ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Monday 9 May, 2011

ವಾಕ್ಪಥದ ಮೂರನೆಯ ಹೆಜ್ಜೆ ಗೋಪೀನಾಥ ರಾಯರ ಅನಿಸಿಕೆ

ನವಿರಾದ ಅತ್ತುತ್ತಮ ಭಾವದ ಮಾತೃಭಾವನೆಯನ್ನು ಸ್ಮರಿಸುತ್ತಾ ನಮ್ಮ ಮೂರನೆಯ ಹೆಜ್ಜೆಯನ್ನು ಸಂಚಾಲನೆಗೊಳಿಸಿದರು ಆತ್ಮೀಯರೆಂದೇ ಆತ್ಮೀಯರಾಗಿದ್ದ ಹರೀಶ ಆತ್ರೇಯರವರು.

ಮೊದಲಿನ ಭಾಷಣಗಾರರಾಗಿದ್ದ ಪಾರ್ಥರವರು ಸಾಮಾನ್ಯವಾಗಿ ವಾಕ್ಪಥದ ಮೊದಲ ಭಾಷಣ ತಮ್ಮ ಸ್ವಪರಿಚಯದಿಂದಲೇ ಆರಂಭವಾಗ ಬೇಕಾದರೂ ( ಅದು ತಮ್ಮ ಮೊದಲ ಭಾಷಣದ ಅರಂಭದ ಸಭಾ ಕಂಪನದ/ ಅಥವಾ ಹೊಸತರಲ್ಲಿನ ಕಸಿವಿಸಿಯ ಹೋಗಲಾಡಿಸಲು ಮಾಡಿಕೊಂಡ ಒಡಂಬಡಿಕೆಯೆಂದರೂ ಸರಿ) ಸಂಸ್ಕಾರ, ಸಂಪ್ರದಾಯ, ಸಂಸ್ಕೃತಿಯ ಬಗೆಗೆ ತುಂಬಾ ಚಮತ್ಕಾರಿಕವಾಗಿ ತಮಗೆ ಮೀಸಲಿಟ್ಟದ್ದು ೮ ನಿಮಿಷವಾದರೂ ಸುಮಾರು ೬ ನಿಮಿಷ ನಿರರ್ಗಳವಾಗಿ ಮಾತನಾಡಿದ್ದರು. ಆದರೆ ಪಾರ್ಥರು ಒಂದೇ ಕಡೆ ನೋಡುತ್ತಾ ಮಾತನಾಡುವ ಬದಲು ಸಭಿಕರೆಲ್ಲರನ್ನು ನೋಡುತ್ತಾ ,ಮಾತನಾಡುತ್ತಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.
ಎರಡನೆಯ ಭಾಷಣಕಾರರಾದ ಪ್ರಸನ್ನ ಕುಲಕರ್ಣಿಯವರು ತಮ್ಮ ಪರಿಚಯವನ್ನು ಎರಡೇ ನಿಮಿಷಕ್ಕೆ ಸೀಮಿತಗೊಳಿಸಿ ಮುಂದಿನ ಆರು ನಿಮಿಷ ಆರು ಸೆಕುಂಡುಗಳನ್ನು ಸರ್ವಜ್ಞವಚನಗಳು ವಗಟುಗಳನ್ನೆಲ್ಲಾ ಬಳಸಿ ನೆರೆದಿದ್ದವಾಕ್ಪಟುಗಳನ್ನು ತಮ್ಮ ಸುಂದರ ಸುಲಲಿತ ಮಾತ್ವೈಖರಿಯಲ್ಲಿ ಹುದುಗಿಸಿಟ್ಟರು.
ಈ ಬಾರಿಯ ವಾಕ್ಪಥ ಪ್ರಭ್ಹು ಮೂರ್ತಿಯವರ ಹಾಜರಿಯಲ್ಲೇ ಆಗಿತ್ತು.
ಪಾರ್ಥರ ಭಾಷಣವನ್ನು ರಘುಅವರೂ, ಮತ್ತು ಕುಲ್ಕರ್ಣಿಯವರ ಭಾಷಣವನ್ನು ಪ್ರಭುರವರೂ ವಿಮರ್ಶಿಸಿದರು.
ಈ ಬಾರಿಯ ವಿಶೇಷ ಭಾಷಣ ರಘುರವರು ನಮ್ಮ ನಿತ್ಯ ಜೀವನದಲ್ಲಿ ಹಾಸ್ಯದ ಪಾತ್ರ ಎನ್ನುವ ವಿಷಯದಲ್ಲಿ ವಾಕ್ಪಟುಗಳನ್ನು ಗಂಭೀರವಾಗಿರಿಸುತ್ತೇನೆ ಎಂದೇ ನಗಿಸಿದರು. ಹಳ್ಳಿಯ ಅರಳೀಕಟ್ಟೆಯಲ್ಲಿನ ವಿಷಯ ಹಾಸ್ಯದ ಗಂಭೀರತೆಯಲ್ಲಿ ಹೇಗೆ ನಮ್ಮನ್ನು ಕಚಗುಳಿಯಿಡುತ್ತದೆ ಎನ್ನುವದನ್ನು ತುಂಬಾ ಚೆನ್ನಾಗಿ ವಿವರಿಸಿದರು. ನಮ್ಮ ಕರ್ನಾಟಕದ ಕನ್ನಡ ಭಾಷೆಯ ವೈವಿಧ್ಯತೆ ನಮ್ಮಲ್ಲಿನ ಪ್ರಾಂತ್ಯಗಳಲ್ಲಿಯೇ ಹೇಗೆ ಬದಲಾಗಿ ಹಾಸ್ಯದ ಸರಕಾಗಿಸುತ್ತದೆ ಎನ್ನುವುದನ್ನು ಸತ್ವಯುತವಾಗಿ ವಿವರಿಸಿದ್ದರು. ಅವರು ತಮ್ಮ ಭಾಷಣದಲ್ಲಿ ಅ ಮತ್ತು ಹ ಕಾರವನ್ನು ಬಳಸುವಾಗಿನ ಲೋಪವನ್ನು ಸರಿಪಡಿಸಿಕೊಂಡರೆ ಸಂಪೂರ್ಣವಾಗಿಸುತ್ತದೆ.

