ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Friday 28 October, 2011

ಕನ್ನಡ ಓದುವ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ.... ವಾಕ್ಪಥದ ಗುರುತರ ಹೆಜ್ಜೆ


 ಕನ್ನಡ ಓದುವ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ.... ವಾಕ್ಪಥದ ಗುರುತರ ಹೆಜ್ಜೆ
 
ಸೃಷ್ಟಿ ಕಲಾಲಯ ಸಂಸ್ಥೆ ಕಳೆದ ೩ ವರ್ಷಗಳಿಂದ ಪುಸ್ತಕ ಪರಿಷೆ ನಡೆಸುತ್ತಿದ್ದು ಇದೀಗ ನಾಲ್ಕನೆಯ ಪರಿಷೆಗೆ ಸಜ್ಜಾಗುತ್ತಿದೆ.ಬಂದವರೆಲ್ಲರೂ ಒಂದು ಪುಸ್ತಕವನ್ನು ಉಚಿತವಾಗಿ ಕೊಂಡೊಯ್ಯಬಹುದು. ನಮ್ಮ ಪುಸ್ತಕಗಳನ್ನು ಇತರರು ಮತ್ತು ಅವರ ಪುಸ್ತಕಗಳನ್ನು ನಾವು ಓದುವ ಮೂಲಕ ಇಬ್ಬರೂ ಪುಸ್ತಕ ಸಂಬಂಧಿಗಳಾಗುವ ಅವಕಾಶ ಸಿಗಲಿದೆ.

 
ಈಸಾರಿ ತಮ್ಮ ಮಹತ್ತರ ಯೋಜನೆಯೊಂದರಲ್ಲಿ ವಾಕ್ಪಥವನ್ನು ಸಕ್ರಿಯವಾಗಿ ಪಾಲುಗೊಳ್ಳಲು ಅವಕಾಶ ಕಲ್ಪಿಸಿ ಉಜ್ವಲ ಭವಿಷ್ಯವನ್ನೂ ಗುರುತರ ಜವಾಬ್ದಾರಿಯನ್ನೂ ಪಡೆದ ಇದೇ ಅಕ್ಟೋಬರ್ ಮೂವತ್ತರಂದು ಸೃಷ್ಟಿ ವೆಂಚರ್ಸ್ ನಡೆಸುತ್ತಿರುವ ಪುಸ್ತಕ ಪರಿಷೆಯಲ್ಲಿ ವಾಕ್ಪಥದ ಬ್ಯಾನರಿನಡಿಯಲ್ಲಿ ಇಡೀ "ಪುಸ್ತಕ ಪರಿಷೆ" ಕಾರ್ಯಕ್ರಮದ ಮೇಲ್ವಿಚಾರಣೆಯ ಹೊಣೆ, ಅದೂ ಇದಕ್ಕೆಂದೇ ವಿಷೇಷವಾಗಿ ಆಯೋಜಿಸಲ್ಪಟ್ಟ ಮಂಚದಲ್ಲಿ ಅದೂ ಬೆಳಗ್ಗೆಯಿಂದ ಸಂಜೆಯವರೆಗೆ ಇಡೀ ದಿನ ." ಇವೆಂಟ್ ಮೆನೇಜ್ಮೆಂಟ್!!!" ಇದಲ್ಲವೇ ವಾಕ್ಪಥದ ಮೇಲಿನ ಭರವಸೆ ಮತ್ತು ಪ್ರೀತಿ. .
 
ವಾಕ್ಪಥ - ೮ ನೇ ಹೆಜ್ಜೆ.
ವಾಕ್ಪಥದ ಎಂಟನೆಯ ಹೆಜ್ಜೆಯು,೩೦/೧೦/೨೦೧೧ ,ಭಾನುವಾರ ಬೆಳಿಗ್ಗೆ ೧೨.೦೦ ಕ್ಕೆಮೂಡಿ ಬರಲಿದೆ.
ಸ್ಥಳ:  ವಾಲಿಬಾಲ್ ಸರ್ಕಲ್, ಪೋಲೀಸ್ ಸ್ಟೇಶನ್ ಸಮೀಪ ,ಬಸವನಗುಡಿ, ಬೆ೦ಗಳೂರು.
ಕಾರ್ಯಕ್ರಮದ ವಿವರ:
ಗೋಷ್ಠಿಯ ನಿರ್ವಹಣೆ: ಬೆಳ್ಳಾಲ ಗೋಪೀನಾಥ ರಾವ್
ಗೋಷ್ಠಿಯ ಆರ೦ಭ:  ಬೆಳಿಗ್ಗೆ ೧೨-೦೦ಕ್ಕೆ
ಪ್ರಸ್ತಾವನೆ, ಮುನ್ನುಡಿ, ಗೋಷ್ಠಿಯ ಜವಾಬ್ಧಾರಿಗಳ ವಿತರಣೆ, ಭಾಷಣಕಾರರ ಪರಿಚಯ ಇತ್ಯಾದಿಗಳನ್ನು ಬೆಳ್ಳಾಲ ಗೋಪೀನಾಥ ರಾವ್ ತಿಳಿಸುತ್ತಾರೆ.
 
