ವಾಕ್ಪಥ

ವಾಕ್ಪಥ ವಾರ್ಷಿಕೋತ್ಸವಕ್ಕೆ ಆತ್ಮೀಯ ಆಹ್ವಾನ ದಿನಾ೦ಕ ಫೆಬ್ರವರಿ ೧೨ ೨೦೧೨ ರ ಭಾನುವಾರದ೦ದು, ಸ್ಥಳ:- ಸೃಷ್ಟಿ ವೆ೦ಚರ್ಸ್, ಬಸವನ ಗುಡಿ

Sunday 13 November, 2011

ನವಮಾಸಗಳು ಪೂರೈಸಿದ ವಾಕ್ಪಥ

ವಾಕ್ಪಥ ಸೃಷ್ಟಿಯಾಗಿ ೯ ಹೆಜ್ಜೆಗಳು ಸಂದಿವೆ. ಅಕ್ಟೋಬರ್ ೩೦ ರಂದು ಪುಸ್ತಕ ಪರಿಷೆಯಲ್ಲಿ ನಡೆದ ವಾಕ್ಪಥ ಗೋಷ್ಠಿ ಎಂಟನೆ ಹೆಜ್ಜೆ ಆಗಿತ್ತು. ನಂತರದ ಗೋಷ್ಠಿ ಅಂದರೆ ವಾಕ್ಪಥ ಹೆಜ್ಜೆ ೯ ನೆನ್ನೆ ಅಂದರೆ ೧೩-೧೧-೨೦೧೧ ರಂದು ಸೃಷ್ಟಿ ವೆಂಚರ್ಸ್ ನಲ್ಲಿ ನಡೆಯಿತು. ಅದರ ಒಂದು ಸಣ್ಣ ವರದಿ.
೯ನೆ ಹೆಜ್ಜೆಯ ನಿರ್ವಾಹಕರು - ಶ್ರೀಯುತ ರಾಮ ಮೋಹನ್ ಅವರು
ಮೊದಲ ಭಾಷಣಕಾರರು - ಶ್ರೀಯುತ ಸುನೀಲ್ ದಾಸಪ್ಪನವರು
ಮೊದಲ ಭಾಷಣದ ವಿಮರ್ಶಕಾರರು - ಶ್ರೀಯುತ ಪ್ರಭುನಂದನ ಮೂರ್ತಿ ಅವರು
ಎರಡನೆಯ ಭಾಷಣಕಾರರು - ಶ್ರೀಯುತ ರಘು ಎಸ್.ಪಿ ಅವರು
ಎರಡನೆಯ ಭಾಷಣದ ವಿಮರ್ಶಕಾರರು - ಶ್ರೀಯುತ ಬೆಳ್ಳಾಲ ಗೋಪಿನಾಥರಾಯರು
ಆಶುಭಾಷಣ ನಿರ್ವಾಹಕರು - ಶ್ರೀಯುತ ಪಾರ್ಥಸಾರಥಿಯವರು
ಸಮಯ ಪರಿಪಾಲಕರು - ಶ್ರೀಯುತ ಜಯಂತ್ ರಾಮಾಚಾರ್
ಉಪಸ್ಥಿತರು - ಶ್ರೀಯುತ ಪ್ರಭುನಂದನ ಮೂರ್ತಿಯವರು, ಶ್ರೀಯುತ ಬೆಳ್ಲಾಲ ಗೋಪಿನಾಥರಾಯರು, ಹೊಸ ಪಥಿಕರು - ಶ್ರೀಯುತ ಸಚೆತನ್ ಭಟ್ ಹಾಗೂ ಶ್ರೀಮತಿ ಪದ್ಮಶ್ರೀ ಮೂರ್ತಿ.