ಈ ಬಾರಿಯ ಮತ್ತೊಂದು ಉತ್ತಮ ಬೆಳವಣಿಗೆಯೆಂದರೆ ಎಲ್ಲಾ ಭಾಷಣಕಾರರೂ ತಮ್ಮ ತಮ್ಮ ಭಾಷಣದಲ್ಲಿ ಸಮಯದ ಉಪಯುಕ್ತತೆಯನ್ನು ಮನಗಂಡಿದ್ದು.

ಈ ಸಾರಿಯ ಆಶು ಭಾಷಣದ ನಿರ್ವಹಣೆಯನ್ನು ಹೊಳೆನರಸೀಪುರ ಮಂಜುರವರು ವಹಿಸಿಕೊಂಡಿದ್ದು, ಪ್ರತಿಯೋರ್ವ ಭಾಷಣಕಾರರಿಗೂ ಪ್ರತ್ಯೇಕ ವಿಷಯವನ್ನು ಆಗಿಂದಾಗ್ಗೆ ಕೊಡುತ್ತಾ ಹೊಸ ಸಂಚಲನೆಯನ್ನು ಸೃಷ್ಟಿಸಿದರು. ಇದಕ್ಕಾಗಿ ಪ್ರತ್ಯೇಕ ಪ್ರತ್ಯೇಕ ವಿಷಯದ ಚೀಟಿಯನ್ನು ಒಂದು ಗೋಲಕದಲ್ಲಿಟ್ಟು ಪ್ರತಿಯೊಬ್ಬರೂ ತಾವೇ ವಿಷಯವನ್ನು ಹೆಕ್ಕಿ ಭಾಷಣ ಮಾಡಿದರೆ ಸಮಯದ ಕ್ಲಪ್ತತೆಯನ್ನು ಹೆಚ್ಚಿಸಿಕೊಳ್ಳಬಹುದೇನೋ.

