್ರಮದ ವಿವರಗಳು:


  ಸುನಿಲ್ ದಾಸಪ್ಪನವರು ಕಾರ್ಯಕ್ರಮದ ನಿರ್ವಹಣೆ ಹೊತ್ತು ಮೊದಲಿಗೆ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬಾಷಣಗಾರರ ಪರಿಚಯ, ಮತ್ತು ಅವರು ಆರಿಸಿಕೊಂಡಿರುವ ವಿಷಯವನ್ನು ತಿಳಿಸಿದರು. ಸಮಯದ ನಿರ್ವಹಣೆಯನ್ನು ಗೋಪಿನಾಥರಿಗೆ ವಹಿಸಲಾಯಿತು.

  ಗೋಪಿನಾಥರು ಬಾಷಣಕಾರರಿಗೆ ಮತ್ತು ಆಶುಬಾಷಣದವರಿಗೆ ನಿಗದಿಯಾಗಿರುವ ಸಮಯಾವಕಾಶ ತಿಳಿಸಿ, ಸಭೆಯ ನಿಯಮಗಳನ್ನು ವಿವರಿಸಿ ತಮ್ಮ ಹಸಿರು ಹಳದಿ ಹಾಗು ಕೆಂಪು ಬಾವುಟಗಳ ಸಮಯ ದಂಡ ಹಿಡಿದು ಸಿದ್ದರಾಗಿ ಕುಳಿತರು. ಹಾಗೆಯೆ ಎಂದಿನಂತೆ ಅವರ ಮುಂದೆ ಅವರ ಕ್ಯಾಮರ ಸಹ ಸಿದ್ದವಾಗಿತ್ತು ವಾಕ್ಪಥದ ನಡಿಗೆಗನ್ನು ಚಿತ್ರಿಸಲು.


  ಮೊದಲಿಗೆ ನಿರ್ವಾಹಕರು ಶ್ರೀ.ಸುಚೇತನ್ ಭಟ್ ರವರನ್ನು ಬಾಷಣಕ್ಕೆ ಅಹ್ವಾನಿಸಿದರು , ಇವರು ಬಾಷಣಕ್ಕೆ ಆರಿಸಿಕೊಂಡಿದ್ದ ವಿಷಯ

  'ಅಧುನಿಕತೆಯ ಪಲ್ಲಟ'
   
  ಸುಚೇತನ್ ಭಟ್ ರವರ ಪರಿಚಯ : ವೃತ್ತಿಯಲ್ಲಿ ಅಭಿಯಂತರಾಗಿರುವ ಇವರಿಗೆ ಇತಿಹಾಸ ಸಾಹಿತ್ಯದಲ್ಲಿ ಆಸಕ್ತಿ.


  ಬಾಷಣದ ವಿವರ : ಭಟ್ ರವರು ಅದುನಿಕತೆಯ ಪಲ್ಲಟ ನಮ್ಮ ಬದುಕಿನ ಮೇಲೆ ಮಾಡಿರುವ ಪರಿಣಾಮಗಳನ್ನು ಯಶಸ್ವಿಯಾಗಿ ವಿವರಿಸಿದರು. ಭಾರತ ಎಂದಿಗು ಕೃಷಿಪ್ರಧಾನವಾದ ದೇಶ. ಅದರೆ ಅದು ಅದುನಿಕತೆಯ ಪ್ರಭಾವದಿಂದ ತನ್ನ ಹಾದಿ ಬದಲಿಸಿ ಹೇಗೆ ಬಂಡವಾಳಶಾಯಿಗಳ ಹಿಡಿತದತ್ತ ಹೊರಳಿತು ಎಂದು ವಿವರಿಸಿದರು. ಅವರು ಹೇಳಿದಂತೆ ಪಲ್ಲಟವೆಂದರೆ ಬದಲಾವಣೆ , ಅದುನಿಕತೆಯತ್ತ ಪಲ್ಲಟವಾಗುವಾಗ ಋಣಾತ್ಮಕ ಹಾಗು ಧನಾತ್ಮಕ ಪರಿಣಾಮಗಳಿರುತ್ತವೆ, ಈ ಋಣಾತ್ಮಕ ಪರಿಣಾಮಗಳನ್ನು ನಾವು ಪಲ್ಲಟಗಳೆಂದು ಗುರುತಿಸುತ್ತೇವೆ ಎಂದರು. ಈ ಬಂಡವಾಳಶಾಯಿಗಳ ಪ್ರಭಾವ ಕೃಷಿಯ ಮೇಲೆ ತನ್ನ ಪರಿಣಾಮ ಬೀರಿತು ಹಾಗಾಗಿ ಅಹಾರಪ್ರಧಾನವಾಗಿದ್ದ ಬೇಸಾಯ,  ವಾಣಿಜ್ಯ ಬೆಳೆಗಳತ್ತ ಹೊರಳಿತು. ಹಣದ ಹರಿವು ಜಾಸ್ತಿಯಾಗುತ್ತ ಹೋದಂತೆ, ಮಾನಸಿಕ ಹಾಗು ಭಾವನಾತ್ಮಕ ಕೊಂಡಿಗಳು ಬೇರ್ಪಟ್ಟವು. ಹೀಗಾಗಿ ಸಂವಹನ ಕೊರತೆಯುಂಟಾಯಿತು, ಪರಿಣಾಮ ಕುಟುಂಬಗಳು ಛಿದ್ರಗೊಂಡವು. ಕುಟುಂಬಗಳು ಸಣ್ಣ ಘಟಕಗಳಾಗಿ ಹರಿದು ಹೋದಂತೆ ಹಿರಿಯರಿಂದ ಬಂದ ನೆಲವು ಸಣ್ಣ ಸಣ್ಣ ಹೋಳುಗಳಾಗಿ ಬೇಸಾಯದ ಮೇಲು ಋಣಾತ್ಮಕ ಪರಿಣಾಮ ಬೀರಿತು ಎಂದು ತಿಳಿಸಿದರು.
    ಹಣದ ಪ್ರಭಾವದಿಂದ ಹಳ್ಳಿಗಳ ಜನರು ಪಟ್ಟಣಕ್ಕೆ ವಲಸೆ ಹೊರಟರು, ಹಳ್ಳಿಯ ಜೀವನಕ್ಕಿಂತ ಪಟ್ಟಣ ಮನಸಿಗೆ ಪ್ರಿಯವಾಯಿತು, ಆದರೆ ಬೇಸಾಯವನ್ನೆ ನಂಬಿದ್ದ ಹಿರಿಯರು ಹಳ್ಳಿಗಳನ್ನು ತೊರೆದು ಬರದಾದರು, ಹೀಗಾಗಿ ಹಳ್ಳಿಗಳಲ್ಲಿರುವ ಮನೆಗಳು ಈಗ ವೃದ್ದಾಶ್ರಮವಾಗಿ ಉಳಿದಿದೆ ಎಂದರು.
 
