ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Sunday 8 May, 2011

ವಾಕ್ಪಥ ೩ ನೇ ಹೆಜ್ಜೆ - ಒಂದು ವರದಿ

ವಾಕ್ಪಥ ೩ ನೇ ಹೆಜ್ಜೆ - ಒಂದು ವರದಿ ಸಂಪದ ಓದುಗರಿಗಾಗಿ  ಮಾತ್ರ!

ಈ ಬಾನುವಾರ ಅಂದರೆ ೨೦೧೧ ರ ಮೇ ತಿಂಗಳ ೮ ರಂದು ವಾಕ್ಪಥ ತನ್ನ ಮೂರನೆ ಹೆಜ್ಜೆಯನ್ನು ಇಟ್ಟಿತು. ಎಂದಿನಂತೆ ಬೆಳಗ್ಗೆ ಹತ್ತು ಗಂಟೆಗೆಲ್ಲ ಕಾರ್ಯಕ್ರಮ. ನಾನು ಅಲ್ಲಿ ತಲುಪುವಾಗ ಸರಿಯಾಗಿ ಹತ್ತು ಗಂಟೆ. ಗಾಡಿಯನ್ನು ನಿಲ್ಲಿಸುತ್ತಿರುವಾಗಲೆ ಶ್ರೀ ಪ್ರಸನ್ನ ಕುಲಕರ್ಣಿಯವರು ತಮ್ಮ ವಾಹನದಲ್ಲಿ ಬಂದಿಳಿದರು. ನನಗೆ ನಾನೆ ಮೊದಲು ಬಂದನೆಂಬ ಸಂತೋಷ . ಪ್ರಸನ್ನರೊಂದಿಗೆ ಸೃಷ್ಟಿ ವೆಂಚರ್ ನ ಮೆಟ್ಟಿಲು ಹತ್ತುತ್ತ ಎರಡನೆ ಮಹಡಿಗೆ ಹೋಗುವಾಗ ಶ್ರೀ ಹರೀಶ್ ಎದುರಿಗೆ ಸಿಕ್ಕರು ಅವರು ಕೆಳಗೆ ಇಳಿಯುತ್ತಿದ್ದರು ಯಾವುದೊ ತುರ್ತಿನಲ್ಲಿ ಅನ್ನುವಂತೆ. ಸರಿ ಅನ್ನುತ್ತ ಮೇಲೆ ಹೋದೆವು ನಾನು ಮೊದಲು ಬಂದನೆಂಬ ನನ್ನ ಅಭಿಮಾನ ತುಸ್ ! ಎಂದಿತು. ಮೇಲೆ ಶ್ರೀಗೋಪಿನಾಥರವರು, ಶ್ರೀ ಮಂಜುರವರು ಶ್ರೀಪ್ರಬುರವರು ಶ್ರೀ ರಘು ಎಸ್ ಪಿ ರವರು ಎಲ್ಲರು ಕುರ್ಚಿಗಳನ್ನು ಹಾಕುತ್ತ, ತಮ್ಮ ಕ್ಯಾಮರ ಸರಿಮಾಡುತ್ತ ಅಂತಿಮ ಟಚ್ ಕೊಡುತ್ತಿದ್ದರು. ನಾನು ಎಂದಿನಂತೆ ಕಡೆಯಲ್ಲಿಯೆ ಹೋಗಿದ್ದೆ !