ಸ್ಥಳ - ಸೃಷ್ಟಿ ವೆಂಚರ್ಸ್
ಸಮಯ - ೧೦-೧೫
ಸರಿಯಾದ ಸಮಯಕ್ಕೆ ಆಗಮಿಸಿದ್ದ ಪಥಿಕರನ್ನು ಸ್ವಾಗತಿಸುವ ಮೂಲಕ ನಿರ್ವಾಹಕರಾದ ರಾಮ್ ಮೋಹನ್ ಅವರು ಗೋಷ್ಟಿಗೆ ಚಾಲನೆ ನೀಡಿ ಅಂದಿನ ಕಾರ್ಯಕ್ರಮಗಳ ವಿವರ ನೀಡಿ ಸಮಯ ಪರಿಪಾಲಕರಾದ ಜಯಂತ್ ಅವರನ್ನು ತಮ್ಮ ಪಾತ್ರದ ಬಗ್ಗೆ ವಿವರಿಸಲು ವೇದಿಕೆಗೆ ಆಹ್ವಾನಿಸಿದರು. ಸಮಯ ಪರಿಪಾಲಕನ ಪಾತ್ರ ನಿರ್ವಹಿಸಿದ್ದ ಜಯಂತ್ ಅವರು ವೇದಿಕೆಗೆ ಬಂದು ತಮ್ಮ ಪಾತ್ರದ ಬಗ್ಗೆ ವಿವರಿಸಿ ಪ್ರತಿಯೊಬ್ಬರಿಗೂ ಎಷ್ಟೆಷ್ಟು ಸಮಯಾವಕಾಶ ಇದೆ ಎಂಬುದನ್ನು ತಿಳಿಸಿದರು. ಅದರ ಪ್ರಕಾರ ಪ್ರತಿಯೊಬ್ಬ ಭಾಷಣಕಾರರಿಗೆ ೧೦ ನಿಮಿಷದ ಕಾಲಾವಧಿ ಇರುತ್ತದೆ. ಎಂಟು ನಿಮಿಷಗಳ ನಂತರ ಹಸಿರು ಬಾವುಟ, ಒಂಭತ್ತನೇ ನಿಮಿಷಕ್ಕೆ ಹಳದಿ ಬಾವುಟ ಹಾಗೂ ಹತ್ತನೇ ನಿಮಿಷಕ್ಕೆ ಕೆಂಪು ಬಾವುಟ ತೋರಿಸಲಾಗುವುದು. ಹಾಗೆ ವಿಮರ್ಶಕರಿಗೆ ಮೂರು ನಿಮಿಷದ ಕಾಲಾವಧಿ ಇರುತ್ತದೆ. ಎರಡು ನಿಮಿಷಕ್ಕೆ ಹಸಿರು, ಎರಡೂವರೆ ನಿಮಿಷಕ್ಕೆ ಹಳದಿ ಹಾಗೆ ಮೂರನೇ ನಿಮಿಷಕ್ಕೆ ಕೆಂಪು ಬಾವುಟ ತೋರಿಸಲಾಗುವುದು. ನಂತರದಲ್ಲಿ ಆಶುಭಾಷಣದಲ್ಲಿ ಪ್ರತಿಯೊಬ್ಬರಿಗೂ ಎರಡು ನಿಮಿಷಗಳ ಅವಧಿ ಇರುತ್ತದೆ. ಒಂದನೇ ನಿಮಿಷಕ್ಕೆ ಹಸಿರು, ಒಂದೂವರೆ ನಿಮಿಷಕ್ಕೆ ಹಳದಿ ಹಾಗೂ ಎರಡನೇ ನಿಮಿಷಕ್ಕೆ ಕೆಂಪು ಬಾವುಟ ತೋರಿಸಲಾಗುತ್ತದೆ. ಇದರ ಉದ್ದೇಶ ಭಾಷಣಕಾರರ ಮಾತಿಗೆ ತಡೆ ಒಡ್ಡುವುದಲ್ಲ ಬದಲಿಗೆ ನಿಗದಿತ ಸಮಯದಲ್ಲಿ ಎಷ್ಟು ಪ್ರಭಾವಶಾಲಿಯಾಗಿ ಹಾಗೂ ಕ್ಲುಪ್ತವಾಗಿ ವಿಷಯ ಮಂಡಿಸುತ್ತಾರೆ ಎಂಬುದನ್ನು ತಿಳಿಸಲು ಅಷ್ಟೇ.