ಈ ಸಾರಿ ಸೃಷ್ಟಿ ವೆಂಚರ್ಸ್ ನ ಸೃಷ್ಟಿಕರ್ತ ನಾಗರಾಜ ನಾಮುಂದರೂ ನಮ್ಮ ವಾಕ್ಪಥದ ಒಟ್ಟಿಗೆ ಹೆಜ್ಜೆಗೂಡಿಸಿದ್ದು ವಿಶೇಷ. ಅವರು ವಾಕ್ಪಥವನ್ನು ಹೇಗೆ ಬೆಳೆಸಬಹುದುಎಂಬುದನ್ನೂ ಸೂಚ್ಯವಾಗಿ ಉದಾಹರಣೆ ಸಹಿತವಾಗಿ ವಿವರಿಸಿ ಹೇಳಿದರು.

ಮುಂದಿನ ದಿನಗಳಲ್ಲಿ ವ್ಯಾಕರಣ ಶುದ್ಧಿಯೂ ಮುಖ್ಯ ಅಂಶವಾಗಿ ಸೇರ್ಪಡಲಿ, ಸ್ವಪರಿಚಯದ ಹಂತ ದಾಟಿ ಹೊಸ ಹೊಸ ಅಂಶಗಳನ್ನು ಒಗ್ಗೂಡಿಸಿಕೊಳ್ಳಲಿ, ಹೊರಗಿನಿಂದ ವಿಶೇಷ ಅತಿಥಿಗಳನ್ನು ಇದಕ್ಕಾಗಿಯೇ ಆಮಂತ್ರಿಸುವತ್ತಲೂ ಯೋಚಿಸಬೇಕು.

ಇನ್ನೊಬ್ಬರನ್ನು ತಯಾರು ಮಾಡಲು ಈಗಲೇ ಯೋಚಿಸುವ ಬದಲು ನಮ್ಮಲ್ಲಿನ ಪ್ರತಿಯೊಬ್ಬರೂ ಸಂಪೂರ್ಣತೆಯನ್ನು ಹೊಂದುವತ್ತ ಕೇಂದ್ರೀಕರಿಸಿಕೊಳ್ಳುವುದು ಉತ್ತಮ ಬೆಳವಣಿಗೆಯತ್ತಲಿನ ಮೊದಲಹೆಜ್ಜೆ.

ವಾಕ್ಪಥದ ಮುಖ್ಯ ಉದ್ದೇಶವೆಂದರೆ ಪರಿಣಾಮಕಾರಿಯಾದ ಭಾಷಣಕಾರರನ್ನು ಸೃಷ್ಟಿಸಿವುದು, ಮೂರನೆಯ ಹೆಜ್ಜೆಯಲ್ಲಿಯೇ ಸರ್ವತೋಮುಖವಾಗಿ ರೂಪುಗೊಳ್ಳುತ್ತಿರುವ ವಾಕ್ಪಥ ಮುಂದಿನ ದಿನಗಳಲ್ಲಿ ಹೀಗೆ ಪ್ರತಿ ಬಾರಿಯೂ ತನ್ನ ಜತೆಗೆ ವಿಶೇಷಣಗಳನ್ನೇ ಸೃಷ್ಟಿಸಿಕೊಂಡು ಮಹತ್ತರವಾಗಿ ಬೆಳೆಯಲೆಂದು ಆಶಿಸೋಣ.
ಬೆಳ್ಳಾಲ ಗೋಪಿನಾಥ ರಾವ್

No comments:

Post a Comment