    ಕಾರ್ಯಕ್ರಮ ಸರಿಯಾದ ಸಮಯಕ್ಕೆ ಅಂದರೆ ೧೦.೧೫ ಪ್ರಾರಂಬ, ಈ ಬಾರಿ ಕಾರ್ಯಕ್ರಮದ ಸಾರಥ್ಯವನ್ನು ಹರೀಶ್ ವಹಿಸಿಕೊಂಡಿದ್ದರು. ಅವರು ಬಾನುವಾರದ ಮಾತೆಯರ ದಿನವನ್ನು ಮರೆಯದೆ ನೆನಪಿಸಿಕೊಂಡು ತಮ್ಮ ಮಾತು ಪ್ರಾರಂಬಿಸಿ. ನಡು ನಡುವೆ ಕವನಗಳನ್ನು ಓದುತ್ತ ಆಕರ್ಷಕವಾಗು ನಿರೂಪಣೆ ಪ್ರಾರಂಬಿಸಿದರು. ಈಬಾರಿ ಸಮಯದ ನಿರ್ವಹಣೆ ಬೆಳ್ಳಾಲ ಗೋಪಿನಾಥರದು ಅವರು ವಿಷೇಶವಾಗಿ ತಯಾರಿಸಿದ ಹಸಿರು, ಹಳದಿ ಕೆಂಫು ದಂಡಗಳನ್ನು ಹಿಡಿದು ಸಿದ್ದವಾಗಿದ್ದರು. ಮೊದಲ ಇಬ್ಬರ ಬಾಷಣ ಎಂಟು ನಿಮಿಷಗಳದು, ನಂತರ ರಘು ಎಸ್ ಪಿ ಯವರು ಹತ್ತು ನಿಮಿಷ ನಂತರ ತಲಾ ಎರಡು ನಿಮಿಷಗಳ ವಿಮರ್ಷೆ ಈ ರೀತಿ ನಿಗದಿಯಾಗಿತ್ತು.ಹರೀಶ್ ರವರು ಬಾಷಣ ಮಾಡಬೇಕಾದವರನ್ನು ಮೊದಲೆ ಪರಿಚಯಮಾಡಿಕೊಟ್ಟು ನಂತರ ಸ್ಟೇಜ್ ಮೇಲೆ ಕರೆಯುತ್ತಿದ್ದರು.

  ಮೊದಲ ಮಾತುಗಾರನಾಗಿ ಶ್ರೀ ಪಾರ್ಥಸಾರಥಿ ಯವರನ್ನು ಕರೆದರು [ಹಾಯ್ ಅದು ನಾನೆ !  :))) ]. ಅವರು ತೆಗೆದು ಕೊಂಡ ವಿಷಯ ಕಾಫಿಯಿಂದ ಸಂಸ್ಕೃತಿಯವರಿಗೆ ಎಂದು. ಅದುನಿಕ ಪರಿಕರಗಳು ಹಾಗು ಈಗಿನ ವಾತಾವರಣದಿಂದ ನಮ್ಮ ಸಂಸ್ಕೃತಿಯು ಹೇಗೆ ತನ್ನ ಮೂಲರೂಪವನ್ನು ಕಳೆದುಕೊಂಡು ಪಳಿಯುಳಿಕೆಯ ರೂಪವಾಗಿ ಉಳಿದಿದೆ ಎನ್ನುವ ವಿಷಯ. ತಕ್ಕ ಉದಾಹರಣೆಗಳೊಡನೆ ವಿವರಣೆ.

 ಎರಡನೆಯವರಾಗಿ ಶ್ರೀ ಪ್ರಸನ್ನ ಕುಲಕರ್ಣಿಯವರು ತಮ್ಮ ಪ್ರಸನ್ನ ವದನದೊಡನೆ ಬಂದು ತಮ್ಮ ಮಾತು ಪ್ರಾರಂಬಿಸಿದರು. ಅವರು ಸರ್ವಜ್ಝನವಚನಗಳಲ್ಲಿ ಒಗಟುಗಳು ಎಂಬ ವಿಷಯವನ್ನು ತಮ್ಮಗೆ ಕೊಟ್ಟ ಸೀಮಿತ ಎಂಟು ನಿಮಿಷದಲ್ಲಿ ಮನಮುಟ್ಟುವಂತೆ ವಿವರಿಸಿದರು. ಅದರಲ್ಲಿ ಹೇಳಿದ ಒಂದು ಒಗಟು 'ನೆತ್ತಿಯಿಂದ ತಿನ್ನುವನು ಸುತ್ತಲು ಚೆಲ್ಲುವನು ಎತ್ತಿದರೆ ಎರಡು ಬಾಗವಾಗುವನು' ನಾನು ಇದಾವ ಪ್ರಾಣಿ ಎಂದು ಚಿಂತಿಸುವಾಗ ಗೋಪಿನಾಥರು ಅದು ಬೀಸುವ ಕಲ್ಲು ಎಂದು ಹೇಳಿದರು.

ನಂತರ ಬಾಷಣಗಳ ವಿಮರ್ಷೆ. ಪಾರ್ಥಸಾರಥಿಯವರ ಬಾಷಣ ಶ್ರೀ ರಘು ರವರು ಮಾಡುವರೆಂದಾಗ ನನಗೆ ಒಳಗೆಲ್ಲೊ ಜಿಲ್ ! ಅವರು ಆಡಿದ ಮಾತಿನಲ್ಲಿದ ಕೆಲವು ವಿಷಯಗಳನ್ನು ಒಪ್ಪುತ್ತ, ತಮ್ಮ ವಿಮರ್ಷೆ ಮಾಡಿದರು. ನಂತರ ಎರಡನೆ ಬಾಷಣದ ವಿಮರ್ಷೆಯನ್ನು ಶ್ರೀ ಪ್ರಭುರರವರು ಮಾಡಿದರು.

ನಂತರ ರಘುರರವು ವಿಷೇಶ ಬಾಷಣದಲ್ಲಿ 'ಜೀವನದಲ್ಲಿ ಹಾಸ್ಯ'  ಎಂಬ ವಿಷಯತೆಗೆದು ಕೊಂಡು, ಬಾಷಣದಲ್ಲಿ ಹಾಸ್ಯವೆ ಪ್ರದಾನ ವಸ್ತುವಾದರು ತಾವು ನಗಿಸುವದಿಲ್ಲವೆಂದು, ತುಂಬಾ ಗಂಭೀರವಾಗಿ ವಿಷಯ ಪ್ರತಿಪಾದನೆ ಮಾಡುವದಾಗಿ ತಿಳಿಸಿದರು ಸಹ ತಮ್ಮ ಬಾಷಣದಲ್ಲಿ ಅನೇಕ ಸಾರಿ ನಮ್ಮೆಲ್ಲರ ಮುಖ ಅರಳುವಂತೆ ಮಾಡಿದರು. ಅವರು ಹೇಳುತ್ತಿದ್ದ ಅರಳಿಕಟ್ಟೆಯ ಹಳ್ಳಿಯವರು ಮಾತುಗಳು ಖಂಡೀತ ನಮ್ಮನ್ನೆಲ್ಲ ನಗಿಸಿತ್ತು.ನಂತರ ಅವರು ಡಿ.ವೀ.ಜಿ ರವರ ಪ್ರಸ್ಥಾಪದೊಂದಿಗೆ ಅವರ ಮಂಕುತಿಮ್ಮನ ಕವನಗಳನ್ನು ರಾಗಬದ್ದವಾಗಿ ಹೇಳುತ್ತ, ಅವರ ಪದ್ಯ 'ನಗುವುದು ತನ ಧರ್ಮ ನಗಿಸುವುದು ಪರಧರ್ಮ ... ನಗಿಸಿ ನಗುತ ಬಾಳುವ ವರವ ಬೇಡಿಕೊ' ಎಂದು ತಮ್ಮ ಮಾತು ಮುಗಿಸಿ ಸಾಕಷ್ಟು 'ಚಪ್ಪಾಳೆ' ಗಿಟ್ಟಿಸಿದರು.