ಮೊದಲನೇ ಭಾಷಣ - ಶ್ರೀಯುತ ಸುನೀಲ್ ದಾಸಪ್ಪನವರು - ವಿಷಯ - ಖಗೋಳ ಶಾಸ್ತ್ರ
ಶ್ರೀಯುತ ಸುನೀಲ್ ಅವರು ಇಂಜಿನಿಯರಿಂಗ್ ಮುಗಿಸಿ ಪ್ರಸ್ತುತ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಸುನೀಲ್ ಅವರು ತಮ್ಮ ಭಾಷಣ ಶುರು ಮಾಡುತ್ತಾ ಅವರಿಗೆ ಬಹಳ ನೆಚ್ಚಿನ ವಿಷಯ ಹಾಗೂ ಆಸಕ್ತಿದಾಯಕ ವಿಷಯ ಖಗೋಳ ಶಾಸ್ತ್ರ ಎನ್ನ್ನುವುದನ್ನು ತಿಳಿಸಿ ಅದರಿಂದ ಅವರು ಇಂದು ಈ ವಿಷಯವನ್ನು ಆಯ್ದುಕೊಂಡಿರುವುದಾಗಿ ತಿಳಿಸಿಕೊಟ್ಟರು. ವಿಶ್ವದ ಉಗಮ ಹೇಗೆ? ನಾವೆಲ್ಲಾ ಎಲ್ಲಿಂದ ಬಂದೆವು? ನಾವು ಈಗ ವಿಶ್ವದಲ್ಲಿ ಯಾವ ಭಾಗದಲ್ಲಿದ್ದೇವೆ? ಹೀಗೆ ಮುಂತಾದ ಪ್ರಶ್ನೆಗಳು ಕಾಡುತ್ತವೆ. ಕೆಲವರ ಪ್ರಕಾರ ನಾವು ವಿಶ್ವದ ಮಧ್ಯಭಾಗದಲ್ಲಿದ್ದೇವೆ ಎಂದಾದರೆ ಇನ್ನು ಕೆಲವರ ವಾದ ನಾವು ವಿಶ್ವದ ಅಂತ್ಯ ಭಾಗದಲ್ಲಿದ್ದೇವೆ ಎಂದು. ಆದರೆ ನಾವು ವಿಶ್ವದ ಮಧ್ಯ ಹಾಗೂ ಅಂತ್ಯದ ನಡುವೆ ಇದ್ದೇವೆ. ವಿಶ್ವದ ಉಗಮ "ಬಿಗ್ ಬ್ಯಾಂಗ್" ಥಿಯರಿ ಪರ್ಕಾರ ಆಗಿದೆ ಎನ್ನತ್ತಾರೆ. ವಿಶ್ವದ ವಿಸ್ತಾರ ಬೆಳಕಿನ ವೇಗದಲ್ಲಿ ಆಗುತ್ತಿದೆಯೇ? ಬ್ಲಾಕ್ ಹೋಲ್ಸ್, "General Theory of ರೆಳತಿವಿಟಿ" Steven Hawkins ನ ಆವಿಷ್ಕಾರಗಳು, Hawkins Radiation , Dark Matters ಇನ್ನೂ ಮುಂತಾದ ಕುತೂಹಲಕಾರಿ ಮತ್ತು ಆಶ್ಚರ್ಯದಾಯಕ ವಿಷಯಗಳನ್ನು ಸುನೀಲ್ ಅವರು ತಿಳಿಸಿಕೊಟ್ಟರು. ಸುನೀಲ್ ಅವರು ತಮ್ಮ ಭಾಷಣಕ್ಕೆ ತೆಗೆದುಕೊಂಡ ಸಮಯ ೧೦ ನಿಮಿಷ ೨೦ ಸೆಕೆಂಡ್ ಗಳು. ಇವರ ಭಾಷಣದ ವಿಮರ್ಶಕರಾಗಿ ಬಂದು ಪ್ರಭು ಅವರು ಸುನೀಲ್ ಅವರ ಭಾಷಣದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅವರ ಭಾಷಣದ ಋಣಾತ್ಮಕ ಹಾಗೂ ಧನಾತ್ಮಕ ಅಂಶಗಳನ್ನು ತಿಳಿಸಿಕೊಟ್ಟರು. ಇವರು ತೆಗೆದುಕೊಂಡ ಸಮಯ ೩ ನಿಮಿಷ ೧೪ ಸೆಕೆಂಡ್ ಗಳು.