ಈ ಸಾರಿಯ ವಿಶೇಷ ವೆಂದರೆ ಪ್ರತಿ ಭಾಷಣಕಾರರಿಗೆ 10 ನಿಮಿಷಗಳ ಸಮಯವಿರುತ್ತದೆ. 
 
 ಮೊದಲನೆಯ ಭಾಷಣ:  ಶ್ರೀ ಹರೀಶ್ ಆತ್ರೇಯ  ವಿಷಯ: ಓದಿನಿಂದ ವ್ಯಕ್ತಿ ಮತ್ತು ವ್ಯಕ್ತಿತ್ವದ ವಿಕಾಸ
ಎರಡನೆಯ ಭಾಷಣ: ಶ್ರೀ ಹರ್ಷ ಸಾಲಿಮಠ್    ವಿಷಯ: ಕನ್ನಡ ಓದುಗರ ಕೊರತೆಯನ್ನು ಎದುರಿಸುತ್ತಿದೆಯೇ?
 
ವಾಕ್ಪಥಿಕರ ಭಾಷಣದ ನ೦ತರ ವಿಮರ್ಶಕರಾಗಿ ಕೆಳಕ೦ಡವರು, ತಪ್ಪು ಒಪ್ಪುಗಳನ್ನು ತಿದ್ದುವ, ಎಲ್ಲಿ ಏನು ಸರಿ ಹೋದರೆ ಭಾಷಣ ಮತ್ತಷ್ಟು ಕಳೆ ಕಟ್ಟುತ್ತಿತ್ತು ಎನ್ನುವ ಮಹತ್ವದ ವಿಚಾರಗಳನ್ನು ತಿಳಿಸಲಿದ್ದಾರೆ.
ಮೊದಲನೆಯ ಭಾಷಣದ ವಿಮರ್ಶೆ: ಶ್ರೀ ಹೊಳೆನರಸೀಪುರ ಮಂಜುನಾಥ
ಎರಡನೆಯ ಭಾಷಣದ ವಿಮರ್ಶೆ:   ಶ್ರೀ ಪ್ರಭು
 
ಈ ಗೋಷ್ಠಿಯ ಸಮಯಪಾಲಕರಾಗಿ ಶ್ರೀ ರಾಮ ಮೋಹನ್ ಕಾರ್ಯ ನಿರ್ವಹಿಸಲಿದ್ದಾರೆ.
ವ್ಯಾಕರಣ ಶುದ್ಧಿ ಕಾರ್ಯವನ್ನು ಶ್ರೀ  ಜಯಂತ್ ರಾಮಾಚಾರ್. ನಿರ್ವಹಿಸಲಿದ್ದಾರೆ.
ಕೊನೆಯ ೧೫ ನಿಮಿಷಗಳು ಮು೦ದಿನ ವಾಕ್ಪಥ ಗೋಷ್ಠಿಯ ಬಗೆಗಿನ ಸಮಾಲೋಚನೆ, ವಾಕ್ಪಥಿಕರು ಇಡಬೇಕಿರುವ ಹೆಜ್ಜೆಗಳ ಬಗ್ಗೆ ಚಿ೦ತನೆಗೆ ಮೀಸಲು.
ಎಲ್ಲಾ ಆಸಕ್ತರೂ ಈ ಗೋಷ್ಠಿಯಲ್ಲಿ ಪಾಲ್ಗೊಳ್ಳಬಹುದಾಗಿದೆ.  ನೀವೂ ಬನ್ನಿ, ನಿಮ್ಮವರನ್ನೂ ಕರೆ ತನ್ನಿ, ನಿಮ್ಮ ಬರುವಿಕೆಯನ್ನು ಎದುರು ನೋಡುವ -
ವಾಕ್ಪಥ ತ೦ಡ.
ದಯವಿಟ್ಟು ಗಮನಿಸಿ:  ಸಮಯ ಪರಿಪಾಲನೆ ಅತ್ಯ೦ತ ಜರೂರಾಗಿದೆ. 
ಕಾಯುತ್ತಿದ್ದೇವೆ, ತಮ್ಮೆಲ್ಲರ ಬರವಿಗಾಗಿ ಪ್ರೀತಿಯಿಂದ...
ಬರುತ್ತೀರಲ್ಲವೇ

No comments:

Post a Comment