   ಕಾಲಘಟ್ಟದಲ್ಲಿ ಇಂತಹ ಬದಲಾವಣೆಗಳು ಸಾಮಾನ್ಯ ಎಂದ ಭಟ್ ರವರು ಇಂತಹುದು ಇತಿಹಾಸದಲ್ಲಿ ನಡೆಯುತ್ತಲೆ ಬಂದಿದೆ ಆದರೆ ಇತಿಹಾಸ ಇಂದಿನ ಬದಲಾವಣೆಗೆ ನಮ್ಮ ಕಾಲಮಾನವನ್ನು ಆಯ್ದುಕೊಂಡಿದೆ ಹೀಗಾಗಿ ನಾವೆಲ್ಲ ಇಂದಿನ ಪಲ್ಲಟಗಳಿಗೆ ಒಡ್ಡಿಕೊಳ್ಳಬೇಕಾಗಿದೆ ಎಂದು ತಿಳಿಸಿ ಇದು ಅನಿವಾರ್ಯ ಎನ್ನುತ್ತ ತಮ್ಮ ಮಾತು ಮುಗಿಸಿದರು.
   
   ನಂತರ ನಿರ್ವಾಹಕರು ಶ್ರೀಮತಿ . ಪದ್ಮಶ್ರಿ ಮೂರ್ತಿಯವರನ್ನು ಎರಡನೆ ಬಾಷಣಕಾರರನ್ನಾಗಿ ಸ್ವಾಗತಿಸಿದರು, ಪದ್ಮಶ್ರಿ ರವರು ಆರಿಸಿಕೊಂಡಿದ್ದ ವಿಷಯ
"ವಿವಾಹ : ಮತ್ತು ವಿಚ್ಚೇದನ"

  ಶ್ರೀಮತಿ ಪದ್ಮಶ್ರೀ ಮೂರ್ತಿಯವರ ಪರಿಚಯ : ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಮತ್ತು ಸಾಧನೆ ಮಾಡಿರುವ ಇವರು ವಿವಾಹಪೂರ್ವ ಸಮಾಲೋಚನೆ (ಕೌನ್ಸಿಲಿಂಗ್)
  ಗಾಗಿ ಇರುವ ಸಂಸ್ಥೆಯ ಜೊತೆ ಗುರುತಿಸಿಕೊಂಡಿದ್ದಾರೆ. ಸ್ವಪ್ರೇರಿತವಾಗಿ ಕೌನ್ಸಿಲಿಂಗ್ ಗಳನ್ನು ನಡೆಸುತ್ತಿದ್ದಾರೆ.


  ಬಾಷಣದ ವಿವರ : ಭಾರತ ದೇಶದಲ್ಲಿನ ಸಂಪ್ರದಾಯ ಬಹುಷಃ ವಿವಾಹನಂತರದ ಸಹಬಾಳ್ವೆಗಾಗಿ ವಿದೇಶಗಳಲ್ಲಿ ಪ್ರಖ್ಯಾತ, ಮದುವೆ ಎಂದರೆ ಭಾರತ ಎನ್ನಿಸುವಷ್ಟರ ಮಟ್ಟಿಗೆ , ಆದರೆ ಅದೇ ಭಾರತದಲ್ಲಿ ಇಂದು ಹೆಚ್ಚುತ್ತಿರುವ ವಿವಾಹ ವಿಚ್ಚೇದನಗಳು ಗಾಭರಿ ಹುಟ್ಟಿಸುವ ಮಟ್ಟಿಗೆ ಇದೆ. ಮದುವೆಯಾದ ಒಂದೆರಡು ವರ್ಷಗಳಲ್ಲಿ ಕೆಲವೊಮ್ಮೆ ಆರು ತಿಂಗಳಲ್ಲೆ ವಿಚ್ಚೇದನಕ್ಕೆ ಮೊರೆಹೋಗುತ್ತಿದ್ದಾರೆ ಅದು ಕೆಲವೊಮ್ಮೆ ಕ್ಷುಲ್ಲಕ ಕಾರಣಕ್ಕೆ ಎನ್ನುವುದು ಅಚ್ಚರಿಯ ವಿಷಯ. ಹಿಂದಿನ ದಿನಗಳಲ್ಲಿ ಮದುವೆ ಚಿಕ್ಕ ವಯಸ್ಸಿನಲ್ಲಿ ನಡುಸುತ್ತ ಇದ್ದುದ್ದರಿಂದ ಮುಂದಿನ ವದು ವರರ ಜೀವನದ ಬಗ್ಗೆ ಇರುವ ಆತಂಕದಿಂದ ಜಾತಕ ಮುಂತಾದ ಪದ್ದತಿಗಳಿಗೆ ಮೊರೆಹೋಗುತ್ತಿದ್ದರು. ಮದುವೆಗೆ ಮೊದಲು ಗಂಡು ಹೆಣ್ಣುಗಳಲ್ಲಿ ಚಿಂತಿಸುವು , ತನ್ನ ವರ ವದುವನ್ನು ಆಯ್ಕೆ ಮಾಡುವ ಪ್ರೌಡತೆ ಇರದ ಕಾರಣಕ್ಕಾಗಿ ಜಾತಕ, ವಂಶ ಮುಂತಾದವುಗಳೆ ಪ್ರಾಮುಖ್ಯ ವಹಿಸಿದ್ದವು.