ಎರಡನೆಯ ಭಾಷಣ - ಶ್ರೀಯುತ ರಘು ಎಸ್.ಪಿ ಅವರು - ವಿಷಯ - ಇಂದಿನ ಶಾಲೆಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು.
ಶ್ರೀಯುತ ರಘು ಅವರು ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದು, ಜನಪದ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಉಳ್ಳವರಾಗಿದ್ದಾರೆ. ವಾಕ್ಪಥದ ಒಂದು ಮುಖ್ಯ ಅಂಗವಾಗಿದ್ದಾರೆ. ಹಾಗೆ ಇವರು ಒಂದು ಸಮಾಜ ಸೇವಾ ಸಂಸ್ಥೆಯಲ್ಲಿ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
"ಗುರುಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರಹ, ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುಭ್ಯೋ ನಮಃ" ಈ ಶ್ಲೋಕದಿಂದ ತಮ್ಮ ಭಾಷಣ ಶುರು ಮಾಡಿದ ರಘು ಅವರು ಮನುಷ್ಯನ ಬದುಕನ್ನ್ನು ಕಟ್ಟಿಕೊಡುವುದು ಶಾಲೆಗಳು. ಬದುಕನ್ನು ಕಳಿಸುವುದು ಸಮಾಜ. ಈ ಕೆಲಸವನ್ನು ಇಂದಿನ ಶಾಲೆಗಳು ಹಾಗೂ ಶಿಕ್ಷಕರು ನಿಜವಾಗಿಯೂ ಮಾಡುತ್ತಿದ್ದಾರ? ಒಂದು ಐದನೇ ತರಗತಿಯ ಮಗುವಿಗೆ ಶಿಕ್ಷಕಿ ಏಸುಕ್ರಿಸ್ತ ಶ್ರೀಮಂತ ದೇವರು ಎಂದು ಹೇಳುತ್ತಾಳೆ. ದೇವನೊಬ್ಬ ನಾಮ ಹಲವು ಎಂದು ತಿಳಿಸಬೇಕಾದ ಮಕ್ಕಳಿಗೆ ಇದೇನಾ ಮಕ್ಕಳಿಗೆ ಭೋಧಿಸುವುದು? ಸಾಮಾಜಿಕ ಅಸಮಾನತೆ ಉಂಟುಮಾಡುತ್ತಿದ್ದಾರೆ. CBSE , ICSE ಶಾಲೆಗಳಲ್ಲಿ ಇರುವ ಶಿಕ್ಷಕರು ನಿಜವಾಗಿಯೂ ವಿದ್ಯಾರ್ಜನೆ ಮಾಡುವ ವಿದ್ಯಾರ್ಹತೆ ಹೊಂದಿರುತ್ತಾರೆಯೇ. ಇತ್ತೀಚಿನ ದಿನಗಳಲ್ಲಿ ನಿರರ್ಗಳವಾಗಿ ಆಂಗ್ಲ ಮಾತಾಡಿದರೆ ಸಾಕು ಶಿಕ್ಷಕನಾಗಬಲ್ಲ. ಇಂಥಹ ಶಿಕ್ಷಕರು ಸಮಾಜಕ್ಕೆ ಎಂಥಹ ವಿದ್ಯಾರ್ಥಿಗಳನ್ನು ಕೊಡಬಲ್ಲರು? ಪೇಟೆಯ ಮಕ್ಕಳನ್ನು ರಜೆಗೆಂದು ಹಳ್ಳಿಗೆ ಕಲಿಸುವ ಕಾಲವೊಂದಿತ್ತು. ಈಗ ಆ ಪರಿಸ್ಥಿತಿ ಬದಲಾಗಿದೆ ಎಂಬುದನ್ನು ಉದಾಹರಣೆ ಸಮೇತ ತಿಳಿಸಿದರು. ಹಾಗೆಯೇ ಇಂದಿನ ಮಕ್ಕಳು ಶಾಲೆಯಲ್ಲಿ ಏನೇ "Assignment " ಕೊಟ್ಟರು ಅದಕ್ಕೆ ಉತ್ತರವನ್ನು ಪ್ರಾಯೋಗಿಕವಾಗಿ ಅರಿತು ಉತ್ತರಿಸುವ ಬದಲು ಎಲ್ಲದಕ್ಕೂ "ಗೂಗಲ್" ಮಾಮನನ್ನು ಮೊರೆಹೊಗುತ್ತಿರುವುದು ವಿಷಾದಕಾರ ಎಂಬುದನ್ನು ಸಹ ಉದಾಹರಣೆ ಸಮೇತ ತಿಳಿಸಿಕೊಟ್ಟರು.
ರಘು ಅವರು ತಮ್ಮ ಭಾಷಣಕ್ಕೆ ತೆಗೆದುಕೊಂಡ ಸಮಯ ೧೦ ನಿಮಿಷ ೨೦ ಸೆಕೆಂಡ್ ಗಳು. ಇವರ ಭಾಷಣವನ್ನು ವಿಮರ್ಶಿಸಲು ಬಂದ ಶ್ರೀಯುತ ಬೆಳ್ಳಾಲ ಗೋಪಿನಾಥರಾಯರು ರಘು ಅವರ ಭಾಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಾವು ರಘು ಅವರ ಭಾಷಣಕ್ಕೆ "ಬೀಸಣಿಗೆ" ಎಂದು ತಿಳಿಸಿ ಎಲ್ಲರ ಮುಖದಲ್ಲಿ ಮಂದಹಾಸವನ್ನು ಮೂಡಿಸಿದರು. ಇವರು ತೆಗೆದುಕೊಂಡ ಸಮಯ ೩ ನಿಮಿಷ ೨೧ ಸೆಕೆಂಡ್ ಗಳು.