ನಂತರ ಆಶುಬಾಷಣಗಳು ಶ್ರೀ ಮಂಜುನಾಥ ರವರು ನಡೆಸಿಕೊಟ್ಟರು ಈ ಬಾರಿ ಒಂದು ಬದಲಾವಣೆ ಒಂದೆ ವಿಷಯ ಎಲ್ಲರಿಗೂ ಕೊಡದೆ ಪ್ರತಿಯೊಬ್ಬರಿಗು ಬೇರೆ ಬೇರೆ ವಿಷಯಗಳು. ಮೊದಲು ಶ್ರೀ ಗೋಪಾಲ್ ರವರು ಅದುನಿಕ ಮಾತೆಯರ ಬಗ್ಗೆ ಮಾತನಾಡಿದರೆ.ನಂತರ ಬಂದ ಶ್ರೀಮದ್ವೇಶ್ ಒತ್ತಡದ ಕೆಲಸದ ಮದ್ಯೆ ಸಂಗೀತ ಹೇಗೆ ಪ್ರಭಾವ ಬೀರಬಲ್ಲದು ಎಂದು ತಿಳಿಸಿದರು. ಶ್ರೀಹರೀಶ್ ರವರು ದೇಶದಲ್ಲಿನ ಭ್ರಷ್ಟಾಚಾರದ ನಿರ್ಮೂಲನೆಗೆ ಯುವಜನ ಏನು ಮಾಡಬಹುದೆಂದು ತಿಳಿಸಿದರು. ನಂತರ ಕಲಾಲಯದ ನಿರ್ದೇಶಕರು ಶ್ರೀ ನಾಗರಾಜ್ ರವರು ಸ್ವತಃ ಬಂದು ಕಾರ್ಯಕ್ರಮದಲ್ಲಿ ಬಾಗವಹಿಸಿ ತಾವು ಇದರ ಸ್ಥಾಪನೆಗೆ ಬಿದ್ದ ಕಷ್ಟನಷ್ಟಗಳನ್ನು ನೆನಪಿಸಿ ಕೊಳ್ಳುತ್ತ, ವಾಕ್ಪಥದ ಬಗ್ಗೆ ಮೆಚ್ಚುತ್ತ ಅದುನಿಕ ತಂತ್ರಜ್ಞಾನ ನಮ್ಮ ಸಂಸ್ಕೃತಿಯನ್ನು ಮತ್ತಷ್ಟು ಉತ್ತಮಗೊಳಿಸಲು ಸಾದ್ಯವಿಲ್ಲವೆಂದು ಪ್ರತಿಪಾದಿಸಿದರು. ಶ್ರೀಗೋಪಿನಾಥರು ಸಂಗೀತಗಾರ ಸಿ. ಅಶ್ವಥ್ ರವರ ಬಗ್ಗೆ ಹೇಳಿದರೆ. ಕಡೆಯಲ್ಲಿ ಶ್ರೀಮಂಜುನಾಥ್ ರವರು ಅದುನಿಕ ಮಾತೆಯರ ಬಗ್ಗೆ ಪ್ರಸ್ಥಾಪ ಮಾಡುತ್ತ ತಮ್ಮ ಆಶುಬಾಷಣದ ಕಾರ್ಯಕ್ರಮ ಮುಗಿಸಿದರು.

ನಂತರ ಕಾರ್ಯಕ್ರಮ ಮುಗಿದಂತೆ, ಮುಂದಿನ ವಾಕ್ಪಥದ ಬಗ್ಗೆ ಚರ್ಚೆ, ಇದನ್ನು ಬೆಳೆಸಬಹುದಾದ ಬೇರೆ ಬೇರೆ ಆಯಾಮಗಳ ಬಗ್ಗೆ ಮಾತುಗಳು ಹೀಗೆ ಮುಂದುವರೆದಂತೆ.ಮುಂದಿನ ವಾಕ್ಪಥದ ಸಾರಥ್ಯವನ್ನು ಶ್ರೀ ಮಂಜುರವರಿಗೆ ವಹಿಸುವದರೊಂದಿಗೆ ಕಾರ್ಯಕ್ರಮ ಮುಗಿಯಿತು.

 ಒಂದು ಅಹ್ವಾನ : ಸಂಪದಿಗರೆ ಮುಂದಿನ ವಾಕ್ಪಥ ೪ ರ ಕಾರ್ಯಕ್ರಮದಲ್ಲಿ ನೀವು ಏಕೆ ಬಂದು ಬಾಗವಹಿಸಬಾರದು? ಬಾನುವಾರವನ್ನು ಸುಂದರವಾಗಿಸಿ ಮುಂದಿನ ತಿಂಗಳ ಎರಡನೆ ಬಾನುವಾರವನ್ನು ನಮ್ಮೊಡನೆ ಕಳೆಯಿರಿ.

ವರದಿ : ಪಾರ್ಥ ಸಾರಥಿ.

No comments:

Post a Comment