    ಆದರೆ ಈಗಿನ ಬದಲಾದ ಸಂದರ್ಬಗಳಲ್ಲಿ ಪ್ರೇವ ವಿವಾಹವಾಗಲಿ ಅಥವ ನಿರ್ದರಿಸಿದ ವಿವಾಹವಾಗಲಿ ಸಂವಹನ ಕೊರತೆ, ಮದುವೆಯ ನಂತರದ ದಾಂಪತ್ಯದ ಹೊಣೆಯನ್ನು ಹೊರಲಾರದ ಅಸಹಾಯಕತೆ, ಅಥವ ಅಸಹನೆ ವಿಚ್ಚೇದನಕ್ಕೆ ದಾರಿಯಾಗುತ್ತಿವೆ, ಹಿಂದೆಲ್ಲ ಹಿರಿಯರು ನಡೆಸಿದ್ದ ವಿವಾಹ ನಂತರ ಗಂಡ ಹೆಂಡತಿಯ ನಡುವಿನ ವಿವಾದಗಳು ಹಿರಿಯರ ಮದ್ಯಸ್ಥಿಕೆಯಿಂದಲೆ ಬಗೆಹರಿದು ಮನಸು ಹೊಂದಿಕೊಂಡು ಹೋಗುವ ಮಟ್ಟಕ್ಕೆ ಬರುತ್ತಿತ್ತು. ಈಗಿನ ವಿವಾಹಗಳಲ್ಲಿ ಸ್ವತಂತ್ರ ನಿರ್ದಾರಗಳಿಂದಾಗಿ ವಿವಾಹ ನಂತರ ಗಂಡ ಹೆಂಡತಿ ನಡುವೆ ಸಂವಹನ ಕೊರತೆಗಳುಂಟಾಗುತ್ತವೆ, ಹಿರಿಯರ ಮಾತಿಗೆ ಬೆಲೆಕೊಡುವ ಹೊಂದಿಕೊಳ್ಳುವ ದಿನಗಳೀಗ ಇಲ್ಲ.


   ಅಲ್ಲದೆ ಇಂದಿನ ದಿನಗಳಲ್ಲಿ ಹೆಣ್ಣಿಗೆ ಮದುವೆಯ ನಂತರವು ಹೊರಗಿನ ಪ್ರಪಂಚದ ಸಂಪರ್ಕ ಜಾಸ್ತಿ, ಮೊದಲಿಗಿಂತ ಹಣಕಾಸಿನ ವಿಚಾರದಲ್ಲಿ ಹೆಣ್ಣು ಈಗ ಪ್ರಭಲಳು  ಹಾಗಾಗಿ ಗಂಡಿಗೆ ಹೊಸ ವಾತಾವರಣಾಕ್ಕೆ ಹೊಂದಿಕೊಳ್ಳಲು ಕಷ್ಟವೆನಿಸುತ್ತಿದೆ, ಹಾಗೆಯೆ ಹೆಣ್ಣು ತನಗೆ ಸಾಮಾಜಿಕವಾಗಿ ಇರುವ ಸೌಲಬ್ಯಗಳನ್ನು ದುರಪಯೋಗಪಡಿಸಿಕೊಳ್ಳುತ್ತಿರುವುದು ಸಹ ಸಂಸಾರದಲ್ಲಿನ ಪಲ್ಲಟಗಳಿಗೆ ಕಾರಣವಾಗುತ್ತಿದೆ.


  ಹೀಗಾಗಿ ವದು ವರರಿಗೆ ವಿವಾಹ ಪೂರ್ವ ಸಮಾಲೋಚನೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಈ ಮೂಲಕ ಪರಸ್ಕರರಿಗೆ ಸಂಸಾರದಲ್ಲಿ ಅವರ ಕರ್ತವ್ಯ ಹಾಗು ಜವಾಬ್ದಾರಿಗಳನ್ನು ಮನವರಿಕೆ ಮಾಡಿದಲ್ಲಿ ವಿವಾಹನಂತರದ ಘರ್ಷಣೆಗಳು ಕಡಿಮೆಯಾಗುತ್ತದೆ ಮತ್ತು ಆ ಮೂಲಕ ವಿಚ್ಚೇದನಗಳು ಇಳಿಮುಖವಾಗುವ ಬರವಸೆ ಶ್ರೀಮತಿ ಪದ್ಮಶ್ರೀ ಮೂರ್ತಿ ಯವರದು.


ಬಾಷಣಗಳ ವಿಮರ್ಷೆ:


   ಮೊದಲ ಬಾಷಣದ ವಿಮರ್ಷೆ ಶ್ರೀ ಮಂಜುನಾಥರವರಿಂದ :
  ಸುಚೇತನ ಭಟ ರವರ ಬಾಷೆಯಮೇಲಿನ ಹಿಡಿತ ಚೆನ್ನಾಗಿದೆ, ಅವರ ಮಾತು ಸುಲಲಿತವಾಗಿದೆ ಎಂದು ತಿಳಿಸಿದ ಮಂಜುನಾಥರು ಬಾಷಣಕಾರರು ಅದುನಿಕತೆಯ ಪಲ್ಲಟಗಳು ಕೇವಲ ಗ್ರಾಮೀಣ ಜನರಿಗಷ್ಟೆ ಸೀಮಿತವಲ್ಲ ಅದು ನಗರದ ಜನರ ಮೇಲು ಪ್ರಭಾವ ಬೀರಿದೆ ಹಾಗಾಗಿ ಅದನ್ನು ಸೇರಿಸಿದ್ದರೆ ಬಾಷಣ ಪರಿಪೂರ್ಣವಾಗಿರುತ್ತಿತ್ತು ಎಂದರು.


  ಎರಡನೆ ಬಾಷಣದ ವಿಮರ್ಷೆ ಜಯಂತ ರಾಮಚಾರ್ :
   ಶ್ರೀಮತಿ ಪದ್ಮಶ್ರೀ ರವರ ಭಾವನೆಗಳನ್ನು ಅನುಮೋದಿಸಿದ ಜಯಂತ ರವರು ಅವರು ಕಂಡ ಕೆಲ ಉದಾಹರಣೆಗಳನ್ನು ನೀಡಿ , ಬಾಷಣಕಾರರು ಕೊಟ್ಟಿರುವ ಸಮಯದಲ್ಲಿ ಪರಿಣಾಮಕಾರಿಯಾಗಿ ವಿಷಯ ಮಂಡನೆ ಮಾಡಿದ್ದಾರೆ ಎನ್ನುತ್ತ ಇಂದಿನ ಈ ಸಮಸ್ಯೆಗಳಿಗೆಲ್ಲ ಅಹಂಭಾವಗಳ ತಾಕಲಾಟವೆ ಕಾರಣವೆಂದರು.


  ನಂತರ ನಡೆದ ಆಶುಬಾಷಣದ ನಿರ್ವಹಣೆಯನ್ನು ಶ್ರೀ ರಘು ಎಸ್ ಪಿ ರವರು ವಹಿಸಿದರು. ಅವರು ಇಂದಿನ ವಾಕ್ಪಥ ಹೆಜ್ಜೆ ೧೦ ಆರಿಸಿ ಕೊಂಡಿದ್ದ ಆಶುಬಾಷಣದ ವಿಷಯ ಇಂದಿನ ರೈತನ ಬದುಕು ಹಾಗು ಅದು ನಮ್ಮ ಮೇಲೆ ಮಾಡಬಹುದಾದ ಪ್ರಭಾವ ಹಾಗಿ ಸಂಬಂದಿಸಿದಂತೆ ನಮ್ಮ ಅನುಭವ.


 ಪ್ರಭುಮೂರ್ತಿ : ನೇರವಾಗಿ ನನಗೆ ರೈತನ ಬದುಕಿನ ಬಗ್ಗೆ ಅನುಭವವಿಲ್ಲ ಎಂದ ಅವರು ತಾವು ಸಿನಿಮಾ, ಪತ್ರಿಕೆ ಓದಿನ ಮೂಲಕ ಅರಿತಿರುವುದಾಗಿ ತಿಳಿಸಿದರು. ನಂತರ ಅವರು ರೈತನ ಬದುಕು ಸದಾ ರಿಸ್ಕ್ ನಲ್ಲಿರುತ್ತದೆ ಎನ್ನುತ್ತ , ಪಟ್ಟಣದಲ್ಲಿರುವ ಸಣ್ಣ ವ್ಯಾಪರಿಗಳ ಬದುಕು ಸಹ ಅದೆ ರಿಸ್ಕ್ ನಲ್ಲಿರುತ್ತದೆ, ಎಂದು ತಿಳಿಸಿ, ಮಾದ್ಯಮಗಳು ಏಕೊ ಸದಾ ರೈತನಿಕೆ ಕೊಡುವ ಪ್ರಾಮುಖ್ಯ ವ್ಯಾಪರಿಗಳಿಗೆ ಅಥವ ನಗರದ ಕಾರ್ಮಿಕರಿಗೆ ಕೊಡುವದಿಲ್ಲ ಎಂದರು.


 ಪ್ರಸನ್ನ ಕುಲಕರ್ಣಿ: ಅವರು ತಾವು ಸಹ ರೈತನ ಜೀವನದ ನೇರ ಅನುಭವವಿಲ್ಲ ಎಂದು ತಿಳಿಸಿ ಅವರ ಕಷ್ಟಗಳು ಹೇಗೊ ಬಗೆಹರಿದರೆ ಸಾಕು ಎಂದು ಹಾರೈಸಿದರು.


 ಹರೀಶ್ : ಇವರು ತಾವು ಸಹ ರೈತ ಕುಟುಂಬದ ಹಿನ್ನಲೆಯಿಂದ ಬಂದವರೆಂದು ವಿವರಿಸಿ, ರೈತನ ಕಷ್ಟಗಳನ್ನೆಲ್ಲ ಮಾತಿನಲ್ಲಿ ಕಟ್ಟಿ ಇಂದಿನ ರೈತ ಅಹಾರದ ಬೆಳೆಗಿಂತ ವಾಣಿಜ್ಯ ಬೆಳೆಗೆ ನೀಡುತ್ತಿರುವ ಪ್ರಾಶಸ್ತ್ಯದ ಬಗೆಗೆ ಚಿಂತಿಸಿದರು.


ಪಾರ್ಥಸಾರಥಿ :
ಇವರು ರೈತನ ಬಗ್ಗೆ ವಿವರಿಸುತ್ತ. ಪ್ರಭು ಮೂರ್ತಿಯವರ ಮಾತುಗಳನ್ನು ವಿವರಿಸಿ ರೈತನಿಗು ಮತ್ತು ವ್ಯಾಪರಿಗು ಹೋಲಿಸುವುದು ಪ್ರಸ್ತುತ ಸರಿ ಹೊಂದುವದಿಲ್ಲ. ರೈತನ ಸಂಕಷ್ಟಗಳೆ ಬೇರೆ ಎನ್ನುತ್ತ ಮಾತು ಮುಗಿಸಿದರು.


 ನಂತರ ರಘುರರವರು ಆಶುಬಾಷಣದ ಎಲ್ಲ ಬಾಷಣಗಳನ್ನು ಸಮನ್ವಯಗೊಳಿಸುತ್ತ ತಮ್ಮ ಪಾತ್ರ ನಿರ್ವಹಿಸಿದರು.


ನಂತರ ಸಮಯ ಪರಿಪಾಲಕ ಗೋಪಿನಾಥರು ಬಂದು ಬಾಷಣಕಾರರು ಹಾಗು ಆಶುಬಾಷಣದವರು ತೆಗೆದು ಕೊಂಡ ಸಮಯದ ಬಗ್ಗೆ ತಿಳಿಸಿ, ಕೆಂಪು ತೋಸಿಸಿದ ತಕ್ಷಣ ಅನಗತ್ಯವಾಗಿ ಗಾಬರಿಮಾಡಿ ಮಾತು ಮುಗಿಸಬಾರದೆಂದು ತಿಳಿಸಿದರು.


ಬಾಷಬಳಕೆ:  ಶ್ರೀ ಹರೀಶ್ ಆತ್ರೆಯರು ಬಾಷ ಬಳಕೆಯ ಶುದ್ದತೆಯ ಬಗ್ಗೆ ತಿಳಿಸುತ್ತ, ಸುಚೇತನರ ಬಾಷಣ ಸಲಲಿತವಾಗಿತ್ತು ಅಲ್ಲದೆ ಪದಗಳ ಪುನರುಚ್ಚಾರ ಇಲ್ಲವೆ ಇಲ್ಲ ಎನ್ನುವಂತಿದ್ದು ಶುದ್ದವಾಗಿತ್ತೆಂದು ತಿಳಿಸಿದರು.
  ನಂತರ ಶ್ರೀಮತಿ ಪದ್ಮಶ್ರೀ ಯವರ ಬಾಷಣದ ಬಗ್ಗೆ ತಿಳಿಸುತ್ತ ವಾಕ್ಯದಿಂದ ವಾಕ್ಯಕ್ಕೆ ಹೆಚ್ಚು ವಿರಾಮ ಕೊಡುತ್ತ ಇದ್ದಿದ್ದು ಬಾಷಣದ ಲೋಪವೆಂದೆ ತಿಳಿಸಿದ ಇವರು ಆದರೆ ಶ್ರೀಮತಿ ಪದ್ಮಶ್ರೀಯವರ ಬಾಷಣದಲ್ಲಿನ ಪದಗಳ ಉಚ್ಚರ ಸ್ವಷ್ಟವಾಗಿದ್ದು 'ಅ' ಕಾರ 'ಹ' ಕಾರ ಲೋಪಗಳಂತ ಯಾವುದೆ ಲೋಪವಿರದೆ ಶುದ್ದವಾಗಿತ್ತೆಂದು ತಿಳಿಸಿದರು.


ನಂತರ ವಾಕ್ಪಥ ಕ್ಕೆ ಹೊಸ ಆಗಮನವಾದ ರಮೇಶ್ ರವರು ಮಾತನಾಡಿ ತಮಗೆ ಗೋಷ್ಠಿ  ಸಂತಸ ತಂದಿತೆಂದು ತಿಳಿಸಿ ಭಾವನೆಗಳ ಮನಸಿನ ಸ್ಥಾಯಿಯ ಮೇಲೆ ನಿರ್ದರವಾಗುವದೆಂದು ತಿಳಿಸಿದರು.


 ನಂತರ ಗೋಷ್ತಿಗೆ ಮಂಗಳ ಹಾಡುತ್ತ ಮಾತನಾಡಿದ ನಿರ್ವಾಹಕ ಸುನಿಲ್ ದಾಸಪ್ಪನವರು ಗೋಷ್ಠಿಯ ಯಶಸ್ಸು ತಮಗೆ ಸಂತಸ ತೃಪ್ತಿ ತಂದಿದೆ ಎಂದರು. ಬಾಷಣದ ವಿಷಯಗಳು ಅವಗಳಲ್ಲಿನ ವೈವಿದ್ಯತೆ ವಿವರಿಸುತ್ತ ಖುಷಿ ಬಿದ್ದರು. ಅಲ್ಲದೆ ಆಶುಬಾಷಣದ ವಿಷಯ ತಮಗೆ ಸಂತಸ ತಂದಿದೆ ಎಂದ ಅವರು , ತಮ್ಮ  ನೇತೃತ್ವದಲ್ಲಿನ ಗೋಷ್ತಿ ಪರಿಪೂರ್ಣ ಯಶಸ್ಸು ಕಂಡಿತೆಂದು ತಿಳಿಸಿದರು.


 ಮುಂದಿನ   ಗೋಷ್ಠಿಯ ನಿರ್ವಹಣೆಯನ್ನು  ಶ್ರೀ ಪ್ರಸನ್ನ ಕಲಕರ್ಣಿಯವರು ವಹಿಸಿಕೊಂಡರು


 ಗೋಷ್ಥಿಯ  ವರದಿ : ಪಾರ್ಥಸಾರಥಿ ಎನ್

Sunday 20 November, 2011






ವಾಕ್ಪಥ ಸಮಾನ ಮನಸ್ಕರೆಲ್ಲರಿಗೂ ಒಂದು ವಿಶೇಷ ಸಿಹಿ ಸುದ್ದಿ
ಏನು ಗೊತ್ತೇ
ನಮ್ಮ ವಾಕ್ಪಥದ ಮೊದಲ ವಾರ್ಷಿಕೋತ್ಸವಕ್ಕೆ "ಅಭ್ಯಾಸ" ದ ಮೆರುಗು
ಅಭ್ಯಾಸದ ನಿರ್ವಾಹಕ ಶ್ರೀಯುತ ರಾಜಶೇಖರ ಮಾಲೂರು ಮತ್ತು ರೂವಾರಿ  ಡಾ ಸನ್ಮಾನ್ಯ ಎಚ್ ಎಸ್ ವೀಯವರೂ
ಫೆಬ್ರವರಿಯ ನಮ್ಮ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದಾರೆ
ಇದಕ್ಕಾಗಿ ವಾಕ್ಪಥ ತಂಡವು ಇವರಿಬ್ಬರಿಗೂ ಧನ್ಯವಾದಗಳನ್ನರ್ಪಿಸುತ್ತಿದೆ
ಏನಂತೀರಿ ಗೆಳೆಯರೇ?
ವಾಕ್ಪಥ

ಭಾಷಣವನ್ನು ನಿರರ್ಗಳವಾಗಿ ತಪ್ಪಿಲ್ಲದೆ ನಿಗದಿತ ಸಮಯದಲ್ಲಿ ವ್ಯವಸ್ಥಿತ ರೀತಿಯಲ್ಲಿ ಆಕರ್ಷಣೀಯವಾಗಿ ಪರಿಣಾಮಕಾರಿಯಾಗಿ ಮಂಡಿಸುವದನ್ನು ಕಲಿಸುವ ಶಾಲೆಯೇ ವಾಕ್ಪಥ.

ಇದಕ್ಕಾಗಿ ಒಂದು ತರಗತಿ ಅಥವಾ ಗೋಷ್ಟಿಯನ್ನು ಸಮಯವನ್ನು ನಿಗಧಿತವಾಗಿರಿಸಿಕೊಂಡು ಒಂದು ಸೂತ್ರದಲ್ಲಿ ಕಟ್ಟಿಡಲಾಗುತ್ತದೆ. ಮೊದ ಮೊದಲು ವಿಷಯವನ್ನು ಅಷ್ಟಾಗಿ ಗಮನದಲ್ಲಿರಿಸಿಕೊಳ್ಳದೇ ಬರೇ ಧ್ವನಿ ಶೈಲಿ ರೀತಿಯನ್ನೇ ಮುಖ್ಯವಾಗಿರಿಸಿಕೊಂಡು ಭಾಷಣಕಾರರಿಗೆ ಅವಕಾಶ ನೀಡಲಾಗುತ್ತದೆ. ನಿರ್ವಾಹಕ ಒಂದು ಪೂರ್ವನಿಯೋಜಿತ ವ್ಯವಸ್ಥಿತ ರೀತಿಯಲ್ಲೇ ಕಾರ್ಯಕ್ರಮವನ್ನು ನಿರ್ವಹಿಸುತ್ತಾ ಸಮಯ ಪಾಲಕರ ಹಾಗೂ ವಿಮರ್ಶಕರ ಮತ್ತು ಭಾಷಾ ಶುದ್ಧಿಗಾರರ ಸಲಹೆ ಸಹಕಾರಗಳಿಂದ ಭಾಷಣಕಾರರ ಭಾಷಣವನ್ನು ಒರೆ ಹಚ್ಚಿ ಇನ್ನಷ್ಟು ಪರಿ ಪಕ್ವ ಗೊಳಿಸುವ ನಿಟ್ಟಿನಲ್ಲಿ ಅವರನ್ನು ಉದ್ದೀಪಿಸುತ್ತಾನೆ.

ಹೀಗೆ ಪ್ರತಿ ಗೋಷ್ಟಿಯೂ ಪ್ರತಿಯೊಬ್ಬ ವಾಕ್ಪಥಿಕರಲ್ಲಿ ಹೊಸ ಹೊಸ ಭಾಷಣಕಾರರು ವಿಮರ್ಶಕಾರರು ಭಾಷಾ ಶುದ್ಧಿಗಾರರು ಮತ್ತು ಸಮಯಪಾಲಕರನ್ನು ಸೃಷ್ಟಿಸುತ್ತಾ, ಒರೆಗೆ ಹಚ್ಚಿಕೊಳ್ಳುತ್ತಾ ಪರಿಪಕ್ವಗೊಳಿಸುತ್ತಾ ಪ್ರತಿ ಹೆಜ್ಜೆಯನೂ ಪ್ರಗತಿಯತ್ತ ಕೊಂಡೊಯ್ಯುತ್ತದೆ.

ವಾಕ್ಪಥದ ಸಾಫಲ್ಯವೇ ಹೀಗೆ ಮುನ್ನುಗ್ಗುತ್ತಿರುವ ಪ್ರಗತಿಯ ಪ್ರತಿ ಹೆಜ್ಜೆಯಲ್ಲೇ ಅಡಗಿದೆ.

೧. ನಿರ್ವಾಹಕ:

ಇಡೀ ಕಾರ್ಯಕ್ರಮದ ಕೀಲಿ ಕೈ ಆದ ನಿರ್ವಾಹಕ ಒಂದು ರೀತಿಯಲ್ಲಿ ಸಮಯ ಪಾಲಕನೂ ಹೌದು . ಅಯಾ ದಿನದ ಕಾರ್ಯಕ್ರಮವನ್ನು ಆರಂಭದಿಂದ ಕೊನೆಯ ( ವಂದನಾರ್ಪಣೆಯ ) ವರೆಗೆ ಅಚ್ಚುಕಟ್ಟಾಗಿ ನಿಗದಿತವಾಗಿ ನಡೆಸುವ ಭಾರ ಈತನದ್ದೇ. ಗೋಷ್ಟಿಯ ಉದ್ದೇಶ ಆಶಯಗಳನ್ನು ತಿಳಿಸುತ್ತಾ ಆರಂಭಿಸುವ ಆತ ಭಾಷಣಕಾರರನ್ನು ಸ್ವತಃ ಅಥವಾ ಬೇರೆಯವರಿಂದಲೋ ಪರಿಚಯಿಸುತ್ತಾನೆ.ವಾಕ್ಪಥದ ಅಂದಿನ ಕಾರ್ಯಕ್ರಮಗಳನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಸಮಯದ ಚೌಕಟ್ಟಿನಲ್ಲಿರಿಸಿ ಪ್ರತಿಯೊಂದೂ ವಿಷಯವನ್ನು ಗಮನದಲ್ಲಿರಿಸಿಕೊಂಡು ನಿರ್ವಹಿಸುತ್ತಾನೆ. ಅವಶ್ಯಕತೆ ಇದ್ದಲ್ಲಿ ತಾನೇ ಸ್ವತಃ ವಿಮರ್ಶೆಯನ್ನೂ ಮಾಡಿ, ಅನಿರೀಕ್ಷಿತ ಸಂಧರ್ಭಗಳನ್ನು ಸಂಭಾಳಿಸುತ್ತಾನೆ ಮತ್ತು ಕಾರ್ಯಕ್ರಮವನ್ನು ಅಂದ ಗಾಣಿಸಿಕೊಡುತ್ತಾನೆ.

ಈತನ ಮುಖ್ಯ ಕರ್ತವ್ಯಗಳು:
೧. ಸಮಯದ ಸದುಪಯೋಗ
೨. ವ್ಯವಸ್ಥಿತ ಕಾರ್ಯ ಪಾಲನೆ
೩. ಗೋಷ್ಟಿಯ ಆರಂಭಿಕ, ಭಾಷಣಕಾರರ ಪರಿಚಯ, ಮತ್ತು ಮುಕ್ತಾಯ ವಂದನಾರ್ಪಣೆ
೪. ಸಮಯಪಾಲಕರನ್ನು, ವಿಮರ್ಶಕರನ್ನು ಭಾಷಾ ಶುದ್ಧಿಗಾರರನ್ನು ಆಹ್ವಾನಿಸುವುದು,
೫. ಅನಿರೀಕ್ಷಿತ ಸಾಂಧರ್ಬಿಕ ವಿಷಯಗಳನ್ನು ಸಂಭಾಳಿಸುವುದು

೨.ಭಾಷಣ ಕಾರ

ನಿಗದಿತ ವಿಷಯವನ್ನು, ನಿಗದಿತ ಸಮಯದಲ್ಲಿ ಪರಿಣಾಮಕಾರಿಯಾಗಿ ಆಕರ್ಷಕವಾಗಿ ಮಂಡಿಸುವುದೇ ಭಾಷಣಕಾರ ಮುಖ್ಯ ಧ್ಯೇಯ. ತನ್ನ ಮಾತಿನ ಪಾಂಡಿತ್ಯದಲ್ಲೇ ಸಭಿಕರನ್ನು ಸೂಜಿಕಲ್ಲಿನಂತೆ ಆಕರ್ಷಿಸಿ ಧ್ವನಿಯ, ಶೈಲಿಯ, ಓಘವನ್ನು ಮಂಡಿಸುವ ಸರಿಯಾದ ಕ್ರಮದಲ್ಲಿ ಅರಿತುಕೊಂಡು ಮಂಡಿಸುವುದೇ ಮುಖ್ಯ ಕರ್ತವ್ಯ.ಪ್ರತಿ ಬಾರಿಯ ಭಾಷಣದಲ್ಲಿನ ಕುಂದುಕೊರತೆಗಳನ್ನು ತನ್ನನ್ನು ತಾನೇ ಒರೆಗೆ ಹಚ್ಚಿ ನೋಡಿಕೊಂಡು ಮುಂದುವರಿಯುತ್ತಾನೆ. ಭಾಷಣಕಾರನ ಸಮಯ ಮತ್ತು ಬಾಷೆಯ ಶುದ್ಧಿಯನ್ನು ಸಮಯಪಾಲಕ ಮತ್ತು ಭಾಷಾ ಶುದ್ಧಿ ಕಾರರು ವಿಮರ್ಶಿಸಿ ವರದಿ ಸಲ್ಲಿಸಿರುತ್ತಾರೆ. ನಿಜವಾದ ಭಾಷಣಕಾರ ತನ್ನ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಲು ಇದು ಸಹಕಾರಿಯಾಗಿರುತ್ತದೆ. ಅಲ್ಲದೇ ಹೀಗೆ ಎಲ್ಲಾ ಕೋನದಿಂದಲೂ ಪರಿಶೀಲಿಸುವ ಕೆಲಸ ನಡೆದಿರುವಾಗ ವಿಷಯದ ಪಾಂಡಿತ್ಯ ಅಥವಾ ಹರಹನ್ನು ವಿಸ್ತರಿಸಿಕೊಳ್ಳಲೂ ಇದು ಅವನಿಗೆ ನೆರವಾಗುತ್ತದೆ.

೩.ಸಮಯ ಪಾಲಕ

ಭಾಷಣಕಾರರು ಮತ್ತು ವಿಮರ್ಶಕರಿಗೆ ಕೊಟ್ಟ ನಿಗಧಿತ ಅವಧಿಯನ್ನು ಗಮನಿಸಿ, ಅದನ್ನು ವ್ಯವಸ್ಥಿತವಾಗಿ ತನ್ನಲ್ಲಿದ್ದ ಮೂರು ಬಾವುಟಗಳಿಂದ ಭಾಷಣಕಾರರು ಮತ್ತು ವಿಮರ್ಶಕರಿಗೆ ತಿಳಿಸುವುದು ( ಮೊದಲು ಹಸಿರು ನಂತರ ಹಳದಿ ತೋರಿಸಿ ಸಮಯದ ಅವಧಿ ಮೀರಿತ್ತಲೇ ಕೆಂಪು ಬಾವುಟವನ್ನು ಎತ್ತಿ ತೋರಿಸುತ್ತಾ ಅವರ ಭಾಷಣ ಮುಗಿಯುವ ವರೆಗೆ ಎತ್ತಿ ಹಿಡಿದು ತೋರಿಸುವುದೇ ) ಸಮಯ ಪಾಲಕನ ಆದ್ಯ ಕರ್ತವ್ಯ. ಇವು ಭಾಷಣಕಾರರಿಗೆ ತಮ್ಮ ವಿಷಯಗಳನ್ನು ಸರಿಯಾದ ರೀತಿಯಲ್ಲಿ ಅಂತ್ಯಗೊಳಿಸಲು ಅನುವಾಗುತ್ತವೆ. ಮತ್ತು ಕೊನೆಯಲ್ಲಿ ನಿರ್ವಾಹಕರ ಅಪ್ಪಣೆಯಂತೆ ವಿಮರ್ಶೆ ಅಥವಾ ಭಾಷಣಕ್ಕೆ ಎಷ್ಟು ಕಾಲಾವಕಾಶ ತೆಗೆದು ಕೊಂಡರು ಎನ್ನುವ ವರದಿಯನ್ನು ಸಭೆಗೆ ಸಲ್ಲಿಸುತ್ತಾನೆ.

೪. ಭಾಷಾ ಶುದ್ಧಿಗಾರ

ಸಮಯ ಪಾಲಕರಂತೆಯೇ ಇರುವ ಇನ್ನೊಂದು ಪರಿಣಿತ. ಈತನ ಕೆಲಸ ಭಾಷಣಕಾರನ ಮಾತುಗಳಲ್ಲಿನ ಕೊರತೆಯನ್ನು ವಿಮರ್ಶಿಸುವುದು. ಉದಾಹರಣೆಗೆ ಅ ಮತ್ತು ಹ ಉಚ್ಛಾರಣೆಯಲ್ಲಿನ ವ್ಯತ್ಯಾಸ, ಕೆಲವು ಶಬ್ದಗಳ ಪುನರಾವರ್ತನೆ.. ಇತ್ಯಾದಿ. ಇವನ ವಿಮರ್ಶೆಯ ಇನ್ನುಳಿದ ಭಾಗಗಳೆಂದರೆ:

೧. ಧ್ವನಿ ಏರಿಳಿತ
೨. ಓಘ
೩. ಶೈಲಿ
೪. ವ್ಯಾಕರಣ
೫. ಭಾಷೆಯಲ್ಲಿನ ಹಿಡಿತ
೬. ವಿಷಯದ ಪಾಂಡಿತ್ಯ
೭. ಕ್ಲಪ್ತತೆ
೮. ಆರಂಭ ಮತ್ತು ಮುಕ್ತಾಯ.

೫. ವಿಮರ್ಶಕ
ಭಾಷಾ ಶುದ್ಧಿಗಾರರಂತೆಯೇ ಅಷ್ಟೇ ಪ್ರಾಮುಖ್ಯ ಹೊಂದಿದ ಪರಿಣಿತ ಕೆಲಸವಿದು. ಭಾಷಣ ಕಾರರ ಭಾಷಣದೊಳಗಿಳಿಯದೇ ಹೊರಗಿನಿಂದ ಭಾಷಣವನ್ನು ತನ್ನ ವಿಮರ್ಶೆಯ ವರೆಗಲ್ಲಿನಲ್ಲಿಡಬೇಕಾದಂತಹ ಪಾಂಡಿತ್ಯ, ಅರಿವು ಇವರಿಗಿರಬೇಕಾದದ್ದು ಅವಶ್ಯಕ. ನಂತರ ಸಮಯ ಬಂದಾಗ ಇವುಗಳನ್ನು ನಿಗದಿತ ಸಮಯದಲ್ಲಿ ಸಭೆಗೆ ವರದಿ ನೀಡಬೇಕಾಗುತ್ತದೆ. ಈತನ ವಿಮರ್ಶೆಯ ಮುಖ್ಯ ಹರಹುಗಳು:
೧, ಸರಾಸರಿ ಒಟ್ಟಾರೆಯಾದ ನಿಲುವು.
೨. ಕುಂದು ಕೊರತೆಗಳು
೩. ಶೈಲಿ/ ಧ್ವನಿ
೪. ಒಳ್ಳೆಯ ಅಂಶಗಳು
೫. ಭಾಷಣ ಪಕ್ವವಾಗಲು ಅನುಸರಿಸಬೇಕಾದ ವಿಧಾನಗಳು