ನಂತರ ಆಶುಭಾಷಣದ ನಿರ್ವಹಣೆ ಹೊತ್ತ ಶ್ರೀಯುತ ಪಾರ್ಥಸಾರಥಿಯವರು ನಾಲ್ಕು ಜನರನ್ನು ಆಯ್ದು ಒಬ್ಬೊಬ್ಬರಿಗೆ ಒಂದೊಂದು ವಿಷಯವನ್ನು ಕೊಟ್ಟರು
ಮೊದಲಿಗೆ ಶ್ರೀಯುತ ಪ್ರಭುನಂದನ ಮೂರ್ತಿಯವರು ಆಗಮಿಸಿ "ವಾಕ್ಪಥ ನಡೆದು ಬಂದ ದಾರಿ- ಅದರ ಹಿಂದಿರುವ ಚಾಲನಾ ಶಕ್ತಿಯ" ಬಗ್ಗೆ ೨ ನಿಮಿಷ ೦೯ ಸೆಕೆಂಡ್ ಗಳಲ್ಲಿ ವಿವರಿಸಿದರೆ ನಂತರ ಬಂದ ಬೆಳ್ಳಾಲ ಗೋಪಿನಾಥರಾಯರು "ಪುಸ್ತಕ ಪರಿಷೆಯಲ್ಲಿನ ವಾಕ್ಪಥ ಎಂಟನೆಯ ಹೆಜ್ಜೆ" ಬಗ್ಗೆ ೨ ನಿಮಿಷ ೧೦ ಸೆಕೆಂಡ್ ಗಳಲ್ಲಿ ವಿವರಿಸಿದರು. ನಂತರ ಬಂದ ಸುನೀಲ್ ದಾಸಪ್ಪನವರು "ವಾಕ್ಪಥಕ್ಕೆ ವ್ಯಾಕರಣ ಶುದ್ಧಿ - ಭಾಷಾ ಶುದ್ಧಿ ಅವಶ್ಯವೇ" ಎನ್ನುವ ವಿಷಯದ ಬಗ್ಗೆ ೧ ನಿಮಿಷ ೨೯ ಸೆಕೆಂಡ್ ಗಳಲ್ಲಿ ವಿವರಿಸಿದರೆ ನಂತರ ಬಂದ ರಘು ಅವರು "ವಾಕ್ಪಥದ ಬೆಳವಣಿಗೆ ಹೇಗೆ" ಎನ್ನುವುದರ ಬಗ್ಗೆ ೨ ನಿಮಿಷ ಹದಿನೇಳು ಸೆಕೆಂಡ್ ಗಳಲ್ಲಿ ವಿವರಿಸಿದರು.
ನಂತರದಲ್ಲಿ ಹೊಸಬರ ಅಭಿಪ್ರಾಯ ಮತ್ತು ಅನಿಸಿಕೆಯಲ್ಲಿ ಮಾತಾಡಿದ ಶ್ರೀಯುತ ಸಚೇತನ್ ಭಟ್ ಹಾಗೂ ಪದ್ಮಶ್ರೀ ಅವರು ವಾಕ್ಪಥದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ತಾವೂ ಸಹ ವಾಕ್ಪಥದ ಖಾಯಂ ಸದಸ್ಯರಾಗುವ ಅಭಿಲಾಷೆ ಹೊಂದಿರುವುದಾಗಿ ತಿಳಿಸಿಕೊಟ್ಟರು.
ಇಲ್ಲಿಗೆ ವಾಕ್ಪಥದ ೯ನೆ ಹೆಜ್ಜೆಗೆ ಅಧಿಕೃತ ಮುಕ್ತಾಯವಾಯಿತು. ಮತ್ತೆ ಭೇಟಿ ಮಾಡೋಣ ಹತ್ತನೇ ಹೆಜ್ಜೆಯಲ್ಲಿ. ಹತ್ತನೇ ಹೆಜ್ಜೆಯ ವಿವರಗಳು ಅತಿ ಶೀಘ್ರದಲ್ಲಿ ಮೂಡಿಬರಲಿದೆ. ವಾಕ್ಪಥಕ್ಕೆ ನೀವು ಬನ್ನಿ ನಿಮ್ಮವರನ್ನು ಕರೆತನ್ನಿ
ಕೊನೆಯದಾಗಿ ನೆನ್ನೆ ವಾಕ್ಪಥ ಮುಗಿಸಿಕೊಂಡು ಬರುವಾಗ ವಾಕ್ಪಥಕ್ಕೆ ಒಂದು ಅಡಿಬರಹ ಇದ್ದರೆ ಹೇಗೆಂದು ಆಲೋಚಿಸುತ್ತಿರುವಾಗ ಇದು ಹೊಳೆಯಿತು {ವಾ - ವಾಚಿಸುವ, ಕ - ಕಲೆಯನ್ನು, ಪ - ಪರಿಪಕ್ವಗೊಳಿಸುವ, ಥ/ತ - ತಾಣ}
ಧನ್ಯವಾದಗಳು

No comments:

Post